‘ಬಹು ಕೆಡುಕೆನಿಸುತ್ತಿದೆ’

Share Button

ಕಾದ ಬಂಡೆಯ ಮೇಲೆ
ಭೋರ್ಗರೆದು ವಿಫಲವಾದ
ಮಳೆ ಹನಿಗಳ ನೆನೆದು

ವೃಥಾ ಕಳೆದ ಗಡಿಯಾರದ
ಮುಳ್ಳುಗಳ ಚಲನೆಯ
ಪ್ರತಿ ಕ್ಷಣಗಳ ನೆನೆದು

ಸೊಗಸು ನೋಟ ಕಾಣದ
ಇಂಪು ದನಿಯ ಕೇಳದ
ಇಂದ್ರಿಯಗಳ ನೆನೆದು

ಒಂದು ಹಿತವನು ಆಡದಿದ್ದ
ನಾಲಗೆಯ ಬೀಸು
ನುಡಿಗಳ ನೆನೆದು

ಸರಿ ದಾರಿಯಲಿ ನಡೆಯದೇ
ತಪ್ಪು ಹೆಜ್ಜೆ ಹಾಕಿದ
ಕಾಲುಗಳ ನೆನೆದು

ಮನ ಸಂತೈಸಿಕೋ ಎಂಬ
ಹಿತವಚನ ಮರೆತು
ದುಮ್ಮಾನಗೊಂಡ ಎದೆ ನೆನೆದು

ಸೂರ್ಯ ರಶ್ಮಿಗೂ ಚಂದಿರನ
ತಂಪಿಗೂ ಅರಳಿ
ನಲಿಯದ ಹೂಗಳ ನೆನೆದು

ಮತ್ತೇಕೆ ಈ ಜೀವ ಎಂಬ ನಿರ್ಜೀವ
ಭಾವದಲಿ ವ್ಯರ್ಥ ಮಾಡಿಕೊಂಡ
ಬದುಕುಗಳ ನೆನೆ ನೆನೆದು..

– ವಸುಂಧರಾ ಕದಲೂರು

 

6 Responses

  1. Savithri bhat says:

    ಅರ್ಥಪೂರ್ಣ ಕವನ

  2. ನಯನ ಬಜಕೂಡ್ಲು says:

    Beautiful. ಬದುಕು ದೊರೆತಿದೆ ಎಂದಾದ ಮೇಲೆ ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು ಅನ್ನುವ ಸಂದೇಶವಿದೆ ಕೊನೆಯಲ್ಲಿ

  3. Hema says:

    ‘ಇರುವುದೆಲ್ಲವ ಬಿಟ್ಟು ಇರದಿರುವುದರ ಕಡೆಗೆ ತುಡಿವ ಮನ’..ನೆನಪಾಯಿತು. ಚೆಂದದ ಕವನ.

  4. ASHA nooji says:

    SUPER

  5. Vidyashree.s.adoor says:

    ಜೀವನ ವನ್ನು ಬದುಕುವುದೇ ಬೇರೆ,ಅನುಭವಿಸುವುದೇ ಬೇರೆ. ಕೆಲವರಿಗೆ ಮನಸ್ಥಿತಿಯ ಅಭಾವ ವಾದರೆ ಇನ್ನೂ ಕೆಲವರಿಗೆ ಪರಿಸ್ಥಿತಿ ಯ ಅಭಾವ. ಚೆನ್ನಾಗಿ ಬರೆದಿದ್ದೀರಿ ಮೇಡಂ.

  6. ಶಂಕರಿ ಶರ್ಮ says:

    ಚಂದದ ಕವನ. ಇರುವುದರ ಬಗ್ಗೆ ಗಮನವೀಯದೆ, ಇಲ್ಲದುದರ ಬಗ್ಗೆ ತುಡಿಯುವ ಮನವೇ ದುಃಖಕ್ಕೆ ಮೂಲ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: