ಬೆಳಕು-ಬಳ್ಳಿ

ಕಾಡುವ ನೆನಪೊಂದು

Share Button

ಮರಳಿ ಮರಳಿ ಕಾಡುವ
ನೆನಪೊಂದು ಜೊತೆಗಿರಬೇಕು
ನೆನಪಾದಾಗೆಲ್ಲ ಮನಸು
ಹೂವಂತೆ ಅರಳಬೇಕು

ಮನದ ನೋವುಗಳೆಲ್ಲ
ಕರಗಿ ನಲಿವಾಗಬೇಕು
ತಣ್ಣನೆಯ ಭಾವವೊಂದು
ಮೂಡಿ ಗೆಲುವಾಗಿಸಬೇಕು

ಸೋತಾಗಲೆಲ್ಲಾ ಸೋಲಿನ
ಕಹಿಯ ಮರೆಸುವಂತಿರಬೇಕು
ಸ್ಫೂರ್ತಿಯ ಚಿಲುಮೆಯಾಗಿ
ಹೆಜ್ಜೆ ಹೆಜ್ಜೆಗೂ ಜೊತೆಯಾಗಬೇಕು

ಬಿದ್ದಾಗ ಕೈಹಿಡಿದು ಎತ್ತಿ
ಮೇಲೆ ನಿಲ್ಲಿಸಬೇಕು
ಒಂಟಿ ಒಬ್ಬಂಟಿ ಎನಿಸಿದಾಗೆಲ್ಲ
ಬಾಚಿ ತಬ್ಬಿಕೊಳ್ಳಬೇಕು

ಯಾರೂ ಇರದ ಗಳಿಗೆ
ಸುಮ್ಮನೆ ಜೊತೆಯಾಗಬೇಕು
ಏನೇ ಆದರೂ ಜೊತೆಗೆ ಇದ್ದೇನೆ
ಎಂಬ ಭರವಸೆಯೊಂದೇ ಸಾಕು

ನಾಗರಾಜ ಜಿ. ಎನ್. ಬಾಡ, ಕುಮಟ

4 Comments on “ಕಾಡುವ ನೆನಪೊಂದು

  1. ಯಾರೂ ಇರದ ಗಳಿಗೆ
    ಸುಮ್ಮನೆ ಜೊತೆಯಾಗಬೇಕು !

    ಈ ಸಾಲು ಇಷ್ಟವಾಯಿತು ಕವಿಗಳೇ.

    ಕಾವ್ಯಪ್ರತಿಮೆ ಪ್ರತೀಕಗಳಿಲ್ಲದೆಯೇ ಕಾವ್ಯಾನುಭವ
    ತಂದುಕೊಡುವ ಅಪರೂಪದ ಭಾವವಿದು.

    ಆಗಬೇಕೆಂಬ ಪ್ರಕ್ರಿಯೆಯ ಹಂಬಲವು ಕೈ ಹಿಡಿದು ಬರೆಸಿದೆ;
    ಭರವಸೆಯ ಬೆಳಕಿಗಾಗಿ ಮನವು ಚಡಪಡಿಸುತ ನಿರುಕಿಸಿದೆ !

    ನೈಸ್‌ ಒನ್‌, ಧನ್ಯವಾದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *