ಬೆಳಕು-ಬಳ್ಳಿ

ಪ್ರೀತಿ ವಿಶ್ವಾಸದ ಗಂಟು

Share Button

ದ್ವೇಷಿಸುವುದು ಏತಕೆ ಮನವೇ
ಸಿಟ್ಟು ಆಕ್ರೋಶ ಸಿಡುಕುತನ ತರವೇ
ಒಳಗೊಳಗೆ ಸುಟ್ಟು ಹೋಗುವೆ ಏಕೆ
ಪ್ರೀತಿ ಕರುಣೆಯಿಂದ ನೋಡಬಾರದೇಕೆ

ದ್ವೇಷದಿಂದ ಏನನ್ನು ಸಾಧಿಸಲಾಗದು
ಆದ ಸಂಕಷ್ಟವನ್ನು ಅಳಿಸಲಾಗದು
ಅಳಿದದ್ದು ಮತ್ತೆ ಮರಳಿಬಾರದು
ಅಸೂಯೆಯಿಂದ ಏನನ್ನು ಪಡೆಯಲಾಗದು

ನೋವು ನಲಿವು ಎಲ್ಲರಿಗೂ ಉಂಟು
ಸೋಲು ಗೆಲುವು ಕಾರ್ಯದೊಳುಂಟು
ಇರಬೇಕು ಎಲ್ಲರೊಡನೆ ಪ್ರೀತಿಯ ನಂಟು
ಕಟ್ಟಿಕೊಳ್ಳಬೇಕು ಪ್ರೀತಿ ವಿಶ್ವಾಸದ ಗಂಟು

ಚಿಕ್ಕ ರಂದ್ರವು ಸಾಕು ದೋಣಿಯ ಮುಳುಗಿಸಲು
ದ್ವೇಷದ ಕಿಡಿ ಸಾಕು ಮನೆ ಮನವ ಸುಡಲು
ಹಂಗಿನ ಅರಮನೆಗಿಂತ ಸಾಕು ಪುಟ್ಟ ಗುಡಿಸಲು
ಪ್ರೀತಿ ಅಕ್ಕರೆ ಬೇಕು ದ್ವೇಷವ ಅಳಿಸಲು

ಹೊತ್ತೊಯ್ಯುವುದಿಲ್ಲ ಯಾರು ಕಾಸಿನಗಂಟು
ಹಿಡಿ ಕಾಳಜಿಯಲ್ಲಿ ಒಲವ ಬದುಕುಂಟು
ಪ್ರೀತಿಯ ಗಂಜಿ ಊಟದಲ್ಲೂ ನೆಮ್ಮದಿಯುಂಟು
ಪ್ರೀತಿ ನೆಮ್ಮದಿಗಿಂತ ಬೇಕೆ ಬೇರೆ ನಂಟು

ಸಂಬಂಧಗಳ ಎಂದಿಗೂ ಮರೆಯದಿರು
ಪ್ರೀತಿಯ ಬಂಧವ ಎಂದು ತೊರೆಯದಿರು
ದ್ವೇಷದ ಜ್ವಾಲೆಯನ್ನು ಹೊತ್ತಿ ಉರಿಸದಿರು
ಹಿತ ಚಿಂತಕರ ಮಾತುಗಳನ್ನು ಕಡೆಗಣಿಸದಿರು

-ನಾಗರಾಜ ಜಿ. ಎನ್.  ಬಾಡ, ಕುಮಟ

8 Comments on “ಪ್ರೀತಿ ವಿಶ್ವಾಸದ ಗಂಟು

  1. ಉತ್ತಮ ಬಾಂಧವ್ಯಕ್ಕಾಗಿ ಪರಸ್ಪರ ದ್ವೇಷದ ಕಿಡಿಯನ್ನು ಉರಿಸದೆ ಪ್ರೇಮ ಪ್ರೀತಿಯಿಂದ ಇರಬೇಕೆಂಬ ಸಂದೇಶವನ್ನು ಹೊತ್ತ ಚಂದದ ಕವನ.

  2. ದ್ವೇಷದ ಕಿಡಿಯ ಭಯಂಕರ ದುಷ್ಪರಿಣಾಮವನ್ನು ಸಮರ್ಥವಾಗಿ ಬಿಂಬಿಸುವ ಕವಿತೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *