ಬೇಸಿಗೆ ಧುಮುಗುಡತೈತೊ

Share Button

Chandragouda Kulakrani1

 

ಬರಗಾಲ ಬೇಸಿಗೆ ಧುಮುಗುಡತೈತೊ

ರೈತ ಬಡವರನು

ಕಾಡುತಲೈತೊ

ಹಸುಗೂಸು ಕಂದಮ್ಮ

ಬಿಸಿಲಿನ ತಾಪಕ್ಕೆ

ಉಸಿರಾಡೊ  ಕಸುವಿಲ್ದೆ   ಸಾಯುತಲೈತೊ

ಹಸಗೆಟ್ಟ ಹುಸಿಬಳಗ

ತುಸುವಾದರು ಕರುಣಿಲ್ದೆ

ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ

ಹನಿಹನಿ  ನೀರಿಗೂ

ದನಕರು ಬಳಿದರೂ

ಧಣಿಬಳಗ ಮೂಗು ಮುರಿಯುತಲೈತೊ

ಬತ್ತಿದರು ಕಟ್ಟೆಗಳು

ಗುತ್ತಿಗೆ ಕಂಪನಿಗೆ

ತುರ್ತಾಗಿ ನೀರು ಹರಿಯುತಲೈತೊ

ಸರಕಾರ ಜನತೆಯ

ದರಕಾರ ಮಾಡದೆ

ಹರಮುರುಕು ಭಾಗ್ಯ ಹಂಚುತಲೈತೊ

ಪುಂಡಪೋಕರಿ ಬಳಗ

ಉಂಡು ತೇಗುತ ಹೊಲಸು

ಕಂಡಲ್ಲಿ ನಾಲಿಗೆ ಚಾಚುತಲೈತೊ

ಕಾರಭಾರಿ ಕಲಿಬಳಗ

ಹಾರತುರಾಯಿ ಹಾಕಿ

ತೋರಿಕೆ ನಾಟಕ. ಆಡುತಲೈತೊ

ನೀರಿನ ಸಂಕಟಕೆ

ದಾರಿಯ ತೋರದೆ

ಮೀರಿದ ಲಂಚ ಪಡೆಯುತಲೈತೊ

ಬಿಸಿಲುಬರ ರಾಜಕೀಯ

ಹಸಿಹಸಿ ಪದಗಳಲಿ

ಉಸಿರು ಉಸಿರಾಗಿ ಹೊಮ್ಮುತಲೈತೊ

ಕಡದಳ್ಳಿ ಕಲ್ಮೇಶ

ಬೆಡಗಿನ ಮಾತಲ್ಲಿ

ಎಡಬಿಡದೆ ಜೀವ ತುಂಬುತಲೈತೊ

 

 – ಚಂದ್ರಗೌಡ ಕುಲಕರ್ಣಿ

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: