ಮನದೀಪ ಬೆಳಗಲಿ..

Share Button

ನಿರಾಸೆ ನಿಶೆಯದು ಓಡಿ
ಬಂತು ಆಸೆಯ ಬೆಳಕು
ಮನಕೆ ಮುದ ತಾ ನೀಡಿ
ಸಂಭ್ರಮದ ಮೆಲುಕು

ಅಭ್ಯಂಜನದ ಪರಿಯ
ತಿಳಿಯೆ ಕೊಳೆ ನಿರ್ನಾಮ
ಅಂತರಂಗದ ಕೊಳೆಯ
ತೊಳೆಯೆ ದೇವರನಾಮ

ಕೆಟ್ಟ ಆಸೆಗಳ ಅಸುರ
ನರಕನನು ತಾ ಮೆಟ್ಟಿ
ನಿಲ್ಲಬೇಕಿದೆ ಜನರ
ಮನ ಕದವ ತಟ್ಟಿ

ಸುತ್ತ ದೀಪಾಲಂಕಾರ
ಝಗಝಗಿಸಿ ಸಿಂಗರಿಸಿ
ಪ್ರೀತಿ ಕರುಣೆಯ ಹಾರ
ಸೊಗಸಿನಲಿ ತೊಡಿಸಿ

ಬೆಳಕಿನಾ ಪ್ರಣತಿಯದು
ಬೆಳಗೆ ಮನ ಗುಡಿಯಲ್ಲಿ
ಸಂತಸದ ಭಾವವನು
ಜನ ಮನದಿ ಹರಡಿ…

ತಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಗೆ ಹೃತ್ಪೂರ್ವಕ ಶುಭಾಶಯಗಳು🙏🙏

– ಶಂಕರಿ ಶರ್ಮ, ಪುತ್ತೂರು.

4 Responses

  1. ಕಾಂತಿ ಎಸ್ ಎ says:

    ಚಂದದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: