ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ
ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ

ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ
ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ

ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು
ಭರವಸೆಯ ಬೆಳಕಿನ ಕನ್ನಡಿ ಬದುಕಿಗೆ ಆಶಾಕಿರಣ ಮೂಡಿಸಿತು ಸಖಿ

ತಿರೆಧರಿಸಿದ ಕ್ಷಮೆಯನು ಯೋಚಿಸಿ ಚಿತ್ತದ ಭೀತಿಯು ತೊಲಗಿತು
ಸಿರಿಯುಕ್ಕಿದ ಚೆಲುವಲಿ ಪಲ್ಲವಿಸಿ ಲತಾಕಾವಣ ನೋಡಿಸಿತು ಸಖಿ

ಪರಿಪುಷ್ಟ ಹಾಸದೆಸಳುಗಳ ಹರಡಿಸುತ ಪದ್ಮಗಳು ಸೊಗಸುಕ್ಕಿ ಬಿರಿಯಿತು
ಪರಿಶೋಭಿತ ಸೌಂದರ್ಯದಲಿ ಕಾಂತಿತೋರಣ ಕೂಡಿಸಿತು ಸಖಿ||

– ಪದ್ಮಾ ಆಚಾರ್ಯ, ಪುತ್ತೂರು  

3 Responses

  1. ನಯನ ಬಜಕೂಡ್ಲು says:

    Beautiful

  2. ASHA nooji says:

    WOOW

  3. ಶಂಕರಿ ಶರ್ಮ says:

    ಬಿರುನುಡಿಗಳಿಗೆ ಕುಗ್ಗದೆ, ನಿರಾಶಾ ಭಾವನೆ ತೊಲಗಿ, ಆಶಾ ಭಾವ ಎಚ್ಚೆತ್ತ ಬಗೆ ಅನುಪಮ!…ಪದ್ಮ ಬಿರಿದ ಪರಿ ಮನತುಂಬಿತು. ಸೊಗಸಾದ ಗಝಲ್..ಧನ್ಯವಾದಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: