ಬೆಳಕು-ಬಳ್ಳಿ

ಕಷ್ಟಗಳ ಮರೆತು

Share Button

ಹುಟ್ಟು ಸಾವಿನ ನಡುವಿನ ಜೀವನ
ಸುಖ ದುಃಖಗಳ ಜೊತೆಗಿನ ಪಯಣ
ಹೋರಾಡುತ್ತಿರಬೇಕು ನಾವು ಅನುಕ್ಷಣ
ಹಿತವೆನಿಸುವುದು ನೋವನ್ನು ಮರೆತಕ್ಷಣ

ಏನೇ ಬರಲಿ ಏನೇ ಇರಲಿ ಏನೇ ಆಗಲಿ
ಏನೂ ಇಲ್ಲದೇ ಇರಲಿ ಬದುಕು ನಿತ್ಯ ಸಾಗಲಿ
ಹಿಂಜರಿಕೆಯು ನಮ್ಮ ಹತ್ತಿರ ಸುಳಿಯದಿರಲಿ
ಎದುರಿಸಿ ನಿಲ್ಲುವ ಗುಂಡಿಗೆ ಗಟ್ಟಿಯಾಗಿರಲಿ

ಯಾರ ಬಾಳು ಇಲ್ಲಿ ನಿತ್ಯ ನರಕವಲ್ಲ
ನಿರಂತರ ಸ್ವರ್ಗ ಸುಖವೂ ಯಾರಿಗಿಲ್ಲ
ಎಲ್ಲವನ್ನೂ ಇಲ್ಲಿ ಅನುಭವಿಸಲೇ ಬೇಕಿಲ್ಲಿ
ನಿತ್ಯ ನಿರಂತರ ಹುಡುಕಾಟವು ಸಹಜವಿಲ್ಲಿ

ಎಸ್ಟೊಂದು ಸಮಸ್ಯೆಗಳಿವೆ ನಮಗಿಲ್ಲಿ
ಎಲ್ಲವನ್ನೂ ನಗುನಗುತಾ ಎದುರಿಸಬೇಕಿಲ್ಲಿ
ಒಂದೊಂದೇ ಹೆಜ್ಜೆ ಮುಂದಿಡುತ ಸಾಗಬೇಕಿಲ್ಲಿ
ಕಷ್ಟನಷ್ಟಗಳ ಮರೆತು ಭರವಸೆಯ ಹೊಂದಬೇಕಿಲ್ಲಿ

ನಾಗರಾಜ ಜಿ.ಎನ್.ಬಾಡ,ಕುಮಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *