ಬೆಳಕು-ಬಳ್ಳಿ

ಅಸ್ತಿತ್ವ

Share Button

ನಿನ್ನ ಮನದ
ಸುತ್ತ ಸುಳಿದು ಸೆಳೆವುದು
ಮೋಹಗಳ ಮಾಯ ಜಿಂಕೆ
ಮಾನಿನಿಯರೆ ಜೋಕೆ,,,,

ವಶವಾದೆಯಾದರೆ ನೀನದಕೆ
ನೀನಾಗುವೆ ಸೀತೆ,,!
ಅರೆಗಳಿಗೆಯ
ಚಂಚಲತೆಗೆ ತೆತ್ತಬೆಲೆ,,,,,,,,!

ಲೋಕೋದ್ಧಾರಕ  ರಾಮನ
ಮಡದಿಯಾದರು ಮೆರೆಯಲಾಗಲಿಲ್ಲ
ಲವಕುಶರ ತಾಯಿಯಾದರು
ಸಿರಿಯ ತೊರೆಯಬೇಕಾಯಿತ್ತಲ್ಲ,,,,
ಮಮತೆಯ ಮರೆಯಬೇಕಾಯಿತ್ತಲ್ಲ,,,,

ಹಲ ರೂಪದಲ್ಲಿ ಬಲೆ ಬೀಸಿ
ಕಾಯುವುದು ವಿಧಿ,,,,,
ನಿನ್ನ ಬೀಳಿಸಲು,
ಕೆಣಕಿ ಕೆದಕಿ ಕರೆಯುವುದು
ನಿನ್ನ ಸೋಲಿಸಲು,

ಎಚ್ಚರ ತಪ್ಪಿದೆಯಾದರೆ
ನಿನ್ನನ್ನು ನೀನು ಮರೆತಂತೆ,,,,!
ನಿನ್ನ ಅಸ್ತಿತ್ವ
ನಿನ್ನ ತೊರೆದಂತೆ,,,,!

– ವಿದ್ಯಾ ವೆಂಕಟೇಶ್

13 Comments on “ಅಸ್ತಿತ್ವ

  1. ಅರ್ಥಪೂರ್ಣವಾದ ಕವಿತೆ.ಅಭಿನಂದನೆಗಳು ಸೋದರಿ.

  2. ಅರೆಘಳಿಗೆ ಮೈ ಮರೆತರೂ ವನಿತೆಯು ತೆರಬೇಕಾದ ಬೆಲೆ ಎಷ್ಟೆಂದು ತಿಳಿಸುವ ಸೊಗಸಾದ ಭಾವನಾತ್ಮಕ ಕವನ.

  3. ಇದು ಕಲ್ಪನೆಯಿಂದ ಬರೆದ ಕವನವಲ್ಲ,
    ನಿಜ ಜೀವನದಲ್ಲಿ ನಾ ಕಂಡ ಸತ್ಯ ಕತೆಯಿಂದ ಮೂಡಿ ಬಂದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *