ಅನುರಾಗ ಸಿಂಚನ

Share Button

Sahana Pundikai2

ನಾ ಭುವಿಯಾದೆ, ನೀ ಮುಗಿಲಾದೆ

ಒಂದಾಗಿಸಿದೆ ನಮ್ಮಿಬ್ಬರ, ಈ ಪ್ರೀತಿಯಾ ಸೋನೆ ಮಳೆ.

ಮಳೆಯ ಹನಿಯ ಸಿಂಚನ ಚಿಗುರಿಸಿದೆ ಹೊಸ ಚೇತನವ

ರಮಿಸಿದೆ ಒಣಗಿದ್ದ ಬರಡು ನೆಲವ.

ಎದೆಯ ಬಾಗಿಲಿಗೆ ಹನಿ ಬಿದ್ದ ಸದ್ದು,

ಹಿತವಾಗಿದೆ, ಸುಖವೆನಿಸಿದೆ.

ಮಧ್ಯರಾತ್ರಿಯ ಮೌನವ ಸೀಳಿದ ಆ ಹನಿಯ ಸದ್ದು,

ನುಡಿಸುತ್ತಿದೆ ಅನುರಾಗದ ಸ್ವರಗಳ, ಮತ್ತೆ ಬಿದ್ದು.

ಎದೆಯೊಳಗಣ ತುಂಬಿತುಳುಕುವ ಪ್ರೀತಿಯ ತರಂಗಗಳೊಳಗೊಂದು ಪ್ರೇಮಕಾವ್ಯ,

ಮಧುರ ಕಾವ್ಯಕ್ಕೊಂದು ಹೊಸ ರಾಗ ತಾಳ.

ಇಳೆಯ ಕೆನ್ನೆಯ ತುಂಬಾ ಮುಗಿಲು ಸುರಿಸಿದ ಮುತ್ತಿನಾ ಹನಿಗಳುcatching-raindrops

ರೆಪ್ಪೆಯ ಅಂಚಿನಿಂದ ಜಾರಿ, ಕೆನ್ನೆಯಾ ಗುಳಿಯೊಳು

ಪವಡಿಸಿದಾ ನಗುವಿನಾ ಸ್ಪಟಿಕಗಳು.

ಚಂದಿರನೂ ಮಂಕಾಗಿ ಕುಳಿತಿರಲು,

ಮಳೆ ಸುರಿವ ನೆಪವಿರಲು,

ಮಧುರ ಮೌನವೇ ಹಿತವೆನಿಸದಿರು.

ಕೋಪ-ತಾಪ, ದುಗುಡ ದುಮ್ಮಾನ ನೀರ ಸೆರೆಯೊಳು

ನಿನ್ನ ಪ್ರೀತಿಯ ಹರಿವಿಗೆ ಮತ್ತೆ ಮರೆಯೊಳು

ನೈದಿಲೆಯು ಬಿರಿದು ನಗುವ ಸದ್ದು ಕಾರಿರುಳು.

ಪ್ರೀತಿಯ ಮಳೆಯ ಸ್ಪರ್ಶಕೆ ಇಳೆಯು,

ಭಾವದಾ ಕಡಲೊಳೊಂದಾಗಿ ಬೆರೆತು,

ಬರೆದಿದೆ ಅಮರಪ್ರೇಮಕ್ಕೊಂದು ಹೊಸ ಭಾಷ್ಯವಿಂದು.

 

 

–ಸಹನಾ ಪುಂಡಿಕಾಯಿ

2 Responses

  1. Nagaraj Madegowda says:

    ಪ್ರೇಮ ಕಾವ್ಯ ದ ಧಾರೆ ಹೀಗೆ ಸದಾ ಹರಿಯುತ್ತಿರಲಿ..ಕವಿತೆ ಹಿತವಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: