Monthly Archive: March 2018
‘ ಗುಡ್ ಫ್ರೈಡೆ ದಿನ ಕ್ರಿಶ್ಚಿಯನ್ನರಿಗೆ ವಿಶೇಷ ದಿವಸವಲ್ಲವೇ? ಆ ದಿನ ಶುಭಾಶಯ ಹೇಳಲಿಕ್ಕಿಲ್ಲ ಎಂದು ಯಾರೋ ಅಂದರು. ಯಾಕೆ ಎಂದು ನನ್ನ ಮಿತ್ರರೊಬ್ಬರು ಕೇಳಿದರು. ಶುಭಾಶಯ ಹೇಳಿದರೆ ಅಪರಾಧವೇನೂ ಅಲ್ಲ. ಆದರೆ ಇದು ಸಂಭ್ರಮಿಸುವ ಹಬ್ಬವಲ್ಲ. ದುಃಖದಿಂದ, ಅತೀವ ಭಕ್ತಿಯಿಂದ ಆಚರಿಸುವ ಅತಿ ಮಹತ್ವದ ಹಬ್ಬ....
ಕರ್ನಾಟಕ ಹಾಗೂ ಭಾರತದ ಇತರ ರಾಜ್ಯಗಳಲ್ಲಿ ಈಗಲೂ, ನದಿದಂಡೆಗಳಲ್ಲಿರುವ ಹಳ್ಳಿಗಳು ಮಳೆಗಾಲದಲ್ಲಿ ಉಕ್ಕಿ ಹರಿವ ಪ್ರವಾಹದಿಂದಾಗಿ ಸುತ್ತುಮುತ್ತಲಿನ ಸಂಪರ್ಕ ಕಳೆದುಕೊಂಡು ಅಕ್ಷರಶ: ದ್ವೀಪಗಳಾಗುವುದಿದೆ. ಅರ್ಧ ಗಂಟೆ ವಿದ್ಯುತ್, ಇಂಟರ್ನೆಟ್ ಇಲ್ಲದಿದ್ದರೆ ಚಡಪಡಿಸುವ ಈಗಿನ ಕಾಲದಲ್ಲಿ ದಿನಗಟ್ಟಲೆ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿರುವುದು ಎಷ್ಟು ಕಷ್ಟ!. ಊಹಿಸಿಕೊಳ್ಳಿ! ಮಕ್ಕಳು...
ಕಲ್ಪನೆಯ ಕೂಸಾಗಿ ಜನಿಸಿರುವೆ ಮನದೊಳಗೆ ಚಿಗುರೊಡೆದು ಸಸಿಯಾಗಿ ಭಾವನೆಗಳ ಮರವಾಗಿ ಬೆಳದಿರುವೆ ಅರಳಿವೆ ಪದಗಳು ಮೊಗ್ಗಾಗಿ ಹೂವಾಗಿ ಕಂಪ ಬೀರುತಿವೆ ಇಂದು ನಾಳೆ ಎಂದೆಂದೂ ಕೈ ಬೀಸಿ ಕರೆಯುತಿವೆ ಕಾವ್ಯಕನ್ನಿಕೆಯಾಗಿ ಲಗ್ಗೆಯಿಟ್ಟು ಮನೆಮಾಡಿ ಸದಾ ಗುನುಗುತಿವೆ ಸಹೃದಯಿಗಳ ಅಂತರಂಗದೊಳಗೆ – ಶ್ರೀನಿವಾಸ್ ಕೆ.ಎಮ್ +7
ನಾವೆಲ್ಲರೂ ಸಮಾಜದಲ್ಲಿ ಬದುಕುತ್ತಿದ್ದೇವೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುವುದು ಸಹಜ. ವ್ಯಕ್ತಿ ತಾನು ವಾಸಿಸುವ ಸಮಾಜ ಹೀಗೆಯೇ ಇರಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ನಮ್ಮ ಸುತ್ತಲೂ ಒಳ್ಳೆಯ ಆಶಾದಾಯಕ ಸುಧಾರಣೆ ಆಗಬೇಕೆಂದು ಒಬ್ಬ ಚಿಂತಕ ಸದಾ ಚಿಂತಿಸುತ್ತಾನೆ. ಆ ಪ್ರಗತಿಪರ ಬದಲಾವಣೆಗಾಗಿ ತನ್ನನ್ನು ತಾನು ಕಾರ್ಯೊನ್ಮುಕಾಗಿಸಿಕೊಳ್ಳುತ್ತಾನೆ....
ನೀರು..ನೀರು,,, ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ಬಾಯಾರಿ ಬಂದವರಿಗೆ ಬೆಲ್ಲದ...
ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ ಧಾರೆ. ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ ಧಾರೆ. ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ. ಮನ ಮನಗಳೊಂದಾಗೆ ಸಪ್ತಪದಿಯೊಳೊಂದಾಗೊ ಧಾರೆ. ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ. ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ. ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ...
ಜಾಲತಾಣದಲ್ಲಿ ಕಾಣಿಸಿದ ಯಾವುದೋ ಒಂದು ಪೋಸ್ಟ್ ನಲ್ಲಿ ಪೋಷಕರೊಬ್ಬರು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಗುವಿಗೆ, ಐ.ಐ.ಟಿ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಯಾವಾಗಿನಿಂದ ತರಬೇತಿ ಕೊಡಿಸಿದರೆ ಸೂಕ್ತ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಬ್ಬರು “ಅಯ್ಯೊ, ಈಗಾಗಲೇ ಬಹಳಷ್ಟು ತಡವಾಗಿದೆ……ನಿಮ್ಮ ಮಗು ತನ್ನ ತಾಯಿಯ...
ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ...
ಹಕ್ಕಿಗೆ ಮರದ , ಮರಕ್ಕೆ ಹಕ್ಕಿಯ ಹಂಗಿಲ್ಲ ಎಂದರು ಹಿರಿಯರು. ಅವರಿಗೆ ನಮಸ್ಕಾರ ಆದರೆ ಮರದ ಬೀಜ ಹಕ್ಕಿಯ ಒಡಲಲ್ಲಿ ಎಲ್ಲೋ ದಾಟಿ ಮೊಳೆತು ಮತ್ತೆ ಮರ ಮರದ ಪೊಟರೆ ಕೊಂಬೆಗಳಲ್ಲಿ ಹಕ್ಕಿ ಗೂಡಾಗಿ ಮೊಟ್ಟೆ ಮರಿ ಮಾಡಿ-ಸಂಸಾರ ಹೀಗೆ ಸ್ಥಾವರ- ಜಂಗಮ ಜೀವ ಸಂಚಾರ ನನ್ನೊಬ್ಬ...
ದಟ್ಟ ಹಸಿರಿನ ಕಾಡಿನ ನಡುವೆ ಇರುವ ಆ ಪುಟ್ಟ ಹೆಂಚಿನ ಬಿಡಾರಗಳಲ್ಲಿ ತಂಗುವುದು ಅದೆಷ್ಟು ವಿಶಿಷ್ಟ ಅನುಭವ! ದೂರದಿಂದ ಕೇಳಿ ಬರುವ ನವಿಲು ಹಾಗೂ ಇತರ ಪಕ್ಷಿಗಳ ಕೂಜನಕ್ಕೆ ಕಡವೆ/ಸಾಂಬಾರ್ ಮೃಗದ ದ್ವನಿಯ ಹಿಮ್ಮೇಳ..ಯಾವುದೋ ಮರಕ್ಕೆ ಸುತ್ತಿಕೊಂಡ ಬೃಹದಾಕಾರದ ಬಳ್ಳಿ, ಬಿಡಾರದ ಮಾಡಿನ ಮೇಲೆ ತಟತಟನೆ ಬೀಳುವ...
ನಿಮ್ಮ ಅನಿಸಿಕೆಗಳು…