Author: Vijaya Subrahmanya
ನಾನಾಗ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಕಾಲ. ವಿವಾಹವಾಗಿಲ್ಲ.ಅಡಿಗೆಯೋ ಮನೆಕೆಲಸವೋ ದನದಹಾಲು ಹಿಂಡುವ ಕಲಿಕೆಯೋ ಮಗಳಿಗೆ ಕಲಿಸುವ ಉಮೇದು ಅಮ್ಮನಿಗೆ. ತಿಂಗಳ ರಜೆಯ ಮೂರುದಿವಸ ಅಡಿಗೆಮಾಡುವುದಾಗಲೀ ಇತರರನ್ನು ಸ್ಪರ್ಶಿಸುವುದಾಗಲೀ ದೇವರಕೋಣೆ, ಅಡಿಗೆಕೋಣೆ ಪ್ರವೇಶಗಳೆಲ್ಲ ನಿಷಿದ್ಧದ ಕಾಲವಾಗಿತ್ತದು!!. ಅಮ್ಮ ರಜೆಯಾದರೆ ನಾನೇ ಅಡಿಗೆ ಮಾಡಬೇಕಿತ್ತು. ಹೀಗೊಂದು ದಿನ ಆ ಜವಾಬ್ದಾರಿ...
ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾ ಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ...
‘ಅಮ್ಮಾ.., ನೋಡು ಪೇಪರಲ್ಲಿ ಬಂದಿರೋ ಈ ನಟಿಯ ಫೊಟೋ’.ಬೆಳಗ್ಗಿನ ತಿಂಡಿ-ಕಾಫಿ ಗಡಿಬಿಡಿಯಲ್ಲಿದ್ದ ವಸುಮತಿಯ ಮುಖದ ಮುಂದೆ ಹನ್ನೆರಡು ವರ್ಷದ ಮಗಳು ವಸುಧಾ ಅಂದಿನ ಪೇಪರು ತಂದು ಒಡ್ಡಿದಾಗ ‘ಏನೇ ನಿನ್ನ ಧಾವಂತ?’ ಎಂದರು. ‘ಅಲ್ಲಮ್ಮಾ.., ನನ್ನ ಸ್ಕರ್ಟ ಮೊಣಕಾಲಿನ ವರೆಗೆ ಬಂದರೇ ನನ್ನನ್ನ ಕಣ್ಣರಳಿಸಿ ನೋಡ್ತಿಯಾ..,ಹಾಗಿದ್ದರೆ ಇದನ್ನ...
ಕೆಲವಾರು ವರ್ಷಗಳಹಿಂದೆ ಅಜ್ಜನಮನೆಯಲ್ಲಿ ಹಟ್ಟಿತುಂಬಾ ದನಗಳಿದ್ದ ಕಾಲ. ಎಲ್ಲದನಗಳಿಗೂ ಒಂದೊಂದು ಹೆಸರು. ಗೆಂದೆ, ಕುಸುಮ,ಕಾವೇರಿ, ಗೋದಾವರಿ, ಕಾರ್ಚಿ,ಹೀಗೆ. ಹಾಲು ಕರೆಯುವ ಹಸುಗಳನ್ನು ಮೂಡುಬದಿಯ ಸಣ್ಣ ಅಂಗಳದಲ್ಲಿ ಅವುಗಳಿಗೆ ನಿಯೋಜಿಸಿದ ಕಂಬದಲ್ಲಿ ಕಟ್ಟುವುದು.ಅವುಗಳಿಗೆ ಮಡ್ಡಿ ತಿನ್ನಿಸಿ , ಹಾಲು ಕರೆದು (ದನದಹಾಲು ಕರೆಯುವ ಕೆಲಸ, ಅಜ್ಜಿಗೆ) ಇತರ ದನಕರುಗಳಿಗೆ ಒಂದಿಷ್ಟು...
ನಾನು ಚಿಕ್ಕವಳಿದ್ದಾಗ ನನ್ನ ಏಳನೆ ತರಗತಿವರೆಗಿನ ವಿದ್ಯಾಭ್ಯಾಸ ನನ್ನ ಅಜ್ಜನಮನೆಯಲ್ಲಿದ್ದುಕೊಂಡು ಪೂರೈಸಿದ್ದೆ ಎಂದು ಹೇಳಿದ್ದೆನಲ್ಲ ಬಂಧುಗಳೇ…,ಹಣ್ಣು-ಹಂಪಲುಗಳಿದ್ದ ದಿನ ರಾತ್ರಿ ಊಟತೀರಿಸಿದಮೇಲೆ ಅದನ್ನು ಹಂಚುವ ಜವಾಬ್ದಾರಿಕೆ ಅಜ್ಜನದು!. ಅದು ಹೇಗೆ ಕೇಳಿ..,ಬಾವಂದಿರು+ನಾನು ಸಹಿತ ಮೊಮ್ಮಕ್ಕಳನ್ನು ಕರೆದುಬಿಟ್ಟು ಒಬ್ಬೊಬ್ಬರಿಗೆ ಒಂದೊಂದು ಕೆಲಸ.ಹಣ್ಣುಗಳನ್ನು ತೊಳೆದುತರಲು ಒಬ್ಬ, ಚೂರಿ+ಪ್ಲೇಟು ತರಲು.., ಇನ್ನೊಬ್ಬ, ಹೆಚ್ಚಿದ...
ನಾನಾಗ ಪ್ರೈಮೆರಿ ಶಾಲೆ ಕಲಿಯುತ್ತಿದ ದಿನಗಳವು. ಈ ಹಿಂದೆ ಹೇಳಿದಂತೆ ನನ್ನ ಅಜ್ಜನಮನೆಯಿಂದ ಸೋದರಮಾವನ ಮಕ್ಕಳಾದ ಬಾವಂದಿರ ಜೊತೆಗೆ ಕುಂಬಳೆಸೀಮೆಯ ಇಚ್ಲಂಪಾಡಿ ಹಿರಿಯ ಬುನಾದಿ ಕಳತ್ತೂರು ಶಾಲೆಗೆ ಹೋಗುತ್ತಿದ್ದ ಕಾಲ. ಅಜ್ಜನಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ. ಮನೆಯಿಂದ ಶಾಲೆಗೆ ಐದುನಿಮಿಷದ ಹಾದಿ. ಈಗಿನಂತೆ ಆ ಕಾಲದಲ್ಲಿ...
ಅನುಭವ ಮುತ್ತು-1 ನಾನು ಬಾಲ್ಯದಲ್ಲಿ ಏಳನೇ ತರಗತಿ ತನಕ ನನ್ನಜ್ಜನ ಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ ಕೇಶವ ಭಟ್ಟರ ಮನೆಯಿಂದ(ಅವರು ನನ್ನಜ್ಜ) *ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು* ಶಾಲೆಗೆ ಹೋಗಿ ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ.. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಕಾಲ. ನನ್ನ...
1. ಕಸಿಯುತಿರುವಿರಾ ಭಾರತದ ಯೋಧರ ಪ್ರಾಣ| ತುಂಬುತಲಿದೆ ನಿಮ್ಮ ಪಾಪದ ಕೂಪ ಕಾಣ|| ಕ್ಷಮಿಸಳು ಭಾರತಮಾತೆ ನಿಮ್ಮ ಕಾಳುಮರೆ| ಬಿಡದು ಅಮ್ಮಂದಿರ ದಾರುಣ ನೋವಿನ ಮೊರೆ|| 2. ಹಿಂದೂಸ್ಥಾನದಲ್ಲಿ ಪಾಕಿಗಳ ಹಿಂಸಾಚಾರ| ಬೇಕಿದಕೆ ನಮ್ಮ ಒಗ್ಗಟ್ಟಿನ ಘೋರ ಬಹಿಷ್ಕಾರ|| ಇದೆ ಭಾರತದ ಯೋಧರಿಗೂ ಬದುಕುವ ಹಕ್ಕು| ಪಾಕಿಸ್ತಾನಿಗಳೇ...
ಓ…ನನ್ನ ಚಿಗುರಳಿದ ಚೇತನ ಬೇಡವೆಂದರೂ ಮರೆಯುವುದಿಲ್ಲ ,ನಿನ್ನ ಅಮರವೀರ ಕಥನ| ಕಟುಕನ ವಾಮಮಾರ್ಗಕೆ ಬಲಿಯಾಗಿ ತಾಯ್ನೆಲದಲ್ಲಿ ಹೊನ್ನಕ್ಷರದಿ ಬರೆಸಿ ಮರೆಯಾದ ಯೋಧ ನೀನೇ ಧನ್ಯ| ಕಂದಾ ಭೂದೇವಿಮಡಿಲಲ್ಲಿ ಮಲಗಿದಾಗ ದಣಿವರಿದ ನಿನ್ನ ದುಡಿಮೆಗೆ ತಾಯಾಗಿ ಹಾಡಿದಳಲ್ಲ ಚಿರನಿದ್ರೆಗೆ ರಾಗ| ನನ್ನಲ್ಲಿ ಪಿಸುಗುಟ್ಟುತ್ತಿದೆ ನಿನ್ನ ಬಿಸಿಯುಸಿರು ಕಲುಕುತ್ತಿದೆ...
ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ...
ನಿಮ್ಮ ಅನಿಸಿಕೆಗಳು…