ಬೆಳಕು-ಬಳ್ಳಿ

ಕನ್ನಡ ಕೋಗಿಲೆ

Share Button

ಕನ್ನಡ ನುಡಿ ಅಲಂಪಿನಿಂಪನು
ಕರುನಾಡಿಗೆ ಗಾನದಿ ತೋರಿ
ಕೋಗಿಲೆ ಕಂಠದ ಐಸಿರಿಯನು
ಸುಜನರಿಗೆ ಧಾರೆಯನೆರೆದವರು

ಕಾವ್ಯ ಭಾವಗಳ ರಸಗಳಿಗೆ
ಸ್ವರ ನೀಡಿದ ನಿಧಿಯೆನಿಸಿ
ಕನ್ನಡ ನಾಡ ಏಕತೆ ಮೊಳಗೆ
ಗಡಿಯಾಚೆಗು ಧ್ವನಿಯಾದವರು

ರಾಗತಾಳದಾಳಕ್ಕೆ ಮುಳುಗಿ
ಮುತ್ತುಗಳಾರಿಸಿ ಪೋಣಿಸಿದ
ಹೊಸತಿನ ಕ್ಷಿತಿಜವನಾವರಿಸಿ
ಸಗ್ಗದ ಸಾಧನೆ ಮೆರೆದವರು

ಜಾನಪದ ರತ್ನನ ನುಡಿಗಳನು
ಸುಗಮ ಸಂಗೀತದೊಳ ಹೊಸೆದು
ಕವಿಗಳ ವಾಣಿಯ ಸವಿ ತಿರುಳನು
ರಸ ಬೀಡಿಗೆ ಹರಿಸಿದ ಘನರು

ಉದಯವಾಗುವ ನಾಡಿಗೆ ಕನಸಿ
ಗಾನ ಗಂಗೆಯ ಧರೆಗಿಳಿಸಿ
ಅಳುವ ಕಡಲೊಳು ನಗೆಯ ತೇಲಿಸಿ
ಬಾಳಿನೇಳುಬೀಳುಗಳನೀಂಟಿದರು

ಕನ್ನಡ ನಾಡು ನುಡಿಯಂಗಳದಲಿ
ನವ ಚೇತನ ಕಹಳೆ ಮೊಳಗಿದ
ಗೀತ ಲೋಕದ ನೀಲ ಬಾನಲಿ
ಕಾಳಿಂಗರಾಯ ಸದಾ ಹಸಿರು

(ಸುಗಮ ಸಂಗೀತದ ʼಶತಮಾನೋತ್ಸವʼ ಆಚರಿಸಲಾಗುತ್ತಿರುವ ಈ
ಸಂದರ್ಭಕ್ಕೆ ಪಾಂಡೇಶ್ವರ ಕಾಳಿಂಗ ರಾಯರ ಕೊಡುಗೆಯ ಸ್ಮರಣೆ)

ಅನಂತ ರಮೇಶ್

    Leave a Reply

     Click this button or press Ctrl+G to toggle between Kannada and English

    Your email address will not be published. Required fields are marked *