Author: Vijaya Subrahmanya

7

ಮಹಿಳೆಯ ಕೌಟುಂಬಿಕ ಬಾಂಧವ್ಯ ಹಾಗೂ ಬದ್ಧತೆ

Share Button

ಭಾರತೀಯ ಮಹಿಳೆಯ ಸಂಸ್ಕೃತಿ- ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿರುವಂತಾದ್ದು. ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು. ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!. ಒಬ್ಬ ಸ್ತ್ರೀ ಅಥವಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ.ಹುಟ್ಟು ಕುಟುಂಬ...

10

ಶ್ರೀರಾಮ ಸಖ ಸುಗ್ರೀವ

Share Button

ಮಾನವ ಒಂಟಿ ಜೀವಿಯಲ್ಲ. ಸಂಘಜೀವಿ, ಮನೆಯೊಳಗೆ ಸಹಕುಟುಂಬಿಕರು ಇದ್ದರೆ ಹೊರಗೆ ಸ್ನೇಹಿತರು ಇದ್ದಾರೆ. ಗೆಳೆತನ ಎಂಬುದು ಪವಿತ್ರವಾದ ಬಂಧನ. ಗೆಳೆತನವು ಸಮಾನ ವಯಸ್ಕರಲ್ಲಿ, ಒಂದೇ ಅಭಿರುಚಿ ಉಳ್ಳವರಲ್ಲಿ, ಸಮಾನ ಹವ್ಯಾಸಿಗಳಲ್ಲಿ, ಹೀಗೆ ವಿವಿಧ ಮೆಟ್ಟಲುಗಳಲ್ಲಿ ತಲೆದೋರಬಹುದು ಹಾಗೂ ಗಟ್ಟಿಯಾಗಿ ತಳವೂರಬಹುದು. ಹಾಗೆಯೇ ಗೆಳೆತನ ಮಾಡುವಾಗಲೂ ಜಾಗರೂಕರಾಗಿರಬೇಕಾದದ್ದು ಅವಶ್ಯ....

6

ಪರಮ ಪುರುಷ ಪರಾಶರ

Share Button

ಪುರಾಣಗಳು ಹದಿನೆಂಟು. ಅವುಗಳಲ್ಲಿ ಮಹಾಭಾರತವು ಶ್ರೇಷ್ಠವಾದುದು, ‘ಪಂಚಮ ವೇದ’ ಎಂದು  ಕರೆಯಲ್ಪಡುವ ಈ ಉದ್ಗೃಂಥವು ವೇದ, ಉಪನಿಷತ್ತುಗಳ ಸಾರ. ತತ್ವದರ್ಶನಗಳನ್ನು ಸಾವಿರಾರು ವರ್ಷಗಳಿಂದ ಪ್ರಸಾರ ಮಾಡುತ್ತಾ ಬಂದಿದೆ. ಸಹಸ್ರ ಸಹಸ್ರ ಜನರ ಜ್ಞಾನದಾಹವನ್ನು ತಣಿಸಿದೆ. ಅದೆಷ್ಟೋ ಜನರ ಸುಪ್ತ ಪ್ರತಿಭೆಗಳನ್ನು ಬೆಳಗಿಸಿದೆ.  ‘ಮಹಾಭಾರತ’ ಎಂಬ ಹೆಸರಿನಿಂದಲೇ ಈ...

12

ಮಹಾಮಹಿಮ ಋಷ್ಯಶೃಂಗ

Share Button

ಕೆಲವರ ಕಾಲ್ಗುಣ ಒಳ್ಳೆಯದು. ಅವರು ಹೋದಲ್ಲಿ ಸುಭಿಕ್ಷೆ, ಮುಟ್ಟಿದ್ದೆಲ್ಲ ಚಿನ್ನ. ಅವರ ಉಪಸ್ಥಿತಿಯನ್ನು ಎಲ್ಲರೂ ಬಯಸುವವರು. ಅವರ ಆಗಮನವನ್ನು ಎಲ್ಲರೂ ನಿರೀಕ್ಷಿಸುವರು. ಯಾವುದೇ ಕಾರ್ಯಕ್ರಮಕ್ಕೆ ಅವರು ಬಂದರೂಂತಂದ್ರೆ ಜನ ಜಂಗುಳಿ. ಹುಟ್ಟಿನಿಂದಲೇ ಅವರು ಲೋಕಪ್ರಿಯರು. ಇಂತಹ ಅದೃಷ್ಟವಂತರು ಕೆಲವೇ ಮಂದಿ. ಆದರೆ ಇಂತಹವರು ಹಿಂದೆ ಇದ್ದರು. ಇಂದೂ...

8

ಲೋಕದಲ್ಲಿ ಹೆಸರುವಾಸಿಯಾದ ಸಾಕು ತಂದೆ…

Share Button

‘ಅನಾಥೋ  ದೈವ ರಕ್ಷಕಃ’  ದಿಕ್ಕಿಲ್ಲದವರನ್ನು, ತನ್ನವರು ಯಾರೆಂದು ತಿಳಿಯದವರನ್ನು, ತನ್ನವರಿಂದಲೇ  ಪೀಡನೆಗೊಳಗಾದವರನ್ನು ಕಷ್ಟ ಇಲ್ಲವೇ ಅಪಾಯದ ಸ್ಥಿತಿಯಲ್ಲಿದ್ದಾಗ  ಒಂದಿಲ್ಲೊಂದು ವಿಧದಲ್ಲಿ ದೇವರು ರಕ್ಷಿಸುತ್ತಾನೆ. ಇದು ಆಸ್ತಿಕರ, ಅನುಭವಿಗಳ ವಿಶ್ವಾಸ. ಕೆಲವೊಮ್ಮೆ ಇಂತಹ ರಕ್ಷಣೆಯು ಯಾವುದೋ ಒಂದು ಮಹತ್ಕಾರ್ಯಕ್ಕೋ ಲೋಕಕಲ್ಯಾಣಕ್ಕೋ ದೈವ ಸಂಕಲ್ಪವಾಗಿ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಪುರಾಣದೊಳಗೆ...

5

ಭದ್ರ ಭ್ರಾತೃ ಪ್ರೇಮಿ ಭರತ

Share Button

ಭಾರತದ ಕುಟುಂಬ ವ್ಯವಸ್ಥೆ ಹಿರಿದಾದುದು. ಭದ್ರತೆ, ಪವಿತ್ರತೆ, ಬಂಧುತ್ವ, ಅನ್ಯೋನ್ಯತೆ ಮೊದಲಾದ ಮೌಲ್ಯಗಳಿಂದೊಡಗೂಡಿ ಆದರ್ಶವಾದುದು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಹೇಗಿರಬೇಕೆಂಬ ಮಾರ್ಗದರ್ಶನ ನಮ್ಮ ಪುರಾಣಗಳಿಂದ,ಸನಾತನ ಸಂಸ್ಕೃತಿಯಿಂದ ವೇದ್ಯ. ಸತೀಧರ್ಮ, ಪತಿಧರ್ಮ, ಪಿತನ ಧರ್ಮ, ತಂದೆ-ತಾಯಿಯರ ಧರ್ಮ ಹೀಗೆ ಪ್ರತಿಯೊಬ್ಬರ ಕರ್ತವ್ಯವನ್ನೂ ತಿಳಿಸಿ ಹೇಳುತ್ತವೆ ನಮ್ಮ ವೇದೋಪನಿಷತ್ತುಗಳು. ರಾಮಾಯಣವೆಂಬ...

8

ಶಕ್ತಿವಂತ ಸ್ವಾಮಿಭಕ್ತ ಆಂಜನೇಯ

Share Button

ಯಾವುದೇ ಸಣ್ಣ-ಪುಟ್ಟ ಕಾರ್ಯವೂ ಯಶಸ್ವಿಯಾಗಬೇಕಾದರೆ ನಿಷ್ಠೆ, ಏಕಾಗ್ರತೆ ಬೇಕು. ವಿಶೇಷವಾದ ಕಾರ್ಯ  ? ಪೂರ್ವಯೋಜಿತವಾಗಿದ್ದರೆ ಸುಗಮವಾಗಿ ಸಾಗ್ಕಾಬಹುದು. ಹಾಗಾದರೆ ಘನವಾದ ಕಾರ್ಯ..? ಬಲವಾದ ಶಕ್ತಿ, ಸಾಮರ್ಥ್ಯ ಬೇಕೇ ಬೇಕು. ಎಲ್ಲದಕ್ಕೂ ಮಿಗಿಲಾಗಿ ಚಾತುರ್ಯ, ಜಾಣ್ಮೆ ಅತೀ ಅಗತ್ಯ. ಮಾನವಾತೀತ ಕಾರ್ಯಕ್ಕೆ ‘ಸಿದ್ಧಿ’ ಬೇಕು. ಸಿದ್ಧಿ ಕೈಗೂಡಿದವರು ಎಂತಹ...

5

ದಶಕಂಠನ ವೈರಿಯ ಪಿತ, ದಶರಥ

Share Button

ದುಷ್ಟರ ಶಿಕ್ಷೆಗಾಗಿ ಶಿಷ್ಟರ ರಕ್ಷೆಗಾಗಿ, ಧರ್ಮ ಸಂಸ್ಥಾಪನೆಗಾಗಿ, ಲೋಕ ಕಲ್ಯಾಣಕ್ಕಾಗಿ, ಮಹಾವಿಷ್ಣು ದಶಾವತಾರವೆತ್ತಿದ ವಿಚಾರ ನಮಗೆ ಪುರಾಣಗಳಿಂದ ಲಭ್ಯ.ದಶಾವತಾರಗಳೆಂದರೆ- ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ- ಹೀಗೆ ಹತ್ತು ಅವತಾರಗಳು. ದಶಾವತಾರಗಳಲ್ಲಿ ರಾಮಾವತಾರವು ಶ್ರೇಷ್ಠವಾದುದು. ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ರಾಮಾಯಣವು...

7

ಹಣದಲ್ಲಿ ಬಡವ,ಗುಣದಲ್ಲಿ ಶ್ರೀಮಂತ…

Share Button

ಹಣವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಕೆಲವರ ಇಂಗಿತ. ‘ತಾಯಿ-ತಂದೆಯರನ್ನುಳಿದು ಮತ್ತೆಲ್ಲವನ್ನೂ ದುಡ್ಡಿಗೆ ಪಡೆಯಬಹುದು’ ಎಂಬುದು  ಜಾನಪದೀಯ ವ್ಯಂಗ್ಯೋಕ್ತಿಯೂ ಹೌದು. ಇಂದಿನ ದಿನಗಳಲ್ಲಂತೂ ಇದು ನೂರಕ್ಕೆ ನೂರು ಸತ್ಯವಾದ ಮಾತು. ‘ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ’ ಎಂಬ ಮಾತು ಕೂಡಾ ಈ ನಿಟ್ಟಿನಲ್ಲೇ ಹುಟ್ಟಿಕೊಂಡದ್ದು. ಹಣಕ್ಕೆ...

7

ತನ್ನನ್ನು ಸಜೀವವಾಗಿ ಶ್ರೀಹರಿಗೆ ಅರ್ಪಿಸಿದವ…

Share Button

ಯಾರಲ್ಲಿ ಒಳ್ಳೆಯ ಗುಣವಿದ್ದರೂ ಅವರನ್ನು ಗೌರವಿಸುವುದು, ಪೂಜಿಸುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿ. ಅವರು  ದೇವತೆಗಳಿರಬಹುದು, ಅಸುರರಿರಬಹುದು. ಮೇಲ್ವರ್ಗ, ಕೆಳವರ್ಗ, ಯಾವುದೇ ಸ್ತರಗಳಲ್ಲಿರಬಹುದು. ಅಸುರರಾದರೂ ಅವರಲ್ಲಿ ಕೆಲವೊಂದು ಒಳ್ಳೆಯ ಗುಣಗಳಿರಬಹುದು. ಒಳ್ಳೆಯ ಗುಣಕ್ಕೆ ಮತ್ಸರವಾಗಲೀ ದ್ವೇಷವಾಗಲೀ ಇರಬಾರದೆಂಬುದು ನಮ್ಮ ಪೂರ್ವಿಕರಿಂದ ಬಂದ ಹಿತೋಪದೇಶ. ದಾನ, ತ್ಯಾಗ ಮೊದಲಾದ...

Follow

Get every new post on this blog delivered to your Inbox.

Join other followers: