ಗಝಲ್

Share Button

ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ
ಪ್ರಭಾಪ್ರಸರಣ ಕಾಡಿಸಿತು ಸಖಿ
ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು
ಹೃದಯದಂಗಣ ಬಾಡಿಸಿತು ಸಖಿ

ಕರುಬುವ ಜಿದ್ದಿನ ಕುಟಿಲತೆ
ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ
ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು
ಧೈರ್ಯಸೈರಣೆ ಕೊಡಿಸಿತು ಸಖಿ

ನಿರಾಶೆ ಸರಿದ ಮನದಲಿ ನಿರೀಕ್ಷೆ
ತೋರಣವೆದ್ದು ನಿಂತಿತು
ಭರವಸೆಯ ಬೆಳಕಿನ ಕನ್ನಡಿ ಬದುಕಿಗೆ
ಆಶಾಕಿರಣ ಮೂಡಿಸಿತು ಸಖಿ

ತಿರೆಧರಿಸಿದ ಕ್ಷಮೆಯನು ಯೋಚಿಸಿ
ಚಿತ್ತದ ಭೀತಿಯು ತೊಲಗಿತು
ಸಿರಿಯುಕ್ಕಿದ ಚೆಲುವಲಿ ಪಲ್ಲವಿಸಿ
ಲತಾಕಾವಣ ನೋಡಿಸಿತು ಸಖಿ

ಪರಿಪುಷ್ಟ ಹಾಸದೆಸಳುಗಳ ಹರಡಿಸುತ
ಪದ್ಮಗಳು ಸೊಗಸುಕ್ಕಿ ಬಿರಿಯಿತು
ಪರಿಶೋಭಿತ ಸೌಂದರ್ಯದಲಿ
ಕಾಂತಿತೋರಣ ಕೂಡಿಸಿತು ಸಖಿ||

-ಪದ್ಮಾ ಆಚಾರ್ಯ, ಪುತ್ತೂರು

4 Responses

  1. ನಯನ ಬಜಕೂಡ್ಲು says:

    ಮುದುಡಿದ ಮನಸು ಹಂತ ಹಂತವಾಗಿ ಭರವಸೆಯ ತುಂಬಿಕೊಂಡು ಅರಳುವ ಬಗೆಯನ್ನು ವಿವರಿಸಿದ ಪರಿ ಸೊಗಸಾಗಿದೆ.

  2. ಬಿ.ಆರ್.ನಾಗರತ್ನ says:

    ಸಕಾರಾತ್ಮಕ ಚಿಂತನೆ ಗೆ ಇಂಬುಗೊಡುವಂತಹ ಗಝಲ್ ಒಂದು ಸೆಲ್ಯೂಟ್ ಮೇಡಂ.

  3. ಆಶಾನೂಜಿ says:

    SUPER ಗಝಲ್

  4. ಶಂಕರಿ ಶರ್ಮ says:

    ಕರಿಮಬ್ಬು ಕವಿದು ಕದಡಿದ ಮನದಲ್ಲಿ ಅಶಾಪುಷ್ಪ
    ಪಲ್ಲವಿಸಿದ ಬಗೆ ಗಝಲ್ ನಲ್ಲಿ ಪಡಿಮೂಡಿದ ರೀತಿ ಅನನ್ಯ.. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: