ಬೆಳಕು-ಬಳ್ಳಿ

ಕಾಳಿಂಗ ಮರ್ದನ

Share Button

ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದು
ಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು

ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದು
ಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು

ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನು
ಪ್ರಾಣಾಯಾಮ ಧ್ಯಾನವೆಂಬ ಪುಟ್ಟ ಪಾದಗಳಿಂದ ಹಾವ ಮರ್ಧಿಸಿಹನು

ಯಮ ನಿಯಮಗಳೆಂಬ ತಾಳಕ್ಕೆ ನರ್ತಿಸಿಹನು
ಅಹಂಕಾರದ ಸರ್ಪ ಮನೋ ನದಿಯ ತೊರೆದು ಹೋಗಿಹುದು

ನೆಮ್ಮದಿ ಪರಮಾನಂದದ ತಿಳಿನೀರು ಹರಿದಿಹುದು

-ಕೆ.ಎಂ ಶರಣಬಸವೇಶ

4 Comments on “ಕಾಳಿಂಗ ಮರ್ದನ

  1. ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ರಚನೆಗೊಂಡ ಬಾಲಮುಕುಂದನ ಕಾಳಿಂಗ ಮರ್ದನದ ಕವನ ಸೊಗಸಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *