Daily Archive: January 30, 2025

17

ನಾನೇಕೆ ಬರೆಯುತ್ತೇನೆ ?

Share Button

ಒಂದು ಪದದ ಉತ್ತರ ಹೇಳಬೇಕೆಂದಿದ್ದರೆ, ನಾನು ಹೇಳುತ್ತಿದ್ದೆ – ಬರೆಯುವುದು ನನಗಿಷ್ಟ, ಅದಕ್ಕೇ ಬರೆಯುತ್ತೇನೆ – ಎಂದು. ಹಾಗಿಲ್ಲವಲ್ಲ, ಹಾಗಾಗಿ ಹೇಳುತ್ತೇನೆ. ತಿಂಗಳಿಗೊಮ್ಮೆ ಸಮಾನ ಮನಸ್ಕರು ಒಂದೆಡೆ ಸೇರಿ ಹೊಸದಾಗಿ ಬರೆದಿದ್ದ, ಸೃಷ್ಟಿಸಿದ್ದ, ಯಾವುದಾದರೊಂದು ಸಾಹಿತ್ಯ ಪ್ರಕಾರವನ್ನು ವಾಚಿಸಿ, ಇತರ ನವನವೀನ ತಾಜಾ ಸಾಹಿತ್ಯ ಪ್ರಕಾರವನ್ನು ಆಲಿಸಿ,...

5

ಆಹಾ……ಸೆರಗೇ…………!

Share Button

‘ಮಕ್ಕಳನಾಡಗೊಡ……ಮನೆಯಪೊಕ್ಕು ಉಕ್ಕುವ ಹಾಲುಬಿಡಗಕ್ಕನೆ ಕೊಂಡೋಡುವ ಬೆನ್ನಟಲು ನಕ್ಕುತ ಸೆರಗಬಿಡ…….ಸೆರಗಬಿಡ…….’ ಪುರಂದರದಾಸರು ಬರೆದಿರುವ ಈ ಹಾಡನ್ನು ಗುನುಗುತ್ತಿದ್ದಂತೆಯೇ ಸೆರಗಿನ ಬಗ್ಗೆಯೇ ಇರುವ ಮತ್ತೊಂದು ಹಾಡು ನೆನಪಾಯಿತು.‘ಹಾಲು ಉಕ್ಕಿತೋ ರಂಗ ಹಾದಿಯ ಬಿಡೋಹಾಲು ಬೇಕೆಂದರೆ ಸೆರಗ ಬಿಡೋ…..ರಂಗ ಸೆರಗ ಬಿಡೋ………’ ಹೌದು, ಆ ಕೃಷ್ಣನಿಗೆ ಗೊತ್ತಿತ್ತು ಸೆರಗನ್ನ ಹಿಡಿದು ಬಿಟ್ಟರೆ...

13

ಒರಳಿನ ಹೊರಳು ದಾರಿಯ ಗುರುತು

Share Button

‘ಚಟ್ನಿಪುರಾಣ’ವೆಂಬ ನನ್ನ ಬರೆಹವು ಸುರಹೊನ್ನೆಯಲ್ಲಿ ಪ್ರಕಟವಾದಾಗ ಓದುಗರೊಂದಿಗೆ ಲೇಖಕರೂ ಮೆಚ್ಚುಮಾತುಗಳನ್ನು ದಾಖಲಿಸಿದರು. ಅದರಲ್ಲೂ ಒರಳಿನಲ್ಲಿ ರುಬ್ಬಿ ಮಾಡುವ ಚಟ್ನಿಯನ್ನು ರುಚಿ ಕುರಿತಂತೆ! ಈ ನಿಟ್ಟಿನಲ್ಲಿ ಮೈಸೂರಿನ ಸಾಹಿತ್ಯ ದಾಸೋಹದ ರೂವಾರಿಗಳಲ್ಲೊಬ್ಬರೂ ಸ್ವತಃ ಸಾಹಿತಿಯೂ ಆದ ಶ್ರೀಮತಿ ಪದ್ಮಾ ಆನಂದ ಅವರು ನಮ್ಮ ಮನೆಯ ಒರಳುಕಲ್ಲಿನ ಚಟ್ನಿಯ ಸವಿಯನ್ನು...

7

ಕಾದಂಬರಿ : ತಾಯಿ – ಪುಟ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ವಿಷಯ ತಿಳಿದು ಗೌರಮ್ಮನಿಗೆ ಖುಷಿಯಾಯಿತು. ಅವರು ಚಿನ್ಮಯಿಗೆ ವಿಷಯ ತಿಳಿಸಿದರು.“ಅಮ್ಮಾ, ಚಂದ್ರಮೋಹನ್-ಅವರ ಹೆಂಡತಿ ಬರಲು ಒಪ್ಪಿದರೆ ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹೇಳಲು ಒಂದಿಬ್ಬರನ್ನು ತಯಾರು ಮಾಡಬೇಕಾಗುತ್ತದೆ. ಈ ವಿಚಾರ ನೀನು ಈಗಲೇ ಯಾರಿಗೂ ಹೇಳಬೇಡ.” ಮರುದಿನ ಶುಕ್ರವಾರ. ನಾಗಮಣಿ, ಗೋದಾಮಣಿ, ಮಧುಮತಿ...

10

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 14

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಸಮುದ್ರಕ್ಕೆ ಖಾರಾ ಸೇವ್ ಅರ್ಪಣೆ..…. 18/09/2024 18 ಸೆಪ್ಟೆಂಬರ್ 2024 ರ ಮುಂಜಾನೆ ಎಂದಿನಂತೆ ಸೂರ್ಯ ಉದಯಿಸಿದ. ‘ಹಾಲಾಂಗ್ ಬೇ ‘ಯಲ್ಲಿ ಕ್ರೂಸ್ ನಲ್ಲಿ ಆರಾಮವಾಗಿ ನಿದ್ರಿಸಿದ್ದ ನಮಗೆ ಎಚ್ಚರವಾಯಿತು. ಬಾಲ್ಕನಿಗೆ ಬಂದರೆ ಹಡಗಿನ ನಾಲ್ಕು ಕಡೆಯೂ ಕಾಣಿಸುವ ಶಾಂತವಾದ ಸಮುದ್ರ, ಅಲ್ಲಲ್ಲಿ ಕಾಣಿಸುವ...

14

ಕಮಲದ ಮೊಗದೋಳೆ..

Share Button

‘ಕಮಲಶಿಲೆಗೆ ಹೋಗಿದ್ದೀಯಾ?’ ಎಂದು ಗೆಳತಿ ಅಂಬುಜಾ ಕೇಳಿದಾಗ, ಇಲ್ಲ ಎಂದು ಉತ್ತರಿಸಿ ಮೌನಕ್ಕೆ ಜಾರಿದ್ದೆ. ‘ಕಮಲಶಿಲೆ’ ಎಂಬ ಹೆಸರೇ ಮನಸ್ಸನ್ನು ಜಾದುಗಾರನಂತೆ ಸೆಳೆದಿತ್ತು. ಕಮಲದ ಬಣ್ಣವುಳ್ಳ ಅಂದಗಾತಿ ಇವಳು. ಕಮಲದಂತೆ ಮೃದುವಾದ ಶಿಲೆಯಲ್ಲಿ ಉದ್ಭವಿಸಿದ ಪರಮೇಶ್ವರಿ ಇವಳು. ಕಮಲದಾಕಾರದ ಶಿಲೆಯಲ್ಲಿ ಉದ್ಭವಿಸಿದ ಲಿಂಗಾಕಾರದ ದುರ್ಗೆ ಇವಳು. ಬ್ರಹ್ಮ,...

13

ವಾಟ್ಸಾಪ್ ಕಥೆ 54 : ಪರಸ್ಪರ ಕಾಳಜಿ.

Share Button

ಜಪಾನ್ ದೇಶದಲ್ಲಿ ಬಹುತೇಕರು ಮನೆಗಳನ್ನು ಮರಮುಟ್ಟುಗಳಿಂದಲೇ ಕಟ್ಟಿಕೊಳ್ಳುತ್ತಾರೆ. ಒಬ್ಬವ್ಯಕ್ತಿ ತಾನು ಮನೆ ನಿರ್ಮಿಸಿದ ಐದುವರ್ಷಗಳ ನಂತರ ಅದನ್ನು ಸ್ವಲ್ಪ ನವೀಕರಣ ಮಾಡೋಣವೆಂದು ಆಲೋಚಿಸಿದ. ಅದಕ್ಕೆ ಬೇಕಾದ ಪರಿಕರಗಳನ್ನು ಹೊಂದಿಸಿಕೊಳ್ಳಹತ್ತಿದ. ಕೆಲಸ ಪ್ರಾರಂಭ ಮಾಡುವಾಗ ಹಳೆಯ ಮರಗಳನ್ನು ಜೋಡಿಸಿದ್ದ ಭಾಗಗಳನ್ನು ಬಿಡಿಸತೊಡಗಿದ. ಅವನಿಗೆ ಅಲ್ಲಿ ಒಂದು ಹಲ್ಲಿ ಕಾಣಿಸಿತು....

6

ಕಾವ್ಯ ಭಾಗವತ 28: ವೇನನ ಪೃಥು-1

Share Button

28.ಚತುರ್ಥ ಸ್ಕಂದಅಧ್ಯಾಯ – 3ವೇನನ ಪೃಥು-1 ಪುತ್ರಕಾಮೇಷ್ಠಿ ಯಾಗವಂ ಮಾಡಿಪಡೆದಮಗನಾದರೇನು,ಕರ್ಮಫಲದಿಂ ಬಿಡುಗಡೆಯುಂಟೆ? ಮಗ ದುರುಳನಾಗಿಅಧರ್ಮಿಯಾಗಿಲೋಕಕಂಠಕನಾಗಿರೆತಂದೆ ಅಂಗರಾಜನಿಗೆಜೀವನ ವಿರಕ್ತಿ,ಅರಣ್ಯ ವಾಸದುರುಳನಾದರೇನ್ರಾಜನಮಗ, ರಾಜಂಗೆ,ದೈವಾಂಶಸಂಭೂತನೆಎಂಬ ನಂಬುಗೆಗೆಜೋತು ಬಿದ್ದುವೇನನನಿಗೆ ರಾಜ್ಯವಂ ಒಪ್ಪಿಸಿನಿರಾಳನಾದ. ಗುರು ಪುಂಗವರಿಗೆ,ಮಂತ್ರಿ ಮಾಗಧರಿಗೆಭ್ರಮ ನಿರಸನಹಾವಿಗೆ ಹಾಲೆರೆದಂತೆವೇನನಸಕಲ ಪ್ರಜೆಗಳಿಗೆಬ್ರಹ್ಮಗೆ, ಋಷಿ ಪುಂಗವರಿಗೆಅನ್ನ ಬೆಳೆವ ಭೂತಾಯಿಗೆಉಣ್ಣಿಸುದುದುಬರೀ ಹಾಲಾಹಲವನ್ನೆ. ಭೂತಾಯಿ ಬಂಜೆಯಾದಳುಕಳ್ಳಕಾಕರು ವಿಜೃಂಭಿಸಿ,ದೈವತ್ವವನ್ನೆಲ್ಲಾ ನಂಬದ...

Follow

Get every new post on this blog delivered to your Inbox.

Join other followers: