Author: Vijaya Subrahmanya
‘‘ಕೈಯಲ್ಲಿ ಕಾಸಿಲ್ಲಿ ಕಡಕೆ ನಂಬುವರಿಲ್ಲೆ| ಹರಹರ್ ಶಿವನೆ ಬಡತನ| ಈ ಒಂದು ಬರದಿರಲಿ ನಮ್ಮ ಬಳಗಕ್ಕೆ|” ಎಂಬುದು ಜಾನಪದ ಸೊಲ್ಲು. ಹೌದು ಬಡತನವನ್ನು ಎಲ್ಲರೂ ದ್ವೇಷಿಸುತ್ತಾರೆ. ಆದರೆ ಯಾರೂ ಇಂದು ಇದ್ದಂತೆ ನಾಳೆ ಇರಲಾರ! ಬಡವ ಬಲ್ಲಿದನಾಗಬಹುದು, ಬಲ್ಲಿದ ಬಡವನಾಗಲೂಬಹುದು. ‘ಮಿಡಿ ಹಣ್ಣಾಗದೇ ದೈವದೊಲ್ಮೆಯಿರಲ್ ಕಾಲಾನುಕಾಲಕ್ಕೆ ತಾಂ...
ಪರೋಪಕಾರಾಯ ಫಲಂತಿ ವೃಕ್ಷಾ!! ಪರೋಪಕಾರಾಯ ವಹಂತಿ ನದ್ಯಃ।ಪರೋಪಕಾರಾಯ ದುವಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥ ಅನ್ಯರಿಗೆ ಅಸಂತೋಷ, ದುಃಖ, ಕಷ್ಟ ಕೊಡುವುದು ಸರ್ವಥಾ ಸಲ್ಲದು. ಅನ್ಯರಿಗೆ ನಮ್ಮಿಂದಾದಷ್ಟು ಉಪಕಾರಗಳನ್ನು ಮಾಡಬೇಕು. ಒಂದು ವೇಳೆ ಅದು ಕೈಲಾಗದಿದ್ದರೆ ಉಪದ್ರವಾದಿಗಳನ್ನು ಮಾಡದೆ ತಮ್ಮಷ್ಟಕ್ಕೆ ತಾವಿರಬೇಕೇ ವಿನಹ ಅಪಕಾರ ಬಯಸಬಾರದು. ನಮ್ಮೆಲ್ಲ ಶರೀರವು...
‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ...
ಸವತಿಯ ಮತ್ಸರವು ಸಾವಿರಾರು ಬಗೆಯಂತೆ. ಮಲತಾಯಿಯ ಕಷ್ಟಕ್ಕೆ ಗುರಿಯಾದರೂ ತನ್ನ ಪ್ರಾಮಾಣಿಕತೆಯಿಂದ, ದೈವ ಸಾನ್ನಿಧ್ಯತೆಯಿಂದ ಮೆರೆದ ಮಣಿಕಂಠ ಆ ಚಂದ್ರಾರ್ಕ ಪೂಜನೀಯ ಸ್ಥಾನ ಪಡೆದ ವಿಚಾರ ಹಿಂದಿನ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ಮಲತಾಯಿಯ ಕುತ್ತಿತ ದೃಷ್ಟಿಗೆ ಬಲಿಯಾಗಿ ನೊಂದು, ಬೆಂದು ಕೊನೆಗೆ ದೇವರನೊಲಿಸಿಕೊಳ್ಳುವುದಕ್ಕಾಗಿ ತಪಸ್ಸು ಕುಳಿತು ಸಾಕ್ಷಾತ್ಕಾರವಾಗಿ,...
ಲೋಕದಲ್ಲಿ ಮಲತಾಯಿಯ ಮತ್ಸರವೆಂಬುದು ಮಹಾ ಕಠಿಣವಾದುದು. ಮೊದಲನೆಯವಳ ಮಗುವನ್ನು ಸರಿಯಾಗಿ ಪೋಷಣೆ ಮಾಡದೆ, ಆಹಾರವನ್ನೂ ಸರಿಯಾಗಿ ಕೊಡದೆ ಇನ್ನಿಲ್ಲದಂತೆ ಪೀಡಿಸುವುದು ಸರ್ವೇ ಸಾಮಾನ್ಯ. ಮಲತಾಯಿಗೆ ಮಕ್ಕಳಾಯಿತೂಂದ್ರೆ ಮತ್ತೆ ಕೇಳುವುದೇ ಬೇಡ. ಬಲ ಮಗುವನ್ನು ಕೊಂದು ಬಿಡಬೇಕೆಂಬ ಸಂಚು ಹೂಡಿ ಮಂತ್ರ – ತಂತ್ರಗಳ ಸಹಿತ ಎಲ್ಲಾ ವಿದ್ಯೆಗಳನ್ನೂ...
ಮಾನವನ ಮೇಲೆ ಋಣತ್ರಯಗಳು ಇವೆ ಎನ್ನುತ್ತಾರೆ. ಅವುಗಳೆಂದರೆ ದೇವಋಣ, ಪಿತೃಋಣ, ಋಷಿ (ಆಚಾರ್ಯ) ಋಣಗಳೆಂದು ಮೂರು ವಿಧ. ಅವುಗಳಿಂದ ಮುಕ್ತರಾಗಬೇಕೆಂದಾದಲ್ಲಿ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು. ಜನ್ಮಕೊಟ್ಟ ತಂದೆಗೆ ಮಕ್ಕಳು ಮಾಡಬೇಕಾದ ಕರ್ತವ್ಯವನ್ನು ಮಾಡುವುದು, ವೃದ್ಧಾಪ್ಯದಲ್ಲಿ, ಕಾಯಿಲೆಗಳಲ್ಲಿ, ಅವರ ಸೇವೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡುವುದರ ಮೂಲಕ ಪಿತನ ಋಣ...
ಅರಿಯದೆ ಯಾವುದಾದರೂ ಪಾಪಕಾರ್ಯ ಅಥವಾ ತಪ್ಪು ಕೆಲಸ ಮಾಡಿದರೆ ಆ ತಪ್ಪು ಮನವರಿಕೆಯಾದಾಗ ಆತ ಪಶ್ಚಾತ್ತಾಪಪಟ್ಟನೆಂದರೆ ಅದಕ್ಕೆ ಕ್ಷಮೆಯಿದೆ ಎನ್ನುತ್ತಾರೆ. ಎಂದರೆ, ಮುಂದೆ ಅಂತಹ ತಪ್ಪು ತನ್ನಿಂದ ಆಗದಂತೆ ನೋಡಿಕೊಳ್ಳುತ್ತಾನೆ, ತಿದ್ದಿಕೊಳ್ಳುತ್ತಾನೆ, ಉತ್ತಮನಾಗುತ್ತಾನೆ. ಎಂಬುದು ಇದರ ಹಿಂದಿರುವ ತಾತ್ಪರ್ಯ. ಮನುಷ್ಯನೆಂದ ಮೇಲೆ ತಿಳಿದೋ ತಿಳಿಯದೆಯೋ ತಪ್ಪುಗಳು ಬಂದೇ...
ಪುರಾತನ ಕೇರಳ ರಾಜ್ಯದಲ್ಲಿ ‘ಮೇಧಾವಿ’ ಎಂದೊಬ್ಬ ರಾಜನಿದ್ದನು. ಈತನು ಪ್ರಜೆಗಳನ್ನು ಬಹಳ ಪ್ರೀತಿ ವಾತ್ಯಲ್ಯಗಳಿಂದ ಕಾಣುತ್ತಿದ್ದು ಪ್ರಜಾನುರಾಗಿಯಾದ್ದ ರಾಜನಾಗಿದ್ದ, ರಾಜನಿಗೆ ವಿವಾಹವಾಯ್ತು. ರಾಣಿ ಚಿತ್ರಭಾನು, ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ದೇವರೊಲುಮೆಯಂತೆ ಕಾಲಕ್ರಮದಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಪುತ್ರೋತ್ಸವವಾದ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ದುಃಖವೂ ಆಯ್ತು. ಮಗುವು ಮೂಲಾ...
ಮಾನವನ ಕುಟುಂಬದ ಬಾಂಧವ್ಯ ಅವರೊಳಗಿನ ಸಾಮರಸ್ಯ, ಇರಬೇಕಾದ ವ್ಯವಸ್ಥಿತ ರೂಪ, ನ್ಯಾಯಬದ್ಧತೆ ಎಲ್ಲವೂ ನಮ್ಮ ಧರ್ಮ ಸಂಸ್ಕೃತಿಯಲ್ಲಿ ಹುದುಗಿದೆ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯ ಹಿರಿಮೆ ಕೊಂಡಾಡುವಂತಾದ್ದು, ಲೋಕ ಮೆಚ್ಚುವಂತಾದ್ದಾಗಿದೆ. ನಮ್ಮ ಪುರಾಣಗಳಾದ ಮಹಾಭಾರತ,ರಾಮಾಯಣ ಮೊದಲಾದವುಗಳಲ್ಲಿ ಎಲ್ಲ ಬಾಂಧವ್ಯಗಳ ಅಡಿಪಾಯ, ಇರಬೇಕಾದ ರೀತಿ ನೀತಿಗಳನ್ನು ನೋಡುತ್ತೇವೆ. ಸುವ್ಯವಸ್ಥೆಯನ್ನು ಕಂಡು...
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ...
ನಿಮ್ಮ ಅನಿಸಿಕೆಗಳು…