ಚಿಕ್ಕಪುಟ್ಟ ವಿಷಯಕ್ಕೂ ಅರಿತು ಅರಿಯದೆಯೋ
ನಾವು ಜಗಳ ಆಡುವುದು ಎಷ್ಟೊಂದು ಸುಲಭ
ಪ್ರತಿದಿನ ಇನ್ನೊಬ್ಬರೊಂದಿಗೆ ಹೊಂದಿಕೊಂಡು
ಜೀವನದಿ ಮುಂದೆ ಸಾಗುವುದು ಎಷ್ಟೊಂದು ಕಷ್ಟ
ಸಂಕೀರ್ಣತೆಯಿಂದ ಕೂಡಿದ ನಮ್ಮ ಬದುಕಿನಲಿ
ಹುಡುಕಲಾಗದು ಮನದೊಳಗಿನ ಪ್ರೀತಿಯ
ಬರೀ ಮಾತಲ್ಲಿ ಹೇಳಲಾಗದು ಒಲವ ಪರಿಯ
ಆರಿಯಲಾಗದು ಮೌನದ ಹಿಂದಿನ ಶಕ್ತಿಯ
ತಲುಪಲಾಗದು ಮನದ ಅಂತರಾಳದ ನೆಲೆಯ
ಗುರುತಿಸಲಾಗದೇ ಹೋದರೆ ಒಲವ ಬೆಲೆಯ
ಚಿಕ್ಕ ಪುಟ್ಟ ವಿಷಯ ಆಗಬಾರದು ಸಂಕೀರ್ಣ
ಖುಷಿಯ ಕ್ಷಣಗಳು ಆಗುವುದು ಅಪೂರ್ಣ
ಯಾರೂ ಇಲ್ಲ ಈ ಜಗದೊಳಗೆ ಪರಿಪೂರ್ಣ
ಹೊಂದಿಕೊಂಡರೆ ಮಾತ್ರ ಇಷ್ಟಾರ್ಥ ಸಂಪೂರ್ಣ
ಬದುಕು ಆಗಬಾರದು ಎಂದಿಗೂ ಅಪೂರ್ಣ
ಕ್ಷುಲ್ಲಕ ಕಾರಣವನ್ನು ಮರೆತು ಬದುಕಬೇಕು
ಪ್ರೀತಿ ಆತ್ಮೀಯತೆಯನ್ನು ಬಿತ್ತಿ ಬೆಳೆಯಬೇಕು
ಅಸಹನೆಯ ಬಿಟ್ಟು ಸಹನೆಯ ಹೊಂದಬೇಕು
ಒಬ್ಬರನ್ನೊಬ್ಬರು ಪರಸ್ಪರ ಸದಾ ಗೌರವಿಸಬೇಕು
ಇರುವುದ ಮರೆತು ಹುಡುಕುವುದ ಬಿಡಬೇಕು
-ನಾಗರಾಜ ಜಿ.ಎನ್.ಬಾಡ,ಕುಮಟ


Very interesting and thoughtful
ಚೆನ್ನಾಗಿದೆ ಕವನ
ಆಶಯ ಚೆನ್ನಾಗಿದೆ
ಕವನ ಚೆನ್ನಾಗಿದೆ ಸಾರ್
ತುಂಬಾ ಅರ್ಥಪೂರ್ಣ ವಾಗಿದೆ ಕವನ
ಹುಡುಕುವುದ ಬಿಡಬೇಕು
ಕೊನೆಯ ಸಾಲು ಅರ್ಥಗರ್ಭಿತ, ಒಂದಲ್ಲ ಒಂದನ್ನು ಹುಡುಕುವುದೇ ಜೀವನದ ವ್ಯರ್ಥ ಸಾಧನೆಯಾಗುವ
ಹೊತ್ತಲಿ ಈ ತಿಳಿವು ಅಮೂಲ್ಯ.
ಒಳಗೆ ಪಯಣಿಸದೇ ಹೊರಗೆ
ಹುಡುಕಿಕೊಂಡು ಹೊರಡುವ ಮಂದಿ ಅದೆಷ್ಟೋ
ನಿಮ್ಮ ಈ ಸಾಲು ನನಗೆ ಪ್ರೇರಣೆಯಾಗಿದೆ.
ಇರುವುದೆಲ್ಲವ ಬಿಟ್ಟು ಇಲ್ಲದುದ ಹುಡುಕುವುದೆ ಇಂದು ಮಾನವನ ಜೀವನವೆನಿಸಿದೆ. ಉತ್ತಮ ಸಂದೇಶವನ್ನು ಹೊತ್ತ ಕವನ ಚೆನ್ನಾಗಿದೆ.
ಕವಿತೆ ಅರ್ಥವತ್ತಾಗಿ ಮೂಡಿ ಬಂದಿದೆ.