ಮತ್ತೆ ಬಂದಿದೆ ಯುಗಾದಿ….ಶುಭಾಶಯಗಳು

Share Button

ಋತುಗಳು ಜಾರಿ ಕಾಲಚಕ್ರದಲ್ಲಿ
ತಂದಿದೆ ಚೈತ್ರಮಾಸವ ಚಿಗುರೆಲೆಯಲಿ
ಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿ
ತಂದಿದೆ ಹೊಸ ವರುಷವ ಲೋಕದಲಿ

ಯುಗಾದಿಯ ಸಡಗರ ಸಂಭ್ರಮದಲ್ಲಿ
ನಲಿದಿದೆ ಕಾಲವು ಪುನರ್ಜ್ಜೀವನದಲ್ಲಿ
ಯುಗಾದಿಯ ಸಡಗರ ಸಂಭ್ರಮದಲ್ಲಿ
ಆನಂದಿಸಿದೆ ಕಾಲವು ನವೀನತೆಯಲಿ

ಹರಿದಿದೆ ಜಗದಲಿ ಹರುಷದ ಹೊನಲು
ಮೆರಗಿದೆ ಚೆಲುವಲಿ ಹೂದೋಟದ ಮಡಿಲು
ಕುಣಿದಿದೆ ಲೋಕವು ಕೋಗಿಲೆ ಹಾಡಲು
ಧ್ವನಿಸಿದೆ ನಾದವು ಪ್ರಕೃತಿಯು ನಗಲು

ಯುಗಾದಿ ಸಡಗರ ಸಂಭ್ರಮದಲ್ಲಿ
ಸಾಕಾರವಾಗಿದೆ ಕಾಲವು ಉಲ್ಲಾಸದಲ್ಲಿ
ಯುಗಾದಿ ಸಡಗರ ಸಂಭ್ರಮದಲ್ಲಿ
ಜೀವಂತವಾಗಿದೆ ಕಾಲವು ಉತ್ಸಾಹದಲ್ಲಿ

ಹಸಿರು ತೋರಣಗಳು ಅಲಂಕರಿಸಿದೆ ಹೊಸ ದಿನವ
ಹರಿಯುವ ತೊರೆಗಳು ನುಡಿಸಿದೆ ಹೊಸ ರಾಗವ
ಮಿಡಿಯುವ ಹೃದಯಗಳು ಬಯಸಿದೆ ಹೊಸ ಭಾವವ
ಕಲೆಸಿದೆ ಬಾಳು ಬದುಕು ಸಿಹಿ ಬೆಲ್ಲ ಕಹಿ ಬೇವ

-–ಮಿತ್ತೂರು ಎನ್. ರಾಮಪ್ರಸಾದ್

4 Responses

  1. ನಯನ ಬಜಕೂಡ್ಲು says:

    ಪ್ರಕೃತಿಯ ವಿವರ ಗಳನ್ನೊಳಗೊಂಡ ಸುಂದರ ಕವನ.

  2. ಯುಗಾದಿಯ ಸಂಭ್ರಮ ಕ್ಕೆ ಕಟ್ಟಿ ರುವ ಕವನ ದ ತೋರಣ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸಾರ್

  3. . ಶಂಕರಿ ಶರ್ಮ says:

    ಯುಗಾದಿ ಸಂಭ್ರಮವು ತುಂಬಿ ಹರಿಯುವ ಭಾವಪೂರ್ಣ ಕವನ.

  4. Padma Anand says:

    ಚೈತ್ರ ಮಾಸದ ಸೊಗಡನ್ನು ಎಷ್ಟು ಬಣ್ಣಿಸಿದರೂ ಸಾಲದು. ಸುಂದರ ಕವಿತೆಗಾಗಿ ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: