
ಕಾಡುವ ಅನಾರೋಗ್ಯದ ನಡುವೆ ಕಣ್ಣೀರು ಸುರಿಸುತ್ತಾ
ಆ ಭಗವಂತನ ಕಡೆಗೆ ನೋಡುವೆ
ನನಗ್ಯಾಕೆ ಈ ಸ್ಥಿತಿ ತಂದಿರುವೆ ಎಂದಲ್ಲ
ಅದನ್ನು ಎದುರಿಸುವ ಶಕ್ತಿ ನೀಡಿದೆ ಎಂದು
ನಿಂತ ನೆಲವೇ ನಡುಗಿ ಭರವಸೆಯೇ ಉಡುಗಿ ಹೋಗಿ
ಕುಸಿದು ಕುಳಿತಾಗ ಆ ಭಗವಂತನ ಕಡೆಗೆ ನೋಡುವೆ
ನನ್ನ ನೆಮ್ಮದಿ ಯಾಕೆ ಕಸಿದುಕೊಂಡೇ ಎಂದಲ್ಲ
ಇಂತಹ ಪರಿಸ್ಥಿತಿ ನಿಭಾಯಿಸುವ ಮನಸ್ಥಿತಿ
ಕೊಟ್ಟೆ ಎಂದು
ಅವಕಾಶಗಳೇ ಮುಚ್ಚಿ ಹೋಗಿ ಬೇರೆ ದಾರಿಯೇ ಸಿಗದಾದಾಗ
ಆ ಭಗವಂತನ ಕಡೆಗೆ ನೋಡುವೆ
ಲಭ್ಯ ಭಾಗ್ಯವ ದೂರ ಮಾಡಿದೆಯೆಂದಲ್ಲ
ಎಲ್ಲೋ ಒಂದು ಕಡೆ ಇದಕ್ಕಿಂತ ಒಳ್ಳೆಯ ವ್ಯವಸ್ಥೆ
ಕಲ್ಪಿಸುತ್ತಿರುವೆ ಎಂದು
ಒತ್ತಡದಲಿ ಮನ ಮುಳುಗಿ ಮಾಡಿದ್ದೆಲ್ಲಾ ವಿಫಲವಾಗುತ್ತಿರುವಾಗ
ಆ ಭಗವಂತನ ಕಡೆಗೆ ನೋಡುವೆ
ಯಾಕೀ ಪರೀಕ್ಷೆ ಮಾಡುತ್ತಿರುವೆ ಎಂದಲ್ಲ
ಮಾಡಿದ ಕೆಲಸಕ್ಕೆ ಕರಗದ ಅನುಭವ ನೀಡಿ ಗಟ್ಟಿ
ಮಾಡಿರುವೆ ಎಂದು
ಸ್ಪರ್ಧೆಯಲಿ ಓಡುತ್ತಾ ಎಡವಿ ಬಿದ್ದಾಗ ನಗುವ ಜನರ ಕಂಡು
ಆ ಭಗವಂತನ ಕಡೆಗೆ ನೋಡುವೆ
ನನಗ್ಯಾಕೆ ಈ ಅಪಹಾಸ್ಯ ಎಂದಲ್ಲ
ಬೀಳಿಸಿದರೂ ಒಳ್ಳೆಯ ಗುರಿ ಸೇರಿಸಿರುವೆ ಎಂದು
ಏನೇನು ಅಲ್ಲದ ನನಗೆ ಎಲ್ಲಾ ನೀನೇ ಕೊಟ್ಟಿರುವಾಗ
ನಿನ್ನನೇಕೆ ದೂಷಿಸಲಿ ಹೇ ಸರ್ವಶಕ್ತ
ನೀ ಇಟ್ಟಂತೆ ಇರುವೆ…..ನೀ ಇಟ್ಟಂತೆ ಇರುವೆ……
ನೀ ತೋರಿದ ದಾರಿಯಲ್ಲಿ ನಡೆವೇ…….ದಾರಿಯಲ್ಲಿ ನಡೆವೇ……
–ಶರಣಬಸವೇಶ ಕೆ. ಎಂ
ಅರ್ಥಪೂರ್ಣ
Tumba sahajabagide, nanna100%.anubhava.anisike.nvramesh 9845565238
ಅರ್ಥಪೂರ್ಣ ವಾದ ಕವನ ಸಾರ್..
ಕಷ್ಟಕಾಲದಲ್ಲೂ ತೃಪ್ತಿ, ನೆಮ್ಮದಿಯನ್ನು ಹೊಂದುವ ಮನಸ್ಥಿತಿ ನೀಡಿದ ದೇವನಿಗೆ ಕೃತಜ್ಞತೆಯ ನಮನಗಳನ್ನು ನೀಡುವ
ಅರ್ಥಪೂರ್ಣ ಕವನ.
ಇದೇ ಅರ್ಥಪೂರ್ಣ ಕೃತಜ್ಞತೆ…. ಚೆನ್ನಾಗಿದೆ ಸರ್
ತುಂಬ ಚೆಂದದ ಅರ್ಥಪೂರ್ಣ ಕವನ.