Author: Vijaya Subrahmanya
ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...
‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ...
ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು....
ಮಹಾಭಾರತವು ಹಲವು ಜನ್ಮಗಳ ಪಾಪ ತೊಳೆಯುವ ಜಲವಂತೆ, ಈ ಮಹಾಪುರಾಣವು ಮೊಗೆದಷ್ಟೂ ಸಿಗುವಂತಹ ಮಹಾಸಮುದ್ರದಂತೆ. ಅದರಲ್ಲಿ ಬರುವ ಒಬ್ಬೊಬ್ಬರಿಗೂ ಒಂದೊಂದು ವಿಶೇಷತೆ. ಅದರಲ್ಲಿ ಧರ್ಮ ಸಂಸ್ಕೃತಿಗಳಿವೆ, ತತ್ವ- ನೀತಿಗಳಿವೆ. ಎಲ್ಲವನ್ನೂ ಕೊಡಬಲ್ಲ ಭಗವದ್ಗೀತೆಯೇ ಇದೆ. ಅಷ್ಟು ಮಾತ್ರವಲ್ಲ ವೈಜ್ಞಾನಿಕ (ಆಧುನಿಕವೆಂದು ಹೇಳಲ್ಪಡುವ) ವಿಚಾರಗಳೂ ಹುದುಗಿವೆ. ಈ ನಿಟ್ಟಿನಲ್ಲಿ...
ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ....
ಬಲವಾದ ದೇಹದಾರ್ಡ್ಯ ಇರುವವರನ್ನ, ಕಠಿಣ ಕೆಲಸ ಮಾಡುವವರನ್ನ, ಅತಿಭಾರ ಎತ್ತುವವರನ್ನ, ಮಿತಿಮೀರಿ ಉಣ್ಣುವವರನ್ನ ಅಲ್ಲದೆ ಶುಚಿ, ರುಚಿಯಾಗಿ ಅಡುಗೆ ಮಾಡಿ ಗುಟ್ಟಾಗಿ ಮುಚ್ಚಿಟ್ಟು ಹೋಗುವವರನ್ನೂ ಭೀಮಸೇನನಿಗೆ ಹೋಲಿಸಿ ಹೇಳುವ ವಾಡಿಕೆಯಿದೆ, ಯಾಕೆ?… ಏನು ಆ ಕತೆ? ನೋಡೋಣ. ಮಹಾಭಾರತ ಕತೆಯಲ್ಲಿರುವ ಪಂಚಪಾಂಡವರಲ್ಲಿ ದ್ವಿತೀಯನಾಗಿಯೂ ಶೋಭಿಸುತ್ತಾನೆ ಈ ನಮ್ಮ...
ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ. ಅರ್ಜುನನ ಜನನ: ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ....
ಎಲ್ಲವನ್ನೂ ಬಲ್ಲ ಸಕಲಗುಣ ಸಂಪನ್ನರೆಂದು ಮಾನವರಿಗೆ ಕರೆಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವೇ ಸರಿ. ಯಾರೂ ಪರಿಪೂರ್ಣರಾಗಲಾರರು. ಹಾಗೆಯೇ ಸಮಯ,ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ; ಬಾಲ್ಯದಲ್ಲೇ ಮಂದಬುದ್ಧಿಯೆನಿಸಿಕೊಂಡವರು ಮುಂದೆ ಚುರುಕು ಬುದ್ಧಿಯವರಾಗಬಹುದು. ಚುರುಕಿನವರು ಬುದ್ಧಿಹೀನರೂ ಸೋಮಾರಿಗಳೂ ಆಗಬಹುದು, ಉತ್ಸಾಹಿಯಾಗಿದ್ದವ ನಿರುತ್ಸಾಹಿಯಾಗಬಹುದು. ಅಂತೆಯೇ ಅರೆಹುಚ್ಚನಂತೆ ಕಾಣಿಸುತ್ತ ಅಪ್ರಯೋಜಕನೆನಿಸಿದವನೊಳಗೆ ಆತ್ಮಜ್ಞಾನ ತುಂಬಿದ್ದು, ಮುಂದೆ ಸಮಾಜೋದ್ಧಾರಕನಾಗಬಹುದು....
‘ಕಪಿಲ, ಪತಂಜಲ, ಗೌತಮ, ಜಿನನುತ ಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!‘ ಇದು ನಾಡಗೀತೆ-ಸುಪ್ರಸಿದ್ಧ ಕವಿ ಕುವೆಂಪುರವರ ರಚನೆ, ಕಪಿಲ, ಪತಂಜಲ, ಗೌತಮ ಮೊದಲಾದ ಪುರಾಣ ಶ್ರೇಷ್ಠ ಮಹರ್ಷಿಗಳಿಗೆ ಜನ್ಮ ನೀಡಿದ ನಾಡು ನಮ್ಮದು. ಹೌದು, ಈ ‘ಕಪಿಲ’ ಮಹರ್ಷಿ ಎಂದರೆ ಯಾರು? ಈತನ ಹೆಗ್ಗಳಿಕೆಯೇನು?...
ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲುಪಿದಾಗ ಸ್ವತಃ ಆಲೋಚನಾ ಶಕ್ತಿ, ವಿಚಾರ, ವಿನಿಮಯ ಬೆಳೆಯುತ್ತದೆ. ಉತ್ಸಾಹ, ಹುಮ್ಮಸ್ಸು ಸುರಿಸುತ್ತದೆ. ಯಾವುದೇ ಒಂದು ಸಾಧನೆಯತ್ತ ಗುರಿಮುಟ್ಟಲು ಯೋಗ್ಯ ತಳಹದಿಯನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೆ...
ನಿಮ್ಮ ಅನಿಸಿಕೆಗಳು…