Author: Vijaya Subrahmanya
ಅಷ್ಟೆಶ್ವರ್ಯಗಳಲ್ಲಿ ಆರೋಗ್ಯ ಭಾಗ್ಯವೇ ಮೇಲು. ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ ಎಂಬ ಸೂಕ್ತಿ ಇದೆ. ಆರೋಗ್ಯ ಹೀನ ಮಾನವನಿಗೆ ಯಾವುದೇ ಸಕಾರಾತ್ಮಕ ಸಾಧನೆ ಸಾಧ್ಯವಾಗಲಾರದು. ಧನ ನಷ್ಟಗೊಂಡರೆ ಮತ್ತೆ ತುಂಬಬಹುದು. ಆದರೆ ಆರೋಗ್ಯ ಹದಗೆಟ್ಟರೆ…? ಅದನ್ನು ಭರಿಸುವುದು ಅಷ್ಟೇನು ಸುಲಭದ ಮಾತಲ್ಲ. ಅನಾರೋಗ್ಯ ಮನುಷ್ಯನಿಗೆ ಬೇರಾವುದೇ ಭಾಗ್ಯವಿದ್ದರೂ ಅನುಭವಿಸುವ...
‘ಋಣಾನುಬಂಧ ರೂಪೇಣ ಪಶು, ಪತಿ, ಸುತಾಲಯಾ’ ಎಂಬ ಸೂಕ್ತಿ ಇದೆ . ಒಳ್ಳೆಯ ಗೋಸಂಪತ್ತು, ಇಚ್ಛೆಯರಿತು ನಡೆಯುವ ಪತ್ನಿ, ಸತ್ಪುತ್ರರು, ವಾಸಕ್ಕೆ ಯೋಗ್ಯವಾದ ಮನೆ ಹೀಗೆ ಜೀವನಕ್ಕೆ ಅತೀ ಅಗತ್ಯವೆನಿಸುವ ಬಂಧಗಳು ದೊರಕಬೇಕಿದ್ದರೆ ಋಣಾನುಬಂಧ ಬೇಕೇಬೇಕು. ಇಂತಹ ಅದೃಷ್ಟ ಎಲ್ಲರಿಗೂ ಸಿಗಲಾರದು. ಮನದಿಚ್ಛೆಯರಿತು ನಡೆವ ಸತಿಯಿದ್ದೊಡೆ ಸ್ವರ್ಗಕ್ಕೆ...
ಪೂರ್ವಕಾಲದಲ್ಲಿ ಎಂತೆಂತಹ ತಪಃಶಕ್ತಿಯ ಮಹರ್ಷಿಗಳಿದ್ದರು! ಹಾಗೆಯೇ ಅವರಿಗೆ ತಕ್ಕುದಾದ ಶಿಷ್ಯರು| ಶಿಷ್ಯನಾದವನು ಗುರುವಿನ ಆದೇಶ ಪಾಲಿಸುವುದೇನು! ಗುರುವಿಗಾಗಿ ಏನೇ ಕಷ್ಟ ಬಂದರೂ ಸ್ವತಃ ಅನುಭವಿಸಲು ರೆಡಿಯಾಗಿದ್ದರು. ಯಾವ ತ್ಯಾಗಕ್ಕೂ ಸಿದ್ಧನಾಗಿರುತ್ತಿದ್ದರು. ಗುರುವಿನ ಕೋರಿಕೆ ಈಡೇರಿಸಲೋಸುಗ ತನ್ನ ಹೆಬ್ಬೆರಳನ್ನೇ ದಕ್ಷಿಣೆ ರೂಪವಾಗಿ ನೀಡಿದ ಏಕಲವ್ಯನ ದೃಷ್ಟಾಂತ ಓದಿದ್ದೇವೆ. ಗುರು...
ಗುರುಶಿಷ್ಯ ಸಂಬಂಧವು ಪವಿತ್ರವಾದುದು, ಸರ್ವಕಾಲಿಕ ಶ್ರೇಷ್ಠವಾದುದು. ಅದು ಕೇವಲ ‘ಬಂದುಂಡು ಹೋಗುವ’ ಸಂಬಂಧವಲ್ಲ. ಬೆಳಗಿ ಬಾಳುವ ಭದ್ರಬುನಾದಿಯನ್ನು ತೋರಿಸುವಂತಾದ್ದು, ಯಾವುದೇ ಪೂಜಾ ಕೈಂಕರ್ಯದಲ್ಲೋ ಒಂದು ಸತ್ಕಾರ್ಯ ಆರಂಭಕ್ಕೋ ತಾಯಿ, ತಂದೆಯರಿಗೆ ಸಂಕಲ್ಪವಾದ ಕೂಡಲೇ ಗುರುವಿನ ಸ್ಥಾನ. ‘ಮಾತೃದೇವೋಭವ’ ‘ಪಿತೃದೇವೋಭವ’, ‘ಆಚಾರ್ಯದೇವೋಭವ’ ಎಂದು ಸಂಕಲ್ಪಿಸಿದ ಮೇಲಷ್ಟೇ ದೇವತಾ ಪ್ರಾರ್ಥನೆ,...
ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು. ಸುಯೋಗ್ಯ ಮಂತ್ರಿಯು ಇರುವಲ್ಲಿ ರಾಜನು ಒಂದು ವೇಳೆ ಸುಗುಣರಹಿತನಾದರೂ ರಾಜ್ಯವು ಸುಭಿಕ್ಷವಾಗಿ ಪ್ರಜೆಗಳು ನಿಶ್ಚಿಂತೆಯಿಂದ ಬದುಕಬಹುದು. ಯಾಕೆಂದರೆ, ಮಂತ್ರಿ ಚಾಣಾಕ್ಷನಾದರೆ, ರಾಜನನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಚತುರನಾಗಿರುತ್ತಾನೆ....
‘ನಿನ್ನ ಸತ್ಕೀರ್ತಿ ಆಚಂದ್ರಾರ್ಕ ಪರ್ಯಂತ ಬೆಳಗಿ ಅಮರನಾಗು’ ಎಂಬುದಾಗಿ ಗುರುಹಿರಿಯರು ಹೃದಯತುಂಬಿ ಹರಿಸುವುದನ್ನು ನೋಡಿದ್ದೇನೆ. ಆದರೆ ನವಗ್ರಹ ಶ್ರೇಷ್ಠರೂ ದಿನ ರಾತ್ರಿಗಳ ಹಿಡಿತದಲ್ಲಿರುವವರೂ ಆದ ”ಸೂರ್ಯ-ಚಂದ್ರರ ಸ್ಥಾನವೇ ನಿನಗೆ ಸಿಗಲಿ” ಎಂಬ ಶುಭಾಶೀರ್ವಾದವನ್ನು ಯಾರೂ ಕೊಡುವುದೂ ಇಲ್ಲ, ಬಯಸುವುದೂ ಇಲ್ಲ. ಕಾರಣ ಸೂರ್ಯ ಚಂದ್ರರ ಸ್ಥಾನ ಬೇರೆಯವರಿಗೆ...
ಯಾವುದೇ ಸತ್ ಚಿಂತನೆ, ಆಧ್ಯಾತ್ಮಿಕ ಚಿಂತನೆ, ಸಮಾಜಮುಖಿ ಸೇವೆ ಮೊದಲಾದ ಕಾರ್ಯಗಳನ್ನು ಮಾಡಬೇಕಾದರೆ ಸಾಮರ್ಥ್ಯ, ಚಾಣಾಕ್ಷತೆ, ತಾಳ್ಮೆ, ತ್ಯಾಗಗಳು ಅನಿವಾರ್ಯ ಅಷ್ಟೇ ಅಲ್ಲ, ಸತ್ಫಲ ನೀಡುವ ಕಾರ್ಯಗಳನ್ನು ಮಾಡಿ ಗಣ್ಯವ್ಯಕ್ತಿಗಳಾಗಬೇಕಿದ್ದಲ್ಲಿ ಗುರು ಹಾಗೂ ದೇವರ ಸಂಪೂರ್ಣ ಅನುಗ್ರಹ ಬೇಕಂತೆ. ಈ ಭಾಗ್ಯ ಎಲ್ಲರಿಗೂ ದೊರಕುವುದು ದುರ್ಲಭ ಇಷ್ಟೂ...
ಬಾಳಿನ ನೆಮ್ಮದಿಯ ತಳಹದಿಯೇ ತಾಳ್ಮೆ. ‘ತಾಳಿದವ ಬಾಳಿಯಾನು’ ಎಂಬ ಗಾದೆಯನ್ನು ಕೇಳದವರಿಲ್ಲ.‘ತಾಳುವಿಕೆಗಿಂತ ತಪವು ಇಲ್ಲ’ ಎಂದು ದಾಸರು ಹಾಡಿರುವ ವಚನ. ಗಳನ್ನವನ್ನಾದರೂ ತಣಿಸಿ ಉಣ್ಣು’ ಎಂಬುದು ಇದೇ ಅರ್ಥವನ್ನು ಕೊಡುವಇನ್ನೊಂದು ಸೊಲ್ಲು, ಹೌದು, ತಾಳ್ಮೆ ಎಂಬುದು ಮಾನವೀಯ ಮೌಲ್ಯ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿ ಆ ಭಾವನೆಗಳಿಂದಾಗ ತಕ್ಕ...
ದಾನಗಳಲ್ಲಿ ಹಲವಾರು ವಿಧ, ಅನ್ನದಾನ, ವಸ್ತ್ರದಾನ, ಗೋದಾನ, ಭೂದಾನ ಹೀಗೆ, ಚರ-ಆಚರ ವಸ್ತುಗಳಲ್ಲಿ ವಿಶೇಷವಾದವುಗಳು, ಉಳ್ಳವರು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಹೀನರಿಗೆ ದಾನ ಮಾಡಬೇಕಾದುದು ಧರ್ಮ, ದಾನ ಮಾಡುವಾಗ ಸಮಯ, ಸಂದರ್ಭ, ಪಾತ್ರವರಿತು ದಾನಮಾಡಬೇಕು. ಉದಾ: ಹಸಿದು ಬಂದವನಿಗೆ ಅನ್ನವನ್ನು ನೀಡಬೇಕೇ ಹೊರತು ವಸ್ತ್ರದಾನವೋ ಗೋದಾನವೋ ಭೂದಾನವೋ...
ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಅದೊಂದು ನಿಷ್ಠೆ, ತಿಳುವಳಿಕೆ, ಅಪಾರ ಎಂಬುದಾಗಿ ಪುರಾಣಕಾಲದಲ್ಲಿಯೇ ತಿಳಿಯಲಾಗಿತ್ತು. ಕ್ಷತ್ರಿಯ ರಾಜನಾದ ವಿಶ್ವರಥ ತಪಸ್ಸು ಮಾಡಿ ಸಿದ್ದಿ ಪಡೆದು ಬ್ರಹ್ಮರ್ಷಿಯಾಗಿ ವಿಶ್ವಾಮಿತ್ರನೆನಿಸಿಕೊಂಡಿದ್ದನ್ನು ಕೇಳಿದ್ದೇವೆ. ಒಬ್ಬ ಬೇಡರವನು ತಪಸ್ಸನ್ನಾಚರಿಸಿ ವಾಲ್ಮೀಕಿ ಮಹರ್ಷಿಯಾಗಿ ಲೋಕ ವಿಖ್ಯಾತವಾದ ರಾಮಾಯಣವೆಂಬ ಮಹಾಗ್ರಂಥವೊಂದನ್ನು ಬರೆದು ಅಮರನಾದುದು ನಮಗೆಲ್ಲ ತಿಳಿದ...
ನಿಮ್ಮ ಅನಿಸಿಕೆಗಳು…