Monthly Archive: February 2025
ಮತ್ತೊಂದು ಪ್ರೇಮಿಗಳ ದಿನ ಬಂದೇಬಿಟ್ಟಿತು. ಪ್ರೀತಿ – ಪ್ರೇಮ, ಒಲವು -ಚೆಲುವು, ಮನಸ್ಸು- ಹೃದಯ ಮುಂತಾದ ಸುಮಧುರ ಶಬ್ದಗಳು ರಿಂಗಣಿಸುವ ಸಮಯವಾಯಿತು. ಹಾಗಾಗಿ ಈಗ ನಾವು ಪ್ರೇಮಕವಿ ಎಂದೇ ಖ್ಯಾತರಾದ, ಸಿದ್ಧರೂ ಪ್ರಸಿದ್ಧರೂ ಆದ ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ನೆನೆಪಿಸಿಕೊಳ್ಳೋಣ. ಇದಕ್ಕೂ ಮುಂಚೆ ಒಂದೆರಡು ವಿಷಯಗಳತ್ತ...
ಮನೆಯಲ್ಲಿ ಹೆಂಡತಿ ಮಕ್ಕಳು ಊರಿಗೆ ಹೋಗಿದ್ದರಿಂದ ಸ್ವಲ್ಪ ತಡವಾಗಿಯೇ ಮನೆಗೆ ಬಂದರು ವಕೀಲ ಸದಾನಂದರು. ಬಟ್ಟೆಬದಲಾಯಿಸಿ ಕೈಕಾಲು ಮುಖ ತೊಳೆದುಕೊಂಡು ಅಡಿಗೆಯವನು ಕೊಟ್ಟ ಟೀ ಕುಡಿದು ಟೀಪಾಯಿಯ ಮೇಲಿದ್ದ ಮ್ಯಾಗಜಿನ್ ಕೈಗೆತ್ತಿಕೊಂಡು ಕಣ್ಣಾಡಿಸಿದರು. ಅಡಿಗೆಯ ರಾಮಪ್ಪ ಅಲ್ಲೇ ನಿಂತಿದ್ದುದನ್ನು ಕಂಡು ರಾತ್ರಿ ಅಡಿಗೆಯ ಬಗ್ಗೆ ಕೇಳಲು ನಿಂತಿರಬೇಕೆಂದು...
ನನ್ನ ದೊಡ್ಡಮ್ಮ (ತಾಯಿಯ ಅಕ್ಕ)ನವರಿಗೆ ಸ್ತನಕ್ಯಾನ್ಸರಾಗಿ ಶಸ್ತ್ರಚಿಕಿತ್ಸೆ ನಡೆದ ಮೇಲೆ ಕರೆಂಟು ಕೊಡಿಸಿಕೊಳ್ಳಲು ಕೆ ಆರ್ ಆಸ್ಪತ್ರೆಯ ರೇಡಿಯಾಲಜಿ ವಿಭಾಗಕ್ಕೆ ಹೋಗುವಾಗಲೆಲ್ಲಾ ಅವರ ಜೊತೆಯಲ್ಲಿ ನಾನೂ. ನಂಜನಗೂಡಿನಿಂದ ಬಂದವರೇ ಜಯನಗರದ ನಮ್ಮ ಮನೆಗೆ ಬಂದು ನನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಆ ದಿನವೆಲ್ಲಾ ಅವರು ನಮ್ಮ...
ಆಗ ತಾನೇ ಬೆಳಗಿನ ತಿಂಡಿಯನ್ನು ಮುಗಿಸಿ ದೈನಂದಿನ ಕೆಲಸಗಳತ್ತ ಗಮನ ಹರಿಸಬೇಕೆನ್ನುವಷ್ಟರಲ್ಲಿ ಬಂದ ದೂರವಾಣಿ ಕರೆ ಸುಚಿತ್ರಾಳ ಮನದಲೆಗಳ ಮೇಲೆ ಬಿದ್ದ ಸಣ್ಣ ಕಲ್ಲಿನಂತಾಗಿ ಎದ್ದ ಆವೃತ್ತಗಳು ಅವಳನ್ನು ನೆನಪಿನಾಳಕ್ಕೆ ಕರೆದೊಯ್ದವು. ಪತಿಯನ್ನುದ್ದೇಶಿಸಿ ಹೇಳಿದಳು – ನಾಗೇಶ್, ನನಗೇಕೋ ಇಂದು ಮುಂದಿನ ಮನೆಕೆಲಸಗಳನ್ನು ಮಾಡುವ ಮನಸ್ಸಿಲ್ಲ ಪ್ಲೀಸ್ ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶುಕ್ರರು ಮಗಳಿಗೆ ಬಹಳವಾಗಿ ನೀತಿ ಹೇಳಿದರೂ ದೇವಯಾನಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಶುಕ್ರರು ಸ್ವಲ್ಪ ಹೊತ್ತು ಯೋಚಿಸಿದವರೇ ನೇರವಾಗಿ ವೃಷಪರ್ವನಲ್ಲಿಗೆ ಹೋದರು. “ರಾಜಾ, ನಿನ್ನ ಮಗಳು ನನ್ನ ಮಗಳನ್ನು ಕಟುವಾಗಿ ನಿಂದಿಸಿದ್ದಲ್ಲದೆ ಬಾವಿಗೆ ತಳ್ಳಿಬಿಟ್ಟು ಬಂದಿದ್ದಾಳೆ.ಇಂತಹ ಅವಮಾನದ ಕಡೆ ನಾನಿನ್ನು ನಿಲ್ಲಲಾರೆ,ಈಗಲೇ ಹೊರಟೆ” ಎಂದರು....
ಪುಸ್ತಕ :- ಕೇಳಿಸದ ಸದ್ದುಗಳು (ಕವನ ಸಂಕಲನ)ಕವಯಿತ್ರಿ :- ಜಯಶ್ರೀ. ಬಿ. ಕದ್ರಿಪ್ರಕಾಶಕರು:- ಸುಮಾ ಪ್ರಕಾಶನ ಪುಟಗಳು :- 102+2ಬೆಲೆ :-110/- ಜಯಶ್ರೀ. ಬಿ. ಕದ್ರಿಯವರು ಲೇಖನ ಬರಹಗಳಿಗೆ ಹೆಸರುವಾಸಿ ಅಂದುಕೊಂಡಿದ್ದೆ, ಆದರೆ ಅಲ್ಲ ಕವನಗಳನ್ನು ರಚಿಸುವುದರಲ್ಲೂ ಇವರು ಸೈ. ಇವರ ‘ತೆರೆದಂತೆ ಹಾದಿ‘ ಹಾಗೂ ‘ಬೆಳಕು...
30.ಚತುರ್ಥ ಸ್ಕಂದಅಧ್ಯಾಯ – 4ಪುರಂಜನೋಪಖ್ಯಾನ ಪುರಂಜನ ರಾಜಶಬ್ಧ ಸ್ಪರ್ಶ ರೂಪ, ರಸಗಂಧವಿಷಯ ಸುಖಗಳಮನಸಾರೆ ಅನುಭವಿಸುವಅಭಿಲಾಶೆಯಂಪೂರೈಸಲ್ಮಧುರಗಾನ ಸುಧೆಯಂಪಸರಿಸುತ ಹಾರಾಡುವಚಿತ್ರ-ವಿಚಿತ್ರ ಪಕ್ಷಿ ಸಮೂಹಭ್ರಮರಗಳು,ಸರೋವರದ ಜಲಸಮೃದ್ಧಿಯಲಿಅರಳಿನಿಂತ ಕಮಲ ಪುಷ್ಫಉಪವನದಿ ಬೆಳೆದುನಿಂದಅಪಾರ ವೃಕ್ಷರಾಶಿಯ ನಡುವೆಪಕ್ಷಿ ಕಾಶಿಯಮಧುವನವಿರ್ಪಸುಂದರ ನಗರದ ರಾಣಿತ್ರಿಲೋಕ ಸುಂದರಿಯದರ್ಶನ ಮಾತ್ರದಿಂಪುರಂಜನನ ಕಾಮೋತ್ಕಂಟವಾಸನೆಗಳಿಗನುಗುಣವಾಗಿಸರ್ವಸುಖವನ್ನನುಭವಿಸಲುಸಿಕ್ಕಕನ್ಯೆ ಇವಳೆಂದುಅರಿತಪುರಂಜನನ್ನೊಂದು ನೋಟದಿಂತನ್ನೆಲ್ಲ ಕಾಮನೆಗಳೆಲ್ಲವಂಪೂರೈಪಪುರುಷನಿವನೆಂದುಬಾಲೆಪುರಂಜನನಾಲಂಗಿಸೆ,ಗೃಹಸ್ಥ ಧರ್ಮದಧರ್ಮಾರ್ಥ ಕಾಮ, ಮೋಕ್ಷದಪ್ರಥಮಹೆಜ್ಜೆಯನಿಟ್ಟಪುರಂಜನ ಧರ್ಮಾರ್ಥ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಾಗಮೋಹನದಾಸ್ ದೊಡ್ಡ ಮೊತ್ತ ವೃದ್ಧಾಶ್ರಮದ ಖರ್ಚುವೆಚ್ಚಕ್ಕಾಗಿ ಇಟ್ಟಿದ್ದರು. ಸುಮಾರು 2 ಲಕ್ಷ ಪ್ರತಿತಿಂಗಳೂ ನೀಲಕಂಠನ ಕೈಗೆ ಸಿಗುತ್ತಿತ್ತು. ನ್ಯಾಯವಾಗಿ ಖರ್ಚುಮಾಡಿದ್ದರೆ ಆ ಹಣ ವೃದ್ಧಾಶ್ರಮ ನಡೆಸಲು ಸಾಕಾಗುತ್ತಿತ್ತು. ಆದರೆ ನೀಲಕಂಠನ ದುರಾಸೆಯಿಂದ ಹಣ ಅವನ ಅಕೌಂಟ್ ಸೇರುತ್ತಿತ್ತು. ವೃದ್ಧಾಶ್ರಮದವರಿಗೆ ಹೊಟ್ಟೆ ತುಂಬಾ ಊಟ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5: ‘ಡ ನಾಂಗ್’ ನ ನೆಲದಲ್ಲಿ…. 19/09/2024 19/09/2024 ರ ಬೆಳಗಾಯಿತು. ‘ಹಲೋ ಏಶಿಯಾ ಟ್ರಾವೆಲ್ಸ್’ ನಿಂದ ನಮಗೆ ಬಂದಿದ್ದ ವಾಟ್ಸಾಪ್ ಸಂದೇಶದ ಪ್ರಕಾರ ನಾವು ಬೆಳಗಿನ ಉಪಾಹಾರ ಮುಗಿಸಿ 10 ಗಂಟೆಗೆ ಸಿದ್ದರಿರಬೇಕಿತ್ತು .ಈ ಸಂಸ್ಥೆಯ ಸೂಕ್ತ ಮಾಹಿತಿಯನ್ನು ಅಚ್ಚುಕಟ್ಟಾಗಿ ಕೊಡುತ್ತದೆ...
“ಮಾತು ಬೆಳ್ಳಿ, ಮೌನ ಬಂಗಾರ”“ಮಾತನಾಡಿದರೆ ಮುತ್ತು ಉದುರುವಂತಿರಬೇಕು”“ಮಾತು ಬಲ್ಲವನಿಗೆ ಜಗಳವಿಲ್ಲ”“ಮಾತಿನಲ್ಲಿ ತೂಕವಿರಬೇಕು”. ಮೊದಲಾದ ನುಡಿಗಳು ವಿವೇಕವರಿತು ಹಿತಮಿತವಾದ ಮಾತನಾಡುವುದಕ್ಕೆ ಎಚ್ಚರಿಕೆಯ ಸಲಹೆಗಳು. ಹೌದು. ಮಾತು ಮಿತ್ರನನ್ನೂ ಸೃಷ್ಟಿಸುತ್ತದೆ, ಶತ್ರುವನ್ನೂ ಹುಟ್ಟಿಸುತ್ತದೆ. ಹದತಪ್ಪಿ ಮಾತನಾಡಿದ ಬಳಿಕ ಪಶ್ಚಾತ್ತಾಪ ಪಡುವವರು ಅನೇಕರಾದರೆ; ಅನಗತ್ಯವಾಗಿ ಕಠೋರ ಮಾತನ್ನಾಡಿದರೂ ತಾವು ಹೇಳಿದ್ದೇ ಸರಿಯೆಂದು...
ನಿಮ್ಮ ಅನಿಸಿಕೆಗಳು…