Monthly Archive: August 2014

8

ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು..

Share Button

ಕೆಲವು ವರ್ಷಗಳ ಹಿಂದೆ ನೆರೆಯ ಕೇರಳದ ವಯನಾಡ್ ನಲ್ಲಿರುವ ಎಡಕಲ್ ಕೇವ್ಸ್ ಗೆ ಚಾರಣಕ್ಕೆ ಹೋಗಿದ್ದೆ. ಅಲ್ಲಿ ಕೆಲವೆಡೆ ಚಿಕ್ಕ ಅಂಗಡಿಗಳಲ್ಲಿ ಉಪ್ಪು ನೀರಿನಲ್ಲಿ ನೆನೆಸಿದ ಬೆಟ್ಟದ ನೆಲ್ಲಿಕಾಯಿಗಳನ್ನು ಮಾರುತ್ತಿದ್ದರು. ಇಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಶಿಸ್ತಿನಿಂದ ಪಾಲಿಸುತ್ತಾರೆ. ಅವರು ನೆಲ್ಲಿಕಾಯಿಗಳನ್ನು ಕಾಫಿ ಗಿಡದ ಎಲೆಗಳಲ್ಲಿ ಹಾಕಿ...

5

ಎಲ್ಲವೂ ಸುಲಭವಾಗಬೇಕು ಎಂಬುದು ಎಲ್ಲರ ಬಯಕೆ

Share Button

ಉತ್ಪಾದಕತೆಗೆ ಸೋಮಾರಿತನವೇ ಶತ್ರು. ಆದ್ದರಿಂದ ವಿಶ್ರಾಂತಿ ಮತ್ತು ಆಲಸ್ಯದ ನಡುವಿನ ಗೆರೆಯನ್ನು ಅರಿತುಕೊಳ್ಳಬೇಕು. ಆಗ ಅಗತ್ಯ ವಿಶ್ರಾಂತಿ ತೆಗೆದುಕೊಂಡು ಚೇತೋಹಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ವಿರಾಮದ ಬಳಿಕ ಪಡೆದ ಚೈತನ್ಯವನ್ನು ಗುರಿ ಸಾಧನೆಗೆ ಬಳಸಿಕೊಳ್ಳದೆ ಸಮಯವನ್ನು ವ್ಯರ್ಥಗೊಳಿಸಿದಾಗ ನಮಗೆ ಸಮಸ್ಯೆ ತಂದುಕೊಂಡಂತೆಯೇ ಸರಿ. ಕೇಳದಿದ್ದರೂ...

7

ಡ್ರ್ಯಾಗನ್ ಫ್ರೂಟ್

Share Button

ಪೌರಾತ್ಯ ದೇಶಗಳಾದ ಹಾಂಗ್ ಕಾಂಗ್, ಸಿಂಗಾಪುರ, ಮಲೇಶ್ಯಾಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಣ್ಣಿನ ಹೆಸರು ‘ಡ್ರ್ಯಾಗನ್ ಫ್ರೂಟ್’ ( Dragon Fruit). ಕ್ಯಾಕ್ಟಸ್ ನ ಒಂದು ವರ್ಗಕ್ಕೆ ಸೇರಿದ ಈ ಹಣ್ಣಿನ ರೂಪ, ಆಕಾರ, ಬಣ್ಣ ಎದ್ದು ಕಾಣುತ್ತವೆ. ಬಿಳಿ ಮತ್ತು ತಿಳಿಗೆಂಪು ಬಣ್ಣದ ತಿರುಳಿನಲ್ಲಿ ಚಿಕ್ಕ...

4

ದೀಕ್ಷಿತರ ಕೃತಿಗಳಲ್ಲಿ ಮಹಾಲಕ್ಷ್ಮಿ

Share Button

  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಶ್ರೀ ಮಹಾಲಕ್ಷ್ಮಿಯ ವರ್ಣನೆ. ಕರ್ನಾಟಕ ಸಂಗೀತ ಕೃತಿಗಳಲ್ಲಿ ಸಾಮಾನ್ಯವಾಗಿ ವಸ್ತು ದೇವ – ದೇವಿಯರ ವರ್ಣನೆ ಹಾಗೂ ಪ್ರಾರ್ಥನಾ ರೂಪದಲ್ಲಿ ಇರುತ್ತದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆನಿಸಿದ್ದ ಶ್ರೀ ಶ್ಯಾಮಾಶಾಸ್ತ್ರಿಗಳು , ಶ್ರೀ ತ್ಯಾಗರಾಜರು ಮತ್ತು ಶ್ರೀ ಮುತ್ತುಸ್ವಾಮಿ...

1

ಕಣ್ಣಮುಚ್ಚಾಲೆ

Share Button

  ಎಲ್ಲೂ ಒಪ್ಪ ಓರಣ ಚಂದ ಚಂದದ ಶುಭ್ರ ಉಡುಪ ಧರಿಪ ಕೊಳೆ ಮೆತ್ತಿದ ಮಗನ ಅಂತರಂಗ. ಎರಡಂತಸ್ತಿನ ಬೆಳ್ಳಿ ಬಣ್ಣದ ಜಮಖಾನೆ ಹಾಸಿದ ಮನೆಯ ಮುಂದು. ಹರಿಯುವ ಚರಂಡಿಯಿಲ್ಲಿ, ಕಾಲು ಮುಂದಡಿ ಹಾಸಿದ ಗೋಣಿಚೀಲ. ಮಾತಿಗೆ ಸಿಗದ, ಸಿಡುಕ, ಕಮಾಯಿ ಗಂಡನ ಹೆಂಡತಿ ಬಡವನ ಸಂಗವಾಗಿರಲು...

1

ದ್ರೌಪದಿಯ ಪ್ರತಿಜ್ಞೆ

Share Button

  ಧರ್ಮರಾಜ ದ್ಯೂತದಲ್ಲಿ ದುರ್ಯೋಧನನಿಗೆ ಸಂಪೂರ್ಣ ಸೋತು ದ್ರೌಪದಿಯನ್ನೂ ಪಣಕ್ಕೊಡ್ಡಿ ಅದರಲ್ಲೂ ಸೋತು ಹೋಗಿ ಸಭೆಗೆ ದ್ರೌಪದಿಯನ್ನು ಕರೆತರಲು ದುಃಶಾಸನನನ್ನು ಕಳುಹಿಸುತ್ತಾನೆ. ದುಃಶಾಸನ ದ್ರೌಪದಿಯನ್ನು ಸಭೆಗೆ ಎಳೆದು ತರುವ ಸಂದರ್ಭದಲ್ಲಿ ಅವರಿಬ್ಬರಲ್ಲಿ ನಡೆದ ಮಾತುಕತೆ. ದುಃಶಾಸನ: ಪಾಂಚಾಲಿ ಬಾ. ನಿನ್ನ ಪತಿಗಳೈವರು ಜೂಜಿನಲ್ಲಿ ಪಣವಿಟ್ಟು ಎಲ್ಲವನ್ನು ಕಳೆದುಕೊಂಡು...

6

Elephant Yam .. ಸುವರ್ಣಗಡ್ಡೆ.

Share Button

ಇಂಗ್ಲಿಷ್ ನಲ್ಲಿ Elephant Yam –  ಕನ್ನಡದಲ್ಲಿ ಸುವರ್ಣಗಡ್ಡೆ ಎಂದು ಕರೆಯಲ್ಫಡುವ ಈ ಗಡ್ಡೆ ತರಕಾರಿಯಿಂದ ಸಾಂಬಾರ್, ಮಜ್ಜಿಗೆ ಹುಳಿ, ಪಲ್ಯ,ಕೂಟು ಇತ್ಯಾದಿ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಬಹುದು. ಸ್ವಲ್ಪ ಆಧುನಿಕೀಕರಿಸಿ ಚಿಪ್ಸ್,ಕಟ್ಲೇಟ್ ಇತ್ಯಾದಿ ತಯಾರಿಸಿದರೂ ರುಚಿಯಾಗಿರುತ್ತದೆ. ಕೆಲವು ಸುವರ್ಣ ಗಡ್ಡೆಗಳನ್ನು ಹೆಚ್ಚುವಾಗ ಕೈ ತುರಿಕೆಯಾಗುತ್ತದೆ. ಹಾಗಾಗಿ ಮುಂಜಾಗರೂಕತೆಯಿಂದ ಕೈಗೆ ತೆಂಗಿನ ಎಣ್ಣೆ...

7

ಸಾವು ಸಂಭ್ರಮವಾದಾಗ!.?

Share Button

ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ  ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ  ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ. ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆದೇಶದ ಜನತೆ  ತಡರಾತ್ರಿಯ ವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ  ಗೆದ್ದಂತೆ  ವಿಜಯೋತ್ಸವ ಆಚರಿಸಿದರು. ಸರಿಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನ ಸಂತಸ ಹಂಚಿಕೊಂಡರು. ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ-ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ,ರಾಜನಾಗಿರಲಿ-ರಾಜದ್ರೋಹಿಯಾಗಿರಲಿ)  ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ  ಅಮಾನವೀಯವಾದ್ದು ಬೇರೋಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ, ಭಯೋತ್ಪಾದಕತೆಯ  ಬೀಜಗಳನ್ನು ಭೂಮಿಯೆಲ್ಲೆಡೆ  ಬಿತ್ತುತ್ತಿದ್ದ ಲಾಡೆನ್ನಿನ...

4

Paying  Homage to UR Ananta Murthy

Share Button

      Recently I had been teaching Sons and Lovers, the most admirable   novel by D.H. Lawrence and I cannot but draw parallel between some of the insights of Lawrence and UR Anantamurthy....

2

ರಂಗು ರಂಗಿನ ಮಳೆ….

Share Button

ರಂಗುರಂಗಿನ  ಮಳೆಯಲಿ.. ಆಹಾ.. ಅದೇನು ವಿ–ಚಿತ್ರ ಮಳೆಹನಿಯೋ.. ಜೀವದೊಳಗೆ ರಂಗು ತುಂಬುವ ಮಾಯವೋ…!   ಮಕ್ಕಳ ಆಟದ ರಂಗು ಪ್ರೇಮಿಗಳ ಕುಡಿನೋಟದ ರಂಗು ನವ ವಧು–ವರರ ಮೋಹದ ರಂಗು ಇಳಿ ವಯಸಿನ ಮಾಸದ ನೆನಪಿನ ರಂಗು..! ಮಳೆಹನಿಯೇ ನಿನಗದೆಷ್ಟುರಂಗು…?   ಹರುಷದ ಹೊನಲಿನ ರಂಗು ಪ್ರೇಮದ ಕನಸಿನ ರಂಗು ಮರುಜೀವದ ನನಸಿನ ರಂಗು ಕೊನೆಗಾನದ ಒಲವಿನ ರಂಗು ಮಳೆಹನಿಯೇ ನಿನಗದೆಷ್ಟು ರಂಗು…? ,   – ಅಶೋಕ್ ಕೆ. ಜಿ. ಮಿಜಾರ್. +154

Follow

Get every new post on this blog delivered to your Inbox.

Join other followers: