ನಿನ್ನೆಯ ತಪ್ಪುಗಳಲೆಕ್ಕ ಮರೆತುಬಿಡಿ
ಇಂದಿನದನ್ನು ಇಂದಿಗೆ ಮುಗಿಸಿಬಿಡಿ
ನಾಳೆಯದನ್ನು ನಾಳೆಗೆ ಎತ್ತಿಟ್ಟುಬಿಡಿ
ಬದುಕನ್ನು ಖುಷಿಯಾಗಿ ಅನುಭವಿಸಿಬಿಡಿ
ಚಿಂತೆಗಳ ಚಿತೆಯಲ್ಲಿ ಸುಮ್ಮನೆ ದಹಿಸದಿರಿ
ಚಿಂತನ ಮಂಥನ ನಡೆಸಿ ಮುನ್ನಡೆಯಿರಿ
ಕಷ್ಟಗಳನ್ನು ಗುಡ್ಡೆ ಹಾಕಿಕೊಂಡು ಕೊರಗದಿರಿ
ಯೋಚಿಸಿ ಯೋಚಿಸಿ ಚಿಂತೆಯಲಿ ಮರುಗದಿರಿ
ಇಂದು ಇದ್ದಂತೆ ಬದುಕು ನಾಳೆ ಇರುವುದಿಲ್ಲ
ಏನೇ ಬರಲಿ ಜೀವನದಿ ಎದುರಿಸಲೇ ಬೇಕಲ್ಲ
ಕಷ್ಟಗಳು ಇರದ ಬದುಕು ಬದುಕೇ ಅಲ್ಲ
ಕಷ್ಟ ನಷ್ಟಗಳ ಜೈಸಿದಾಗ ಬದುಕು ಸವಿಬೆಲ್ಲ
ನಿತ್ಯವೂ ಹೋರಾಟದ ಬದುಕು ಇಲ್ಲಿ ನಮ್ಮದೆಲ್ಲ
ಇಲ್ಲಸಲ್ಲದ ಯೋಚನೆಮಾಡಿ ನೋಯಬೇಕಿಲ್ಲ
ಇರುವುದನ್ನ ನೋಡಿ ನಾವು ಖುಷಿಪಡಬೇಕಲ್ಲ
ಯಾರದೋ ಬದುಕಿನ ಜೊತೆ ಹೋಲಿಕೆ ಬೇಕಿಲ್ಲ
ಪರಿಸ್ಥಿತಿ ಮನಸ್ಥಿತಿ ಬದಲಾಗುತ್ತಲೇ ಇರುವುದು
ಹತ್ತಿರ ಇರುವುದು ಕೈ ಜಾರಿ ಹೋಗುವುದು
ಗೊತ್ತೇ ಆಗದಂತೆ ಇನ್ನೇನೋ ನಮ್ಮದಾಗುವುದು
ಯಾವುದೂ ಶಾಶ್ವತವಾಗಿ ಜೊತೆಗೆ ಇರದು
ಇರುವುದನ್ನ ಗೌರವಿಸುವುದ ಮರೆಯಬಾರದು

ನಾಗರಾಜ ಜಿ. ಎನ್. ಬಾಡ



