ಬೆಳಕು-ಬಳ್ಳಿ

ಮುಕ್ತಕಗಳು

Share Button

ಗೆಲುವಿಹುದು ಬಾಳಿನಲಿ ಸಾಗುತಿರೆ ಮುಂದಕ್ಕೆ
ಬಲಹೀನನಾಗದೆಯೆ ಛಲದಿ ನೀ ಬದುಕು
ಕೆಲಸಗಳು ಕೆಡದಂತೆ ಕಾಯುತಿರೆ ಭಗವಂತ
ಫಲ ಸಿಗುವುದದು ಖಚಿತ ಬನಶಂಕರಿ

ಅಪರಂಜಿಯಂತಿರುವ ಗುಣವ ಹೊಂದಲು ಬೇಕು
ಉಪಕಾರ ಮಾಡುತಲಿ ಅಸಹಾಯ ಜನಕೆ
ಕಪಟ ಮನವನು ತೊರೆದು ಕಾಯಕವ ಮಾಡುತಿರೆ
ತಪವದುವೆ ಜೀವನದಿ ಬನಶಂಕರಿ

ಮುತ್ತಿನಾ ಮಾತುಗಳು ಮನಕೆ ಹಿತವಾಗಿರಲು
ಸುತ್ತಲಿನ ಜನಕೆ ಮುದ ನೀಡುವವು ನಿತ್ಯ
ಕತ್ತಲನು ತೊಲಗಿಸುತ ಬೆಳಕ ಪಸರಿಸುತಿರುವ
ಚಿತ್ತವಿರುವುದೆ ಚೆನ್ನ ಬನಶಂಕರಿ

ಕಹಿಮಾತು ಕುಹಕಗಳ ಕಡೆಗಣಿಸಿ ಸಾಗುತಿರು
ಸಹಿಸುತಲಿ ಎಲ್ಲವನು ಶಾಂತಮನದಿಂದ
ಸಹಕರಿಸು ಸಕಲರಿಗು ಸಕಲ ಕಾಯಕಗಳಲಿ
ಮಹಿಯೊಳಗೆ ಸಂತಸದಿ ಬನಶಂಕರಿ

ಆಡಿಸುವ ಪರಮೇಶ ಗೊಂಬೆಯಂತೆಯೆ ನಮ್ಮ
ರಾಡಿಯಾಗಿಸುತ ತಿಳಿ ಮನದ ಕೊಳವ
ಗಾಡಿಯದು ಜೀವನದ ಪಥದಲ್ಲಿ ಚಲಿಸಲ್ಕೆ
ಮಾಡುತಿರು ಕಾಯಕವ ಬನಶಂಕರಿ

-ಶಂಕರಿ ಶರ್ಮ, ಪುತ್ತೂರು.

6 Comments on “ಮುಕ್ತಕಗಳು

    1. ಪ್ರೀತಿಯ ಸ್ಪಂದನೆಗೆ ವಂದನೆಗಳು…ನಾಗರತ್ನ ಮೇಡಂ.

    1. ಪ್ರೀತಿಯ ಪ್ರತಿಕ್ರಿಯೆಗೆ ನಮನಗಳು…ನಯನಾ ಮೇಡಂ.

  1. ಕವನ ತುಂಬಾ ಚೆನ್ನಾಗಿದೆ ಶಂಕರಿ ಅಕ್ಕ

  2. ದಾರಿದೀಪವಾಗಬಲ್ಲ ಸವಿಮಾತುಗಳು ಮುಕ್ತಕಗಳಲ್ಲಿ ಹಾಸುಹೊಕ್ಕಾಗಿ ಮುದ ನೀಡಿದವು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *