ಹುಡುಕಿದೆ ಆ ನನ್ನ ದೇವರ!
ಗುಡಿಯ ಕಂಬಗಳಲಿ
ಶಿಲೆಯ ಕಂಗಳಲಿ
ದಾಸರ ಪದಗಳಲಿ
ತೀರ್ಥದ ಧಾರೆಯಲಿ
ಪ್ರಸಾದದ ಕಣದಲಿ
ಭಕ್ತ ಜನರ ಭಕ್ತಿಯಲಿ
ಕಣ್ಣು ಮುಚ್ಚಿದ ಮರುಕ್ಷಣ
ಪಿಸುಗುಟ್ಟಿತು ಧ್ವನಿಯೊಂದು
‘ಅಲೆಯಬೇಡ ಅಲೆಮಾರಿ
ಇರುವೆ ನಾ ಸದಾ ನಿನ್ನಲ್ಲೇ
ಧರ್ಮದಲಿ, ಕರ್ಮದಲಿ
ನಿನ್ನ ಪಾಪ ಪುಣ್ಯದಲಿ
ಮಾತಿನ ಧಾಟಿಯಲಿ
ನಿನ್ನ ಹಾವ ಭಾವದಲಿ
ಪರಿಶುದ್ಧ ನಗುವಿನಲಿ
ನಿರ್ಮಲ ಹೃದಯದಲಿ!’

-ಮಾಲಿನಿ ವಾದಿರಾಜ್

