Yearly Archive: 2024

9

ನೀ ನನಗಿದ್ದರೆ ನಾ ನಿನಗೆ ಪುಟ – 1

Share Button

ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...

20

ದೇಹದಾನಿಯ ಸ್ವಗತ

Share Button

ಆತ್ಮೀಯ ಓದುಗರೇ, ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. 70ನೇ ವಯಸ್ಸಿನಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲೆದೆ ಸದಾ ಚುರುಕಾಗಿ ಒಡಾಡಿಕೊಂಡಿದ್ದ ನಾನು ಹೃದಯಾಘಾತದಿಂದ ಮೃತಪಟ್ಟದ್ದನ್ನು ಅರಗಿಸಿಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೊತೆಗೆ ನಾನು ಕೆಲವು ವರ್ಷಗಳ...

5

ಕಾವ್ಯ ಭಾಗವತ : ದಾಕ್ಷಾಯಿಣಿ – 02

Share Button

17. ದಾಕ್ಷಾಯಿಣಿ -೦೨ಚತುರ್ಥ ಸ್ಕಂದ – ಅಧ್ಯಾಯ – ೦೧ ಪತಿಯ ನುಡಿಯ ಧಿಕ್ಕರಿಸಿತವರಿಗೆ ಬಂದ ಸತಿಗೆಸುಖವುಂಟೆ?ಸತ್ ಯಾಗದ ತಾಣಅದೆಷ್ಟು ಮನೋಹರ? ವೇದಘೋಷಗಳ ನಡುವೆಮಹರ್ಷಿಗಳಋತ್ವಿಕ್ ಬ್ರಾಹ್ಮಣರಸಮಾಗಮ ನೇತ್ರಾನಂದಕರಹೋಮಕುಂಡದ ಬಳಿದರ್ಭೆ, ಅಜಿನ, ಮೃತ್ಪಾತ್ರಗಳಕಮಂಡಲಗಳಸುಂದರ ಸಮಾರಂಭಸಂಭ್ರಮ ಏನಾದರೇನು? ಕಿರಿಯ ಮಗಳಆಗಮನವ ನೋಡಿಯೂ ನೋಡದಂತೆಮುಖ ತಿರುಗಿಸಿ, ಮೌನನಾದಶಿವದ್ವೇಷಿ ದಕ್ಷಅವನ ಭಯಕೆಒಂದು ಕ್ಷಣ...

6

ಸಾವೆಂಬ ಸೂತಕ

Share Button

ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ ಜನಿಸುತ್ತೇವೆಂದಲ್ಲ! ಇದಕಾವ ಸಾಕ್ಷಿ, ಪುರಾವೆಗಳೂ ಇಲ್ಲ!! ನಿನ್ನೆ ನಾನು ಜೀವಿಸಿದ್ದೆ. ಹಾಗಾಗಿ ಇಂದು ಎಂಬುದು ನನಗೆ ಪುನರ್ಜನ್ಮ ಅಷ್ಟೇ. ನಾಳೆ ಎಂಬುದು ನನ್ನ ಪಾಲಿಗೆ ಸಿಕ್ಕರೆ...

9

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 2

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..… ನಮ್ಮ ಕಾರು  Noi Bai  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಹನೋಯ್ ನಗರದತ್ತ ಚಲಿಸುತ್ತಿತ್ತು.  ಮಳೆ ಹನಿಯುತ್ತಿದ್ದ ಸಮುದ್ರ ತೀರದ ವಾತಾವರಣ. ಹೆಚ್ಚು ಕಡಿಮೆ ಮಂಗಳೂರಿನಂತಹ ಪರಿಸರ.  ದಾರಿಯುದ್ದಕ್ಕೂ ಮಾರ್ಗದರ್ಶಿಯನ್ನು ಅದೂ ಇದೂ ಮಾತನಾಡಿಸುತ್ತಾ ಮಾಹಿತಿ ಪಡೆಯುತ್ತಿದ್ದೆವು.  ಈ ದಾರಿಯಲ್ಲಿ  ಚೀನಾದಿಂದ ಹರಿದು ಬರುತ್ತಿರುವ...

12

ಕಾದಂಬರಿ : ಕಾಲಗರ್ಭ – ಚರಣ 26

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಷಯ ತಿಳಿದ ತೋಟದಲ್ಲಿನ ಆಳುಮಕ್ಕಳು, ಊರಿನ ಪರಿಚಿತರು ಮನೆಯ ಹತ್ತಿರ ಬರಲಾರಂಭಿಸಿದರು. ಮನೆಯವರಿಗೇ ವಿಷಯವೇನೆಂದು ಸರಿಯಾಗಿ ತಿಳಿದಿಲ್ಲ. ಇನ್ನು ಬಂದವರಿಗೇನು ಹೇಳಲು ಸಾಧ್ಯ. ಕೊನೆಗೆ ಗಂಗಾಧರಪ್ಪನವರಿಗೆ ಮನಸ್ಸು ತಡೆಯಲಾರದೆ ಸ್ನಾನ ಪೂಜೆ ಮುಗಿಸಿ, ಗಂಜಿಕುಡಿದು ಜೊತೆಗೊಬ್ಬ ಆಳುಮಗನನ್ನು ಕರೆದುಕೊಂಡು ಮ್ಯಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಹೊರಡಲು...

8

ಪ್ರೀತಿ ವಿಶ್ವಾಸದ ಗಂಟು

Share Button

ದ್ವೇಷಿಸುವುದು ಏತಕೆ ಮನವೇಸಿಟ್ಟು ಆಕ್ರೋಶ ಸಿಡುಕುತನ ತರವೇಒಳಗೊಳಗೆ ಸುಟ್ಟು ಹೋಗುವೆ ಏಕೆಪ್ರೀತಿ ಕರುಣೆಯಿಂದ ನೋಡಬಾರದೇಕೆ ದ್ವೇಷದಿಂದ ಏನನ್ನು ಸಾಧಿಸಲಾಗದುಆದ ಸಂಕಷ್ಟವನ್ನು ಅಳಿಸಲಾಗದುಅಳಿದದ್ದು ಮತ್ತೆ ಮರಳಿಬಾರದುಅಸೂಯೆಯಿಂದ ಏನನ್ನು ಪಡೆಯಲಾಗದು ನೋವು ನಲಿವು ಎಲ್ಲರಿಗೂ ಉಂಟುಸೋಲು ಗೆಲುವು ಕಾರ್ಯದೊಳುಂಟುಇರಬೇಕು ಎಲ್ಲರೊಡನೆ ಪ್ರೀತಿಯ ನಂಟು ಕಟ್ಟಿಕೊಳ್ಳಬೇಕು ಪ್ರೀತಿ ವಿಶ್ವಾಸದ ಗಂಟು ಚಿಕ್ಕ...

5

ಒಂದು ಓದಿನ ಖುಷಿಗೆ 

Share Button

ಓದು ಒಂದು ಅದ್ಭುತ ಭಾವ. ಅಕ್ಷರಗಳ ಜೊತೆ ಮನಸ್ಸಿನ ಸಂಗತಿ ಅರಿವಿನಾಳದಲ್ಲಿ ಕುಳಿತು ಮಾತನಾಡುವ ಸಹಜತೆ. ಒಂದು ಓದಿನ ಧನ್ಯತೆ ಸಿಗುವುದು ವಿಷಯದ ಅಂತರ್ಗತ ನಿಲುವುಗಳಲ್ಲಿ. ಓದಿನ ಸಾಲಿನ ಪೂರ್ಣತೆ ಇರುವುದು ವಿಷಯ ನಿರೂಪಣೆ ಮತ್ತು ಪ್ರಭುದ್ಧತೆಯ ಅಂತಃಕರಣದಲ್ಲಿ. ವಿಚಾರ ವಿಮರ್ಶೆಯ ಜೊತೆಗೆ ವಿನೀತ ಭಾವವನ್ನು ಇಟ್ಟುಕೊಳ್ಳುವುದು...

11

ಕರುಣಾಳು ಬಾ ಬೆಳಕೆ

Share Button

(ಸಬರಮತಿ ಆಶ್ರಮದಲ್ಲೊಂದು ಸುತ್ತು). “ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು”– ಸ್ವಾತಂತ್ರ್ಯ ಹೋರಾಟಗಾರರು ಬಾಪೂ ಜೊತೆ ಧ್ವನಿಗೂಡಿಸುತ್ತಾ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ಬೇಸತ್ತ ಭಾರತೀಯರು, ತಮ್ಮ ತಾಯ್ನಾಡನ್ನು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ – ಸತ್ಯ...

7

ಮಾಲಿನ್ಯ – ಒಂದು ವಿವೇಚನೆ

Share Button

ಮಾಲಿನ್ಯ – ಇದನ್ನು ಆಂಗ್ಲಭಾಷೆಯಲ್ಲಿ ‘Pollution’ ಎಂದು ಹೆಸರಿಸಿದ್ದಾರೆ. ಇದೊಂದು ಅತ್ಯಂತಮಲಿನ ಪದ. ಇದು ಎಷ್ಟು ಪ್ರಖ್ಯಾತಿ ಪಡೆದಿದೆಯೆಂದರೆ ಪ್ರತಿವರ್ಷ ಜೂನ್ 5 ರಂದು ವಿಶ್ವಪರಿಸರ ದಿನ ಎಂದು ಆಚರಿಸುತ್ತಾರೆ. ವಿಪರ‍್ಯಾಸವೆಂದರೆ ಪರಿಸರದ ಬಗ್ಗೆ ಕಾಳಜಿ ತೋರಿಸಲೋಸ್ಕರ ಕೇವಲ ಒಂದು ಗಿಡನೆಟ್ಟು ತಮ್ಮ ಸೇವೆ ಸಾರ್ಥಕವಾಯಿತೆಂದು ಕೈ...

Follow

Get every new post on this blog delivered to your Inbox.

Join other followers: