ಪ್ರೀತಿಯ ಮಳೆ ಹನಿಯಲಿ

Share Button

ಸುಖಿಸಲಿ ಜಗ
ಪ್ರೀತಿಯ ಮಳೆ ಹನಿಯಲಿ
ಹೆಪ್ಪುಗಟ್ಟಿದ ಮೌನ
ಧಗ ಧಗಿಸುತಿದೆ
ಮನಸ್ಸಿನ ಒಳಾಂಗಣ
ಆಗದಿರಲಿ ಕ್ಷುಲ್ಲಕ ಕಾರಣಕ್ಕೆ
ನೆಮ್ಮದಿಯ ಬದುಕು ರಣಾಂಗಣ

ನೋಡಿಯೂ ನೋಡದಂತೆ
ಕೇಳಿಯೂ ಕೇಳಿಸಿಕೊಳ್ಳದಂತೆ
ಇದ್ದವನೇ ಇಲ್ಲಿ ಕೆಲವೊಮ್ಮೆ ಜಾಣ
ತಪ್ಪಲ್ಲದ ತಪ್ಪಿಗೆ ಗೊತ್ತು ಗುರಿ ಇಲ್ಲದೆ
ಬಂದು ನಾಟುವುದು
ಮೈ ಮನವ ಛೇದಿಸುವುದು
ದ್ವೇಷ ಅಸೂಯೆಗಳ ಬಾಣ
ಹರಿಯುವುದು ರಕ್ತ ತರ್ಪಣ
ದೈಹಿಕ ಮಾನಸಿಕ ಹಿಂಸೆಗೆ
ಕುದಿಯುವುದು ರಕ್ತದ ಪ್ರತಿ ಕಣಕಣ
ಪ್ರೀತಿ ತಾಳ್ಮೆ ಇಲ್ಲದ ಜಗದೊಳಗೆ
ಅನರ್ಥ ಸಂಭವಿಸುವುದು

ರಾಗ ದ್ವೇಷಗಳ ಮರೆತು
ಒಂದಾಗಿ ಎಲ್ಲರೂ ಬೆರೆತಾಗ
ಮನವು ಅರಳುವುದು
ದ್ವೇಷ ಅಸೂಯೆ ನರಳುವುದು
ಆತಂಕದ ಛಾಯೆ ಅಳಿಯುವುದು
ಒಲವ ಹನಿ ಜೊತೆ ಸೇರಿದಾಗ
ಬದುಕು ಹಸಿರಾಗುವುದು
ನಾಳೆಗಳು ಗೆಲುವಾಗುವುದು

ನಾಗರಾಜ.ಜಿ. ಎನ್. ಬಾಡ

7 Responses

  1. ಮುಕ್ತ c. N says:

    ಸುಂದರ, ಅರ್ಥ ಪೂರ್ಣ ಕವನ.

  2. ಅರ್ಥ ಪೂರ್ಣ ಕವನ ..ಸಾರ್

  3. ಪದ್ಮಾ ಆನಂದ್ says:

    ಪ್ರೀತಿಯ ಮಳೆ ಹನಿಯ ಸಿಂಚನದಿಂದ ಮನ ಪ್ರಫುಲ್ಲಗೊಂಡಿತು.

  4. Navya says:

    ಸಮಾಜ ಸಾಗುತ್ತಿರುವ ಪಥಕ್ಕೆ ಕನ್ನಡಿ ಹಿಡಿಯುವಂತಿದೆ ತಮ್ಮ ಕವನ..ಚೆನ್ನಾಗಿದೆ

  5. ನವ್ಯಾ says:

    ಸಮಾಜ ಸಾಗುತ್ತಿರುವ ಪಥದ ನೈಜತೆ ಅಡಗಿದ ಕವನ ಚೆನ್ನಾಗಿದೆ..

  6. ಶಂಕರಿ ಶರ್ಮ says:

    ರಾಗ ದ್ವೇಷಗಳ ಮರೆತು ಒಲವ ಹನಿಯ ಸೇರಿಸುವ ಸುಂದರ ಸಂದೇಶವನ್ನು ಹೊತ್ತ ಚಂದದ ಕವನ.

  7. ನಯನ ಬಜಕೂಡ್ಲು says:

    ಚಂದದ ಕವನ

Leave a Reply to Navya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: