ಮನೋ ವೃಕ್ಷ

Share Button

ಭರವಸೆ ಆಶಾಭಾವನೆಗಳೆಂಬ ಎಲೆಗಳುದುರಿವೆ ಮನಸ್ಸೆಂಬ ಮರದಿಂದ
ಉತ್ಸಾಹ ಆಸಕ್ತಿಗಳೆಂಬ ಟೊಂಗೆಗಳು ಬೋಳಾಗಿವೆ ಬುಡದಿಂದ

ಸಂತಸ ಖುಷಿಗಳೆಂಬ ಹಣ್ಣುಗಳು ಒಣಗಿ ಹೋಗಿವೆ ಸ್ಪರ್ಧೆಯ ಬಿರು ಬಿಸಿಲಿನಿಂದ

ಕಾರ್ಯನಿರ್ವಹಣೆಯೆಂಬ ಹಸಿರು ತುಂಬಿತ್ತು ಮೊದಲು ವೃಕ್ಷದಲಿ
ಮೆಚ್ಚುಗೆಯೆಂಬ ಹಕ್ಕಿ ಗೂಡು ಕಟ್ಟಿತ್ತು ಆಗ ತರುವಿನಲಿ

ಹಲವು ಮೊದಲುಗಳ ಫಲಗಳು ತುಂಬಿ ಜಂಗಿತ್ತು
ಬಂದು ಹೋಗುವವರ ಕೈ ಬೀಸಿ ಕರೆದಿತ್ತು

ಎಲ್ಲೆಲ್ಲಿಯೂ ಸಂಭ್ರಮ ಸಡಗರ‌ ತುಂಬಿತ್ತು
ತೆಗೆದುಕೊಂಡ ನಿರ್ಧಾರಗಳೆಲ್ಲಾ ಸರಿಯಾಗಿ ಯಶಸ್ಸು ಕಂಡಿತ್ತು

ಮುಟ್ಟಿದ್ದೆಲ್ಲಾ ಬಿಡದೆ ಚಿನ್ನವಾಗಿ ಸಮಾಜದಲಿ ಬೇಡಿಕೆಯಿತ್ತು

ಯಾರ ಶಾಪದ ಫಲವೋ ಇಲ್ಲ ಅತಿಯಾದ ಆತ್ಮವಿಶ್ವಾಸವೋ
ಮಾಡುವ ಪ್ರತಿ ಕಾರ್ಯದಲಿ ಗೆಲುವು ಕೂದಲೆಳೆ ಅಂತರದಲ್ಲಿ ತಪ್ಪುತ್ತಿದೆ

ನಿನ್ನ ಮೊನ್ನೆ ಬಂದ ಎಂತೆಂತವರೆಲ್ಲಾ ಮೀಸೆ ತಿರುವಂತಾಗಿದೆ
ಎಮ್ಮ‌ ಕಂಡು ಕುಹಕ ನಗೆ ಬೀರುವಂತಾಗಿದೆ

ಎಲ್ಲಾ ಸಂಕಟವ ಕಳೆಯುವ ಸರ್ವಶಕ್ತನೇ….

ನೀನೇ ಇದಕೆ ಸೂಕ್ತ ಪರಿಹಾರ ನೀಡು
ಪಟ್ಟ ಪರಿಶ್ರಮಕ್ಕೆ ತಕ್ಕಂತೆ ಫಲವ ಕೊಡು

ಬಿದ್ದ ಎಲೆಗಳ ಒಟ್ಟುಗೂಡಿಸಿ ಪೋಷಣೆಗೆ ಗೊಬ್ಬರವಾಗಿಸುವ ಶಕ್ತಿ ದಯಪಾಲಿಸು
ದುಡಿಮೆ ತಾಳ್ಮೆಯ ನೀರು ಹರಿಸಿ ಮತ್ತೆ ಮರವ ಚಿಗುರಿಸುವ ಭಾಗ್ಯ ಕರುಣಿಸು

-ಕೆ.ಎಂ ಶರಣಬಸವೇಶ

9 Responses

  1. ಭಗವಂತನಲ್ಲಿ… ಮೊರೆಯಿಡುವ…ಪರಿ..ಮನೋವೃಕ್ಷ..ಕವನದಲ್ಲಿ.. ಸೊಗಸಾಗಿ ಅನಾವರಣ ವಾಗಿದೆ…ಧನ್ಯವಾದಗಳು ಸಾರ್

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. Anonymous says:

    ಧನ್ಯವಾದಗಳು ನಾಗರತ್ನ ಹಾಗೂ ನಯನ ಮೇಡಂ ಗೆ

  4. ವಿದ್ಯಾ says:

    ಚೆನ್ನಾಗಿ ದೆ

  5. ಶಂಕರಿ ಶರ್ಮ says:

    ಪಟ್ಟ ಶ್ರಮಕ್ಕೆ ತಕ್ಕುದಾದ ಪ್ರತಿಫಲವನ್ನು ಬೇಡಿದ ಮೊರೆಯು ಮನೋವೃಕ್ಷಕ್ಕೆ ನೀರುಣಿಸಿ ಸಂಪದ್ಭರಿತವಾಗಿ ಮಾಡುವುದರಲ್ಲಿ ಸಂಶಯವಿಲ್ಲ…ಚಂದದ ಕವನ!

  6. Padma Anand says:

    ಸೊಗಸಾದ ಶಿರ್ಷಿಕೆ ಹೊತ್ತ ಸುಂದರ ಕವನ.

  7. Anonymous says:

    ಓದಿ ಪ್ರತಿಕ್ರಿಯಿಸಿದ ಎಲ್ಲಾ ಸಹೃದಯರಿಗೆ ವಂದನೆಗಳು

  8. Phani says:

    ಶಿಶಿರ ಹೊರಟಿಹೋಯಿತು. ವಸಂತ ಬರುವ ಸಮಯ ಬಂದಿದೆ. ಹೊಸ ಚಿಗುರು ಬರಲಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: