ಬೆಳಕು-ಬಳ್ಳಿ

ನಿನ್ನೆಯ ತಪ್ಪುಗಳ ಲೆಕ್ಕ ಮರೆತುಬಿಡಿ

Share Button

ನಿನ್ನೆಯ ತಪ್ಪುಗಳಲೆಕ್ಕ ಮರೆತುಬಿಡಿ
ಇಂದಿನದನ್ನು ಇಂದಿಗೆ ಮುಗಿಸಿಬಿಡಿ
ನಾಳೆಯದನ್ನು ನಾಳೆಗೆ ಎತ್ತಿಟ್ಟುಬಿಡಿ
ಬದುಕನ್ನು ಖುಷಿಯಾಗಿ ಅನುಭವಿಸಿಬಿಡಿ

ಚಿಂತೆಗಳ ಚಿತೆಯಲ್ಲಿ ಸುಮ್ಮನೆ ದಹಿಸದಿರಿ
ಚಿಂತನ ಮಂಥನ ನಡೆಸಿ ಮುನ್ನಡೆಯಿರಿ
ಕಷ್ಟಗಳನ್ನು ಗುಡ್ಡೆ ಹಾಕಿಕೊಂಡು ಕೊರಗದಿರಿ
ಯೋಚಿಸಿ ಯೋಚಿಸಿ ಚಿಂತೆಯಲಿ ಮರುಗದಿರಿ

ಇಂದು ಇದ್ದಂತೆ ಬದುಕು ನಾಳೆ ಇರುವುದಿಲ್ಲ
ಏನೇ ಬರಲಿ ಜೀವನದಿ ಎದುರಿಸಲೇ ಬೇಕಲ್ಲ
ಕಷ್ಟಗಳು ಇರದ ಬದುಕು ಬದುಕೇ ಅಲ್ಲ
ಕಷ್ಟ ನಷ್ಟಗಳ ಜೈಸಿದಾಗ ಬದುಕು ಸವಿಬೆಲ್ಲ

ನಿತ್ಯವೂ ಹೋರಾಟದ ಬದುಕು ಇಲ್ಲಿ ನಮ್ಮದೆಲ್ಲ
ಇಲ್ಲಸಲ್ಲದ ಯೋಚನೆಮಾಡಿ ನೋಯಬೇಕಿಲ್ಲ
ಇರುವುದನ್ನ ನೋಡಿ ನಾವು ಖುಷಿಪಡಬೇಕಲ್ಲ
ಯಾರದೋ ಬದುಕಿನ ಜೊತೆ ಹೋಲಿಕೆ ಬೇಕಿಲ್ಲ

ಪರಿಸ್ಥಿತಿ ಮನಸ್ಥಿತಿ ಬದಲಾಗುತ್ತಲೇ ಇರುವುದು
ಹತ್ತಿರ ಇರುವುದು ಕೈ ಜಾರಿ ಹೋಗುವುದು
ಗೊತ್ತೇ ಆಗದಂತೆ ಇನ್ನೇನೋ ನಮ್ಮದಾಗುವುದು
ಯಾವುದೂ ಶಾಶ್ವತವಾಗಿ ಜೊತೆಗೆ ಇರದು
ಇರುವುದನ್ನ ಗೌರವಿಸುವುದ ಮರೆಯಬಾರದು

ನಾಗರಾಜ ಜಿ. ಎನ್. ಬಾಡ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *