ನನ್ನ ಅಕ್ಷರ ಶಾಂತಿ
ವಿಕಿರಣಗಳು,
ಸಾಮಾನ್ಯರ ಹಕ್ಕುಗಳ
ಸ್ವರ ದರ್ಪಣದ
ಸ್ವಾತಂತ್ರ್ಯ ಪ್ರತಿಬಿಂಬ.
ಕಾಲಾಸ್ತಿತ್ವದ ಜಾಡಿನ
ಮೋಡ ಕರಗಿಸಿ,
ನವ ಗಗನದ ಉಪಗ್ರಹ ಪಥಗಳಲಿ
ಯುವ ಪೀಳಿಗೆಯ ಪ್ರೇರಣೆಯ
ಪರಿಸರ ಗೀತೆಗಳು.
ವಿಪ್ಲವದ ಎದೆಯ ಸದ್ದು,
ಶಬ್ದ ಸೌಂದರ್ಯದ
ಪ್ರಮಾಣಗಳ ಪ್ರತಿಧ್ವನಿ.
ಉದ್ಯಮದ ಜನಜೀವನ ಸ್ರವಂತಿಗೆ
ರಥಸಾರಥಿಯ ಜ್ವಾಲೆ ನಾನು.
ಅಜ್ಞಾನದ ಗೋಡೆಗಳ
ನೆಟ್ಟಗೆ ಸ್ಕ್ಯಾನ್ ಮಾಡಿ,
ಅಡ್ಡಲಾಗಿ ಸುಲಭದಿ ಕೆಡವಿ,
ವೈಜ್ಞಾನಿಕ ಇಟ್ಟಿಗೆಯಲಿ ರವೀಂದ್ರರ
ಗೀತಾಂಜಲಿಯ ಸಮಾನತೆಯ
ಸಾಮ್ರಾಜ್ಯ ನಿರ್ಮಿಸುವ
ಕನಸ ತಾರೆಯ ಹೊಳಪು.
ನನ್ನ ಕವಿತೆ:
ಒಂದು ನೂತನ ತತ್ವದ
ಪ್ರಭಾತ ಭವಿಷ್ಯದ ಗೀತೆ.
ನನ್ನ ಸಾಹಿತ್ಯ:
ಮಹಾತ್ಮರ ಸತ್ಯದ,
ಸ್ವಪ್ನ ಸಂದೇಶದ
ಸ್ವಾತಂತ್ರ್ಯ ಸ್ಫೂರ್ತಿಯ ಬರಹ.
ಭಗತ್ ಸಿಂಗ್ ಭಾವ ಕಾವ್ಯಗಳ
ದೇಶಭಕ್ತಿಯ ರಣ ಶಂಖನಾದ.
ವಿವೇಕಾನಂದರ ಅಭ್ಯುದಯದ
ಮತ ಸಾಮರಸ್ಯದ
ಸಮರ ನಿಘೋಷ.
ನನ್ನ ಕಾವ್ಯ ಒಂದು ನಿತ್ಯತ್ವ,
ನನ್ನ ಲೇಖನಿ ವಿಜ್ಞಾನದ ಶರ.
ನನ್ನ ಆಲೋಚನೆಗಳ ಮುಖಚಿತ್ರ:
ಶತಮಾನಗಳ ಉದಯ ಪಯಣ.
ಅನಂತ ವಿಶ್ವದ ವ್ಯವಸಾಯದಲ್ಲಿ
ಗ್ಯಾಲಕ್ಸಿಗಳ ಸಮುದಾಯ.
ತೆಲುಗು ಮೂಲ : ಫಿಜಿಕ್ಸ್ ಅರುಣ್ ಕುಮಾರ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್


ಹೊಸ ರೀತಿಯ ಕವಿತೆ
ಪದಪುಂಜ ಅಬ್ಬಾ ! ಅದೇನು ಕಿರಣಕಾಂತಿ ; ಬೆಳಗಾಯಿತೆಂದು ಕೂಗುವ ಹುಂಜ !!
ನಿಮ್ಮ ಅನುವಾದವನ್ನು ಸುರಹೊನ್ನೆಯಲಿ ಗಮನಿಸುತಾ ಬಂದ ಓದುಗ ನಾನು
ಈ ಕವಿತೆಯನು ಮತ್ತೆ ಮತ್ತೆ ಓದಿ ಬೆರಗಾದೆನು!
ಒಂದು ಕಾಲದ ಕನ್ನಡ ನವ್ಯಕವಿತೆಗಳು ಹೀಗೇ ಇದ್ದವು
ಏನೋ ಇದೆ; ಆದರೆ ತಕ್ಷಣಕೆ ಅರ್ಥವಾಗುತಿಲ್ಲ ಎಂಬ ಕೊರಗು ಮತ್ತು ಬೆರಗು
ವಿದ್ಯಾರ್ಥಿಗಳಿಗೆ ಪಾಠ ಮಾಡಲು ಒಳ್ಳೆಯ ಸರಕು ನನಗೆ
ಧನ್ಯವಾದಗಳು ಮುರಳೀ ಮೋಹನರಿಗೆ
-ಮಂಜುರಾಜ್
ಅನವಾದ ಕವನ ನಿತ್ಯತ್ವದ ನಯಮ ಅರ್ಥಪೂರ್ಣ ವಾಗಿದೆ ಸಾರ್..
ವಿಭಿನ್ನವಾದ ಕವಿತೆ.
ಸತ್ವಪೂರ್ಣ ಕಾವ್ಯಾನುವಾದ!
ಅರ್ಥಪೂರ್ಣವಾಗಿ ಅನುವಾದಗೊಂಡ ಸುಂದರ ಕವಿತೆ.