ಏನೇ ಆಗಲಿ ನೀ ನಮ್ಮವನು…

Share Button

 

Adarsha Vasishta

ಆದರ್ಶ ಬಿ ವಸಿಷ್ಠ

ಕಾವಿಯ ಕಾನದಿ ಅಡಗಿಸಿಟ್ಟೆವು,
ಮಂತ್ರದ ಬೇಲಿಯ ಹಾಕಿಬಿಟ್ಟೆವು,
ಗುಡಿಯ ಗೋಡೆಯಲಿ ಕೂಡಿಹಾಕಿದೆವು,
ಏನೇ ಆಗಲಿ ನೀ ನಮ್ಮವನು…

ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,
ಭಾರಿ ಕೋರಿಕೆಗೆ ಮಹಲಿರಬೇಕು,
ಬಳಿಯಲಿ ಕಾಣಲು ಅನುಮತಿಬೇಕು,
ಜೇಬಿನ ತುಂಬಾ ನೋಟಿರಬೇಕು

ಆದರೂ ಬರುವೆವು … ಏಕೆ.. ಏನೇ ಆಗಲಿ ನೀ ನಮ್ಮವನು…

ನೀನಾರೆಂದೇ ತಿಳಿದಿಲ್ಲ,
ನಿನ್ನ ಅಭಿಪ್ರಾಯವೂ ಗೊತ್ತಿಲ್ಲ,
ಅವನ ಹೊಡೆದು, ಇವನ ಕಡಿದು
ನಿನ್ನ ಹೆಸರನೇ ನುಡಿಯುವೆವು,

ಏಕೆ … ಏನೇ ಆಗಲಿ ನೀ ನಮ್ಮವನು…

ತಿಲಕ ಇಟ್ಟರೆ ಹಿಂದೂ ನಾನು
ಟೋಪಿ ಹಾಕಿದೊಡೆ ಮುಸ್ಲಿಮನು ,
ಕೊರಳಿಗೆ ಶಿಲುಬೆ ಬೀಳುತ್ತಲೇ
ನಾ ಈಸಾಯಿಯಾಗಿಬಿಡುವೆನು,
ನನಗೆ ನಾನಾರೆಂದೂ ತಿಳಿದಿಲ್ಲ

ಆದರೂ ನಿನ್ನನಂತೂ ನಾ ಬಿಡಲೊಲ್ಲೆ,

ಏಕೆ… ಏನೇ ಆಗಲಿ ನೀ ನಮ್ಮವನು…

 

 

– ಆದರ್ಶ ಬಿ ವಸಿಷ್ಠ 

 

 

3 Responses

  1. Jennifer Shawn says:

    Very true ..nice poem.

  2. jayashree says:

    Very nice. Such a social message.

  3. VINAY KUMAR V says:

    ಉತ್ತಮವಾದ ಕವನ.
    ಅಭಿನಂದನೆಗಳು 🙂

Leave a Reply to jayashree Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: