ಏನೋ ಹೇಳಲು ಬಂದೆ…!

Share Button

Ashok Mijar4

ಆವತ್ತು ಫ಼ೆಬ್ರವರಿ ೧೪. ಪ್ರೇಮಿಗಳ ದಿನ.

ಅದು ಬೆಂಗಳೂರು ನ್ಯಾಶನಲ್ ಪಾರ್ಕ್.

ಒಂದು ಜೋಡಿ ಹುಡುಗಹುಡುಗಿ.

ಹಾಯ್ತುಂಬಾ ಹೊತ್ತಾಯಿತಾ ಬಂದು?” ಹುಡುಗಿ ಕೇಳಿದಳು.

ಇಲ್ಲ, ಜಸ್ಟ್ ಈವಾಗ ಬಂದೆಯಷ್ಟೇಅಂದ ಹುಡುಗ, ಬಂದು ಒಂದೂವರೆ ಗಂಟೆಯಾಗಿದ್ದರೂ ಕೂಡ..!

ಸ್ವಲ್ಪ ಹೊತ್ತು ಮೌನ..! ಇಬ್ಬರ ನಡುವೆಯೂ ಮಾತಿಲ್ಲ..!

ನೀನಂದ್ರೆ ನಂಗಿಷ್ಟ.. ಆದ್ರೆ ಜೊತೇಲಿ ಬಾಳೋದೇ ಕಷ್ಟ..!” ಎನ್ನುತ್ತಾ ಅವಳು ಮೌನ ಮುರಿದಳು.

ಹಾಂ..! ಅದೂ ಗೊತ್ತಿದ್ದೂ ಕಾಯುತಿರುವೆ; ನೀನು ಬರುವೆಬರುವೇ.. ಎಂದುಅವನು ಉತ್ತರಿಸಿದ.

ನೀನು ನನ್ನ ಹಾಗಿಲ್ಲ; ನಿನ್ನ ಹಾಗೆ ನಾನು ಇರೋಕಾಗಲ್ಲ..!” ಅವಳು ನುಡಿದಳು.

ನನ್ನ ತುಂಬು ಸಂಸಾರ.. ಅದು ನಿಂಗೆ ಸಸಾರ.. ನಾನೇನು ಮಾಡಲಿ ನೀನೇ ಹೇಳು?” ಹುಡುಗ ಕೇಳಿದ.

ನೋಡೂ.. ನಾ ಒಂಟಿ.. ನಿನ್ನೊಂದಿಗಿದ್ರೆ ಮಾತ್ರ ನಾ ತುಂಟಿ.. ನಮಗ್ಯಾಕೆ ಬೇಕು ಅಂಕಲ್ ಆಂಟಿ..?” ಅವಳ ಆಶಯ.

ನಿಂಗೆನೋ ಆಸೆ ನಾ ಪೂರೈಸಲಾಗದ್ದುಆದರೂ ಮತ್ಯಾಕೆ ಬಂದೆ..?” ಅವನು ಕೇಳಿದ ವಿಷಯ.

ನಾ ಹೋಗುತಿರುವೆ ವಿದೇಶ.. ಕೊನೆಯ ಭೇಟಿಏನೋ ಹೇಳುವ ತವಕ.. ಅಷ್ಟೇ..!” ಎಂದಳು ಹುಡುಗಿ.

ಸರಿ ಹಾಗಾದರೆ, ಇನ್ನು ಹೊರಡುವ.. ನಿನ್ನ ದಾರಿ ಬೇರೆನಾನೇ ಬೇರೆ..!” ಹುಡುಗ ಹೇಳಿದ.

ಇಲ್ಲ.. ಇಲ್ಲಾ.. ನಾವಿಬ್ಬರೂ ಒಂದೇ.. ಆದರೆ ನೀನು ಕವಿ.. ಯಾವತ್ತೂ ಭ್ರಮೆಯಲ್ಲಿರ್ತಿಯಾನಾನು ಲೇಖಕಿರಿಯಾಲಿಟೀಲೀ ಇರ್ತೀನಿಹೇಳುತ್ತಾ ಅವಳು ಮುಂದುವರೆಸಿದಳುಹೋಗುವ ಮುಂಚೆ ಒಂದು ಸಾರಿ..” ಎನ್ನುತ್ತಾ ಅವನ ಮುಖ ನೋಡಿದಳು.

Image

ಏನು…?” ನೋವು ತುಂಬಿದ ಕಂಗಳಿಂದ ಕೇಳಿದ ಹುಡುಗ.

ಒಂದೇ ಒಂದು ಹಸ್ತಲಾಘವ..?” ಅವಳು ಕೈ ಚಾಚಿದಳು.

ಬೇಡನಾವಿಬ್ಬರೂ ಒಂದೇಯಾವತ್ತೂ ಬೇರೆಯಾಗುತ್ತಿಲ್ಲವಲ್ಲಾ.. ನೀನು ರಿಯಾಲಿಟಿ.. ನಾನು ಭ್ರಮೆ.. ಜೊತೇಲೇ ಇರೋನಾ..” ಅವನು ನಮಸ್ಕರಿಸಿದ.

 

 

 – ಅಶೋಕ್ ಕೆ. ಜಿ. ಮಿಜಾರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: