Monthly Archive: March 2021

3

ಕೆ ಎಸ್‌ ನ ಕವಿನೆನಪು 36 : ‘ಮೈಸೂರ ಮಲ್ಲಿಗೆ’ ಗ್ರಂಥಸ್ವಾಮ್ಯದ ದುರಂತ

Share Button

ಪ್ರೊ.ಜಿ ವಿ ಯವರು ನಮ್ಮ ತಂದೆ ಭಾಗವಹಿಸಿದ್ದ ಒಂದು ಸಮಾರಂಭದಲ್ಲಿ ಮಾತನಾಡುತ್ತ “ಈ ನರಸಿಂಹಸ್ವಾಮಿಯ ಕಾವ್ಯವೆಲ್ಲ ಸೊಗಸು,ಆದರೆ ಕಾಪಿರೈಟ್ ವ್ಯವಹಾರ ಮಾತ್ರ ಹೊಲಸು.” ಎಂದಿದ್ದರು. ಕೆ ಎಸ್ ನ ತಮ್ಮ ‘ಮೈಸೂರ ಮಲ್ಲಿಗೆ’ ಹಾಗೂ ಇತರ ಎರಡು ಕೃತಿಗಳ ಗ್ರಂಥಸ್ವಾಮ್ಯ ಹಕ್ಕನ್ನು ಮಾರಾಟ ಮಾಡಿದುದರ ಬಗ್ಗೆ ಹೀಗೆ ತಮ್ಮ...

10

ಮುನ್ನ

Share Button

ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು. ತಾಸು ಕಳೆಯುವ ಮುನ್ನ ಕಾಸನು ದುಡಿದು ಗಳಿಸಬೇಕು. ಉಸಿರು ನಿಂತು ಹೋಗುವ ಮುನ್ನ ಹಸುವಂಗೆ ನಾವು ಬಾಳಬೇಕು. ಐಸಿರಿ ಬರಿದಾಗುವ ಮುನ್ನ ತುಸು ದಾನಧರ್ಮ ಮಾಡಬೇಕು ನಸೀಬು ಕೈಕೊಡುವ ಮುನ್ನ ರಿಸಿಯಂತೆ...

7

ಸತ್ಯಮುರಿದ ಸತ್ಯಭಾಮೆ

Share Button

“ಸತ್ಯಭಾಮಾ ಒಂದು ಕಪ್ ಕಾಫಿ ಮಾಡಿತಾರೇ ಅತೀವ ಸುಸ್ತು”. ಆಫೀಸಿನಿಂದ ಬರುತ್ತಾ ಮಡದಿಯನ್ನು ಕರೆದ- ಆ ಮನೆಯ ಆಧುನಿಕ ಶ್ರೀಕೃಷ್ಣ. ಊಹೂಂ.ಮಡದಿಯ ಸೊಲ್ಲು ಕೇಳದು!. ತಾನೇ ಅಡುಗೆ ಮನೆಗೆ ಬಂದು, ಆಕೆಯ ಸನಿಹ ನಿಂದು “ಕರೆದರೂ ಕೇಳದೆ ಸುಂದರಿ!. ನನ್ನಲ್ಲೇಕೆ ಈ ಮೌನ?”. ಗಲ್ಲ ಹಿಡಿದೆತ್ತಿ ರಮಿಸತೊಡಗಿದಾಗ…....

7

‘ನೆಮ್ಮದಿಯ ನೆಲೆ’-ಎಸಳು 9

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ  ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸರಳ ವಿವಾಹ ಸುಸೂತ್ರವಾಗಿ ನೆರವೇರಿ,  ಪತಿಗೃಹದಲ್ಲಿ  ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ ಎಲ್ಲವೂ ಸುಸೂತ್ರವಾಗಿರುವಾಗ ಅಮ್ಮ ಅನಿರೀಕ್ಷಿತವಾಗಿ ಮರಣಿಸಿದರು… ….ಮುಂದಕ್ಕೆ ಓದಿ) ನಾವು...

10

ನೀರಿಗಾಗಿ ಕಾಯಬೇಕು

Share Button

ನೀರು ನೀರೆಂದು ನಲ್ಲಿಯ ಮುಂದೆ ಕೂತರೆ ನೀರು ಬಂದೀತೇ ..? ಇಲ್ಲ , ಬರಲಿಲ್ಲ ಬದಲು ಬಂದೀತು ಒಂದಿಷ್ಟು ಕಣ್ಣೀರು ! ಎಷ್ಟು ದಿನ ಕಾಯಬಹುದು ನೀರ ಹನಿಗಾಗಿ..? ಬಾಯಾರಿ ಗಂಟಲು ಒಣಗುತಿದೆ ಕಣ್ಣೀರು ಬತ್ತಿದೆ ಒಡಲೊಳಗೆ ಹಸಿವಿನ ಲಾವಾರಸ ತಳಮಳಿಸುತ್ತಿದೆ ಹಿಮ ಕರಗಿ ನೀರಾಗುವುದನ್ನು….. ನಮ್ಮ...

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ  13

Share Button

‘ದ್ವಾರಕಾಧೀಶ್ ಕೀ ಜೈ’ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅರಮನೆಯಿದ್ದ ಜಾಗದಲ್ಲಿ, ಅವನ ಮರಿಮೊಮ್ಮಗನಾದ ವಜ್ರನಾಭನು  ವಿಶ್ವಕರ್ಮನ ಮೂಲಕ ‘ದ್ವಾರಕಾಧೀಶನ’ ಮಂದಿರವನ್ನು ಕಟ್ಟಿಸಿದನೆಂಬ ನಂಬಿಕೆ.. ಇಲ್ಲಿರುವ  ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು. ದ್ವಾರಕೆಯು ಹಲವಾರು ಬಾರಿ ನೀರಿನಲ್ಲಿ ಮುಳುಗಿತ್ತು. ಹಾಗಾಗಿ ಕಾಲಘಟ್ಟದಲ್ಲಿ ಮಂದಿರದ ಮರುನಿರ್ಮಾಣ ನಡೆದಿತ್ತು.ಶ್ರೀ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದಾಗ...

9

ಶಿವಮೊಗ್ಗ ಜಿಲ್ಲೆಯ ಪರಿಚಯ ಲೇಖನ

Share Button

ನಮಸ್ಕಾರ ಶಿವಮೊಗ್ಗ ಜಿಲ್ಲೆಗೆ ಸ್ವಾಗತ.. ಶಿವಮೊಗ್ಗ ಕ್ಕೆ ಈ ಹೆಸರು ಬರಲು ಎರಡು ಕಾರಣಗಳಿವೆ. ಶಿವನು ಬಾಯಾರಿ ಬಂದಾಗ ಮೊಗ್ಗೆ(ಮಡಿಕೆ) ಯಿಂದ ತುಂಗಾ ನದಿಯ ನೀರು ಕುಡಿದನಂತೆ ಹಾಗಾಗಿ ಈ ಊರಿಗೆ ಶಿವಮೊಗ್ಗ ಎನ್ನುವ ಹೆಸರು ಬಂತು ಎಂಬ ಪ್ರತೀತಿ ಇದೆ. ಇನ್ನೊಂದು ಸನ್ನಿವೇಶದಲ್ಲಿ, ಸಿಹಿನೀರಿನ ಮಡಿಕೆ...

8

ಅಕ್ಕಾ ಕೇಳವ್ವಾ….ಚರಣ 2- ಚಿನ್ನದ ಹುಡುಗಿ

Share Button

ಕೌಶಿಕನ ತ್ಯಜಿಸಿ ದಿಗಂಬರೆಯಾಗಿಕಲ್ಯಾಣದತ್ತ ಹೆಜ್ಜೆಹಾಕಿದೆ.ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ?ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ.ವಚನ ಸಾಹಿತ್ಯ ಲೋಕದಲ್ಲಿಧೃವತಾರೆಯಂತೆ ಮಿನುಗಿದೆ.ನಿನ್ನೊಲುಮೆಯಚನ್ನಮಲ್ಲಿಕಾರ್ಜುನನ‌ಅರಸುತ್ತಾ‌ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ ನೊಂದು ಬೆಂದವರು, ತಮ್ಮ ಬಾಳಿನಲ್ಲಿ ಎದುರಾದ ಸವಾಲುಗಳ ವಿರುದ್ಧ‌ಎದುರಿಸಲಾಗದೇ ಬದುಕಿಗೆ ವಿದಾಯ...

2

ಕೆ ಎಸ್‌ ನ ಕವಿನೆನಪು 35: ಕಹಿನೆನಪುಗಳೂ ಉಂಟು ……

Share Button

ಬಾಲ್ಯದ ದಿನಗಳ ನೆನಪುಗಳ ಬಗ್ಗೆ ಯಾರಾದರೂ ನಮ್ಮ ತಂದೆಯವರ ಹತ್ತಿರ ವಿಚಾರಿಸಿದರೆ “ಎಲ್ಲರಂತೆ ನನ್ನ ಬಾಲ್ಯವೂ ಕಳೆಯಿತು,ಅದರಲ್ಲೇನೂ ವಿಶೇಷವಿಲ್ಲ ಬಹಳ ಸಾಧಾರಣವಾದ ಜೀವನ” ಎನ್ನುತ್ತಿದ್ದರು.”ಯಾರಾದರೂ ಬಾಲ್ಯ ಸ್ನೇಹಿತರಿದ್ದರೆ?” ಎಂದು ಕೇಳಿದರೆ “ನೆಪೋಲಿಯನ್ ,ಶುದ್ಧೋದನ ಎನ್ನುವವರಿದ್ದರು ಎಂದರೂ ಅವರಿಬ್ಬರ ಬಗ್ಗೆ ಹೆಚ್ಚಿನ ವಿವರ ದೊರೆಯುತ್ತಿರಲಿಲ್ಲ. ಎಸ್ ಎಸ್ ಎಲ್...

16

ನಮ್ಮ ನೆಲದ ಸೊಗಡಿನ ಕಥೆ

Share Button

ಹೀಗೊಂದು ಕಾಲವಿತ್ತು ಎಂದು ನನ್ನ ಅಪ್ಪ ಹೇಳಿದ ಅರವತ್ತರ ದಶಕದ ಕಥೆಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿರುವಾಗಲೇ , ತೊಂಬತ್ತರ ದಶಕದಲ್ಲಿ ನಾನು ಕಂಡ ನಾಡು -ನುಡಿ, ಜೀವನಶೈಲಿ ಸಂಪೂರ್ಣ ಬದಲಾಗಿದ್ದು ಗೊತ್ತೇ ಆಗಲಿಲ್ಲ. ಅವರೆಲ್ಲರೂ ಕೂಡು ಕುಟುಂಬದ ಕುಡಿಗಳು. ಮನೆಯಲ್ಲಿ ಅಜ್ಜನ ಸೋದರರು ಸೇರಿದಂತೆ, ಅವರ ಹೆಂಡತಿ...

Follow

Get every new post on this blog delivered to your Inbox.

Join other followers: