ಬೆಳಕು-ಬಳ್ಳಿ

ಬುದ್ಧನಾಗಿಸಿದೆಯಲ್ಲೋ!

Share Button

 

 

 

 

 

ನನ್ನೊಳಗೆ ಕವಿದ ಮಂಕನುರುಳಿಸಿ
ಒಲುಮೆ ಬತ್ತಿದ ಎದೆಯೊಳಗೆ
ಪ್ರೀತೀಯ ಸುಧೆಯ ಹರಿಸಿ
ಕೊಂದೆಯಲ್ಲವೋ ನೀ ಎನ್ನ.

ಕಾಣದಿಹ ಲೋಕ ದರ್ಶನವ
ನಿನ್ನ ಕಂಗಳಲ್ಲಿ ಕಾಣಲು
ನಾ ಭ್ರಾಂತಿಯಾದೆನಲ್ಲೋ.
ಹಿತನುಡಿಯ ಮಂಜನು ಮೈಮೆಲೆರಚಿ

ಪ್ರೇಮ ಮಂತ್ರವ ಸಾರಿದ
ಒಲುಮೆ ಸಾಧಕ ನೀನು.
ರಕ್ತ ಮಾಂಸದ ಜೊತೆಗೆ ದಿನ ದೂಡುತಲಿರಲು
ಪ್ರೀತಿ ಕರುಣೆಯ ಜ್ಯೋತಿಯ
ಬೆಳಗಿಸಿದೆಯಲ್ಲೋ.

ಓ! ಕರುಣಾಳು
ಪೊರೆದೆ ಇಂದೆನ್ನನು
ಬುದ್ಧನಾಗಿದೆಯಲ್ಲೋ
ನಿನ್ನಂತೆ ನನ್ನನು.

– ರೇಷ್ಮಾ ಉಮೇಶ,  ಭಟ್ಕಳ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *