Author: Vijaya Subrahmanya
ಮನುಷ್ಯ ತನ್ನ ಜೀವಿತದಲ್ಲಿ ಏನು ಬೇಕಾದರೂ ಸಾಧಿಸಿಕೊಳ್ಳಬಹುದು. ತನ್ನ ಸಾಧನೆ, ಗುರಿ, ಅಗತ್ಯ. ಒಳ್ಳೆಯವನು ಕೆಟ್ಟವನಾಗಬಹುದು, ಕೆಟ್ಟವನು ಒಳ್ಳೆಯವನಾಗಲೂಬಹುದು. ಎಷ್ಟೋ ಹೀನರಾಗಿ ಬಾಳಿದವರೂ ಸಮಯ ಸನ್ನಿವೇಶಗಳಿಂದ ಪ್ರೇರಿತರಾಗಿ ಸತ್ಪುರುಷರಾಗಿ ಲೋಕದಲ್ಲಿ ಆಚಂದ್ರಾರ್ಕವಾಗಿ ಬೆಳಗುತ್ತಾರೆ, ಇಂತಹ ನಿದರ್ಶನಗಳು ನಮ್ಮ ಪುರಾಣಗಳಲ್ಲಿ ಸಾಕಷ್ಟಿವೆ. ಹಾಗಾದರೆ ಆ ಪುರಾಣವನ್ನು ಬರೆದವರೋ… ಹೌದು....
ಯಾವುದೇ ಅನಾರೋಗ್ಯಕ್ಕೆ ಆಹಾರ ಹದಗೆಟ್ಟಿರುವುದೇ ಕಾರಣ ಎನ್ನುವರು ಆಯುರ್ವೇದ ತಜ್ಞರು. *”ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”*.ಎಂಬ ನಾಣ್ಣುಡಿಯನ್ನು ಮರೆಯುವಂತಿಲ್ಲ. ಯಾವ ಆಹಾರ ಏರು-ಪೇರಿನಿಂದಾಗಿ ಸ್ವಾಸ್ಥ್ಯ ಹದಗೆಟ್ಟಿದೆ ಎಂಬುದನ್ನು ಹಿಂದಿನಕಾಲದಲ್ಲಿ ಅನುಭವದಿಂದ ಅರಿತುಕೊಂಡು ಯಾವ ನಾರು-ಬೇರು ಅದಕ್ಕೆ ಪರಿಹಾರ ಎಂಬುದಾಗಿ ಯೋಚಿಸಿ; ಈ ನಿಟ್ಟಿನಲ್ಲಿ ವನೌಷಧಿ...
ಹೆಸರೇ ಸೂಚಿಸುವಂತೆ ಕೊಡಗಿನಗೌರಮ್ಮ ಕೊಡಗಿನಲ್ಲೇ ಹುಟ್ಟಿ ಕೊಡಗಿನಲ್ಲೇ ಬೆಳೆದು ವಿದ್ಯಾಭ್ಯಾಸಹೊಂದಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಥೆಗಾರ್ತಿಯಾದವಳು. ಗೌರಮ್ಮ 1912 ರಲ್ಲಿ ಜನಿಸಿದಳು. ಗೌರಮ್ಮನ ತಂದೆಯ ಹೆಸರು ರಾಮಯ್ಯ, ತಾಯಿ ನಂಜಕ್ಕ. ಆಕೆಯ ಪತಿಯ ಹೆಸರು ಬಿ.ಟಿ.ಗೋಪಾಲಕೃಷ್ಣ. ಗೌರಮ್ಮನ ವಿದ್ಯಾಭ್ಯಾಸ ಅಂದಿನ ಮೆಟ್ರುಕ್ಯುಲೇಶನ್ ಹಾಗೂ ಹಿಂದಿವಿಶಾರದಾ. ಮಹಾತ್ಮಾಗಾಂಧೀಜಿ ಹರಿಜನೋದ್ಧಾರಕ್ಕಾಗಿ ದೇಶದೆಲ್ಲೆಡೆ...
ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ- ತಾಯ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ ನಿನ್ನಲ್ಲಿ ಬೇಡಿಕೊಳ್ಳುವ ಅನಂತಾನಂತ ಆಶೀರ್ವಾದಗಳು- ಕ್ಷೇಮ- ಸದಾ ನಿನ್ನ ಮೇಲೆ ನಡೆದು,ನನ್ನ ಆಹಾರಕ್ಕಾಗಿ ನಿನ್ನನ್ನು ಗಾಯಗೊಳಿಸಿ ಕೃಷಿ ಮಾಡಿಕೊಂಡು, ನೀನು ನೀಡಿದ...
ಸಂಸಾರದಲ್ಲಿ ಮಿಕ್ಕೆಲ್ಲರ ಶೀಲಕ್ಕಿಂತ ಗೃಹಿಣಿಯಾದವಳ ಶೀಲಕ್ಕೆ ಹೆಚ್ಚು ಮಹತ್ವ. ಅದನ್ನು ಅಳೆದು ತೂಕನೋಡುವುದು, ಗುಣಾವಗುಣಕ್ಕೆ ಮೇಲ್ಮೆ-ಕೀಳ್ಮೆಗಳ ಗರಿಷ್ಟ-ಕನಿಷ್ಟಗಳ ಪಟ್ಟಿ ಕೊಡುವುದು, ಅನಾದಿಕಾಲದಿಂದಲೇ ಬಂದ ಪದ್ಧತಿ. ಹಾಗೆಯೇ ಕೆಲವು ಸನ್ನಿವೇಶಗಳಲ್ಲಿ ಗೃಹಿಣಿಯರನ್ನು ಸತ್ವಪರೀಕ್ಷೆಗೆ ಒಳಪಡಿಸುದೂ ಇದೆ. ಇಂತಹ ಸಂದರ್ಭಗಳಲ್ಲಿ, ಮಾನಿನಿಯರು ತಮ್ಮ ಬುದ್ಧಿ, ವಿವೇಕ, ಜಾಣ್ಮೆಯಿಂದ ವ್ಯವಹರಿಸಬೇಕೆಂದು ಅನಸೂಯ...
ಭಕ್ತರಲ್ಲಿ ಗುರುವನ್ನು ಕಾಣು, ಗುರುವಿನಲ್ಲಿ ದೇವರನ್ನು ಕಾಣು, ದೇವರಲ್ಲಿ ಎಲ್ಲವನ್ನೂ ಕಾಣು. ಎಂಬುದಾಗಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದ ಶ್ರೀಸೂಕ್ತಿ ನೆನಪಾಗುವುದು. ಹಾಗೆಯೇ ಯಾವುದೇ ಕಾರ್ಯದಲ್ಲಿ ಹಿಂದೆ ಮುನ್ನಡೆಸುವವನಾಗಿ ಗುರುವಿದ್ದು; ಮುಂದೆ ಶಿಷ್ಯನಿರಬೇಕಂತೆ. ಹಾಗೊಂದು ಪುರಾಣಕತೆ ನಿಮ್ಮ ಮುಂದೆ. ಗುರುವಿನ ಉದರದೊಳಗೆ ಹೊಕ್ಕು ಹೊರಬಂದ ಕಚ:-...
ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ...
ಒಮ್ಮೆ ನಾವು ಕೆಲವು ಮಂದಿ ಮಹಿಳೆಯರು ಮಾತನಾಡುತ್ತಾ ಸಾಗುತ್ತಿದ್ದಾಗ ಎದುರು ಸಿಕ್ಕಿದಾತ ಒಬ್ಬಾಕೆಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ.ತುಸುಮುಂದೆ ಸಾಗಿದಾಗ ಆತ ಕಿವಿಗೂದಿದ್ದು ಅನ್ಯರ ಟೀಕೆಯನ್ನು ಎಂಬುದಾಗಿ ತಿಳಿಯಿತು. ಆಕೆ ನೊಂದುಕೊಂಡಳು. ಅದು ನಮ್ಮ ಗುಂಪಿನ ಪ್ರತಿಯೊಬ್ಬರಿಗೂ ಹರಡಲು ತಡವಾಗಲಿಲ್ಲ. ಇತರರನ್ನು ಹೀನಾಯ ಶಬ್ಡಗಳನ್ನು ಬಳಸಿ; ಒಬ್ಬರನ್ನು ಇನ್ನೊಬ್ಬರಲ್ಲಿ...
ಕಡಿಮೆ ಮಾತನಾಡಿ,ಮೆಲ್ಲಗೆ ಮಾತನಾಡಿ, ಯೋಚಿಸಿ ಮಾತನಾಡಿ, ಮಧುರವಾಗಿ ಮಾತನಾಡಿ, ಪ್ರೀತಿಯಿಂದ ಮಾತನಾಡಿ, ಗೌರವದಿಂದ ಮಾತನಾಡಿ. ಇದು ಮಾತಿನ ಬಗ್ಗೆ ಶ್ರೀ ಆರ್ಷ ಋಷಿಮುನಿಗಳು ನುಡಿದ ಬಿಂದುಗಳು. ಆದರೆ ಜನ ಸಾಮಾನ್ಯರು ಇದನ್ನು ಚಾ-ಚೂ ತಪ್ಪದೆ ಪಾಲಿಸುತ್ತಾರಾ?ಪಾಲಿಸುವುದಕ್ಕೆ ಆಗುತ್ತಾ? ಎಂದು ಕೇಳಿದರೆ ಇಲ್ಲ ಎನ್ನದೆ ವಿಧಿಯಿಲ್ಲ.ಕೆಲವು ವೇಳೆ...
ವೃದ್ಧಾಪ್ಯ ಬಂದಂತೆ ಸಹಜವಾಗಿ ಮನುಜನಿಗೆ ಮರೆವು ಬರುತ್ತದೆ. ಆದರೆ ಕೆಲವರಿಗೆ ಅಕಾಲದಲ್ಲೂ ಮಿತಿತಪ್ಪಿ ಮರೆವು ಬರುವುದನ್ನು ಕಾಣುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಕೆಲವಾರು ಹೆಂಗಳೆಯರು ಸೇರಿದಲ್ಲಿ ಮರೆವಿನಬಗ್ಗೆ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ತಾರೆ. ಕೆಲವರ ಅನುಭವ ಓದಿ— ನನಗೆ ಇತ್ತೀಚಿಗೆ ಕಂಡಾಬಟ್ಟೆ ಮರೆವು ನೋಡಿ!. .ಏನಾದ್ರೂ ಒಳಗಿಂದ ತರುವುದಕ್ಕೆಂದು...
ನಿಮ್ಮ ಅನಿಸಿಕೆಗಳು…