ಅಪಾತ್ರ ದಾನ

Share Button

Ku.Sa. Madhusudhan

ನನ್ನ ನಾಡಿನ ನೆಲದುದ್ದಕ್ಕೂ
ನದಿಗಳ ಹರಿಸಿದೆ
ಅವುಗಳ ಅಕ್ಕಪಕ್ಕದಲಿ
ಹಸಿರಿನ ವನಸಿರಿಯನಿರಿಸಿದೆ
ಹೆಸರೇ ತಿಳಿಯದ ಲಕ್ಷೆಪಲಕ್ಷ ಹೂಗಳ ಅರಳಿಸಿದೆ

ಅವುಗಳ ಸುತ್ತಲೆಂದು
ಬಣ್ಣಗಳ ಬಳಿದ ಚಿಟ್ಟೆಗಳ ಹುಟ್ಟಿಸಿ ಓಡಬಿಟ್ಟೆ
ಅಷ್ಟಗಲದ ಭೂಮಿಯ ಚಾವಣಿಗೆ ನೀಲಿಯ ಬಳಿದು
ಅಲ್ಲಿ ಹಾರಲೆಂದು ಹಕ್ಕಿಗಳ ಕಳಿಸಿಕೊಟ್ಟೆ!

ವ್ಯವಧಾನವೆಲ್ಲಿತ್ತು?
ಸವಿಯುವ ಸಮಾದಾನವೆಲ್ಲಿತ್ತು?
ನಿನ್ನೊಲುಮೆಯ ಕೃಪೆಯನಿಟ್ಟುಕೊಳ್ಳಲು
ನನ್ನೊಳಗಿನ ಮೃಗಕ್ಕೆ!
ನಿನ್ನ ನದಿಗಳಿಗೆ ಕಾರ್ಖಾನೆಗಳ
ವಿಷ ಬೆರೆಸಿದೆ

earthrise-over-plasticಅವುಗಳಕ್ಕಪಕ್ಕದ ಹಸಿರಿಗೆ ಕೊಡಲಿಯನಿಟ್ಟೆ
ಹೂತೋಟಕೆ ಬೆಂಕಿಯ ಹಚ್ಚಿದೆ
ಹಕ್ಕಿಗಳ ಹಾದಿಗೆ ಕ್ಷಿಪಣಿಗಳ ಹಾರಿ ಬಿಟ್ಟೆ
ನೀನಿತ್ತ ಎಲ್ಲದಕೂ ನನ್ನದೆಂಬ
ಅಂಕಿತವನಿಟ್ಟು
ನಾಶಕೆ ಹೊರಟೆ

ಕೇಳದೆಯೇ ಎಲ್ಲವನೂ ಕೊಟ್ಟ
ನಿನ್ನ ಕರುಣೆ
ನನಗರ್ಥವಾಗಲಿಲ್ಲ
ಅಪಾತ್ರರಿಗೇನನ್ನೂ ನೀಡಬಾರದೆಂಬ ನೀತಿ ನಿನಗೇಕೆ
ನೆನಪಾಗಲಿಲ್ಲ!

.

 – ಕು.ಸ.ಮಧುಸೂದನ್‌ , ರಂಗೇನಹಳ್ಳಿ

1 Response

  1. Shankari Sharma says:

    ಕವಿತೆ ತುಂಬಾ ಭಾವಪೂರ್ಣವಾಗಿದೆ…ಎಲ್ಲಾ ನಿಜ…ಮನಸ್ಸಿಗೆ ಖೇದವೆನಿಸುತ್ತದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: