ಸಂಬಂಧ

Share Button

ಅರಿವಿರದ ವಯಸ್ಸಲ್ಲಿ
ಎಲ್ಲವೂ ಚಂದ ಚಂದ
ಸುತ್ತಲೂ ಬೆಳೆಯುವುದು
ಸುಂದರ ಅನುಬಂಧ
ಬೇಧ ಭಾವದ ಸೋಂಕಿರದ
ಒಲವ ಮಧುರ ಬಂಧ
ನೋವು ನಲಿವುಗಳನ್ನು
ಮರೆಸುವ ಆತ್ಮೀಯ ಸಂಬಂಧ

ಮೇಲು ಕೀಳಿನ ಭಾವವರಿಯದ
ಮುಗ್ಧತೆಯಿಂದ ತುಂಬಿದ ಮನಸು
ಬಡವ ಶ್ರೀಮಂತನೆಂಬ ಬೇಧವನ್ನು
ಬಯಸದ ಸಹಿಸದ ಮನಸು
ಇಂದು ಹಾಗಿಲ್ಲ ಯಾರ ಮನಸು
ಎಲ್ಲರ ಮನದೊಳಗು ಕೊಳಕು
ಎಲ್ಲರೂ ಮಾಡುವರು ಇಂದು
ಇನ್ನೊಬ್ಬರಿಗೆ ಕೆಡುಕು

ಹಿಂದೊಂದು ಮುಂದೊಂದು
ಸುಮ್ಮನೆ ಮಾಡುವರು ಹುಳುಕು
ಸರಿ ತಪ್ಪುಗಳನ್ನು ಮರೆತು
ಒಳ್ಳೆಯತನವನ್ನು ಹುಡುಕು
ಚಿಕ್ಕ ಜೀವನವನ್ನು
ಚೊಕ್ಕದಾಗಿ ಮುಗಿಸು
ಬದುಕಿನ ಸೌಂದರ್ಯವ
ಹಿರಿದುಗೊಳಿಸು

-ನಾಗರಾಜ ಜಿ. ಎನ್. ಬಾಡ

5 Responses

  1. ಸಂಬಂಧ ಹೌದು ಸತ್ಯವಾದ ಮಾತು..ಅದನ್ನು ತಮ್ಮ ಕವಿತೆಯ ಮೂಲಕ ಹೇಳಿ ರುವುದು ಚೆನ್ನಾಗಿ ಬಂದಿದೆ ಸಾರ್

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಕವನ

  3. ಪದ್ಮಾ ಆನಂದ್ says:

    ಒಂದೊಳ್ಳೆಯ ಸಂದೇಶವನ್ನು ಬೀರುವ ಸುಂದರ ಸತತಕವನ.

  4. ಶಂಕರಿ ಶರ್ಮ says:

    ಕಲ್ಮಶವಿಲ್ಲದ ಮಗುವಿನ ಮುಗ್ಧ ಮನವು, ಬೆಳೆದಂತೆಲ್ಲ ಮುಗ್ಧತೆ ಅಳಿಯುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾ, ಕೆಡುಕಿನತ್ತ ಮುಖಮಾಡದೆ, ಒಳ್ಳೆತನವನ್ನು ಹುಡುಕುವ ಅಗತ್ಯತೆಯನ್ನು ಒತ್ತಿ ಹೇಳುವ ಸುಂದರ ಕವನ.

  5. ಸಂಬಂಧಗಳ ಬಗ್ಗೆ ಸುಂದರವಾದ ಕವನ

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: