ಬೆಳಕು-ಬಳ್ಳಿ

ಕರಗದ ಆಶಾವಾದ

Share Button


ಕಣ್ಣ ತುಂಬಿದ ಕನಸು
ಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ

ದುಃಖ ಭರಿತ ಮನಸ್ಸಲ್ಲಿ
ಭರವಸೆಗಳು ಬತ್ತಿ ಒಣಗದಿರಲಿ

ಭಾರವಾದ ಹೃದಯದಲಿ
ನಾಳೆಗಳೆಂಬ‌ ಮಿಡಿತಗಳು‌ ನಿಲ್ಲದಿರಲಿ

ಮೇಲೇಳಲಾಗದ ಹೆಜ್ಜೆಗಳಲಿ
ಬದುಕೆಂಬ ತಾಳ ತಪ್ಪದಿರಲಿ

ಎಲ್ಲರ ಬಾಳಲ್ಲಿ
ಕವಿದ ಮೋಡಗಳು ಕರಗುವವು

ಬದಲಾವಣೆಯ ವರ್ಷ
ಮೈ ಮನಗಳಲಿ ತುಂಬುವುದು

ಮತ್ತೆ ತುಟಿ ಕಚ್ಚಿ ಬದುಕುವ ಛಲ
ಸಕಲ ಅವಯವಗಳಲಿ ಆವರಿಸುವುದು

-ಶರಣಬಸವೇಶ ಕೆ. ಎಂ

6 Comments on “ಕರಗದ ಆಶಾವಾದ

  1. ಎಲ್ಲ ನೆಲೆಯಮೂಲ ಹೃದಯ ದಲ್ಲಿ ..ಮೂಡಿಸುವ ಸಕಾರಾತ್ಮಕ ಮಿಡಿತ..ಅರ್ಥ ಪೂರ್ಣ ವಾದ ಸಂದೇಶ ಹೊತ್ತ .ಕವಿತೆ…ಚೆನ್ನಾಗಿದೆ ಸಾರ್

  2. ಕನಸುಗಳೆಂಬ ಜಾದೂಗಾರ ನಮ್ಮ ಬದುಕನ್ನ ವರ್ಣಮಯ ಮಾಡುವುದರಲ್ಲಿ ಸಂದೇಹವೇ ಇಲ್ಲ
    ಚೆಂದದ ಕವಿತೆ

  3. ಸುಂದರ ಕವನ. ಆಶಾವಾದ ವಿದೆ ಕವಿತೆಯಲ್ಲಿ

  4. ಸಕಾರಾತ್ಮಕ ಭಾವವನ್ನು ಹುಟ್ಟುಹಾಕಬಲ್ಲ ಸಮರ್ಥ ಕವನ!

  5. ಧನ್ಯವಾದಗಳು ನಾಗರತ್ನ ಮೇಡಂ, ಗಾಯತ್ರಿ ಮೇಡಂ, ನಯನ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ

  6. ಸಕಾರಾತ್ಮಕ ಪದ್ಯ ಚೆನ್ನಾಗಿ ಮೂಡಿಬಂದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *