ಶಬ್ದದೊಳಗಣ ನಿಶ್ಶಬ್ದ

Share Button

ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?
ಕೇಳಿದ ಶಿಷ್ಯನ ಪ್ರಶ್ನೆಗೆ
ಗುರುಗಳ ಉತ್ತರ ಮಾತಿನಲಲ್ಲ !
ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!

ಮರವೊಂದನು ತೋರಿದರು ; ಮಗುಮ್ಮಾದರು
ತಂಗಾಳಿ ತೊನೆವಾಗ ಹಣ್ಣಾದ ಎಲೆಯೊಂದು
ಹಾಗೇ ಏನನೂ ತಂಟೆ ಮಾಡದೆ ಸೀದಾ
ಜಾರುತ ನೆಲಕಿಳಿಯುತ ಶರಣಾಯಿತು ಇಳೆಗೆ ;
ಚಿಗುರುವ ಎಲೆಗೆ ದಾರಿ ಮಾಡಿಕೊಡುವ ಬಗೆ

ಪದ್ಮಪತ್ರದ ಜಲಬಿಂದುವಿನ ನಂಟನುಸುರುತ
ಪ್ರತಿಫಲಿಸುವ ರವಿಕಿರಣವ, ಸುರಿವ ಹಿಮಕೆ
ಆವಿಯಾಗುವ ಶೂನ್ಯವ ತೋರಿದರು :
‘ಹೊರಗಿದ್ದೂ ಒಳಗಿರುವ ಬ್ರಹ್ಮಾಂಡದ ಗಂಟು
ಬೆಳಗಿಸುವ ಅನುಭೂತಿಗೆ ಈ ಎಲ್ಲವೂ ಉಂಟು’

ಒಣಗಿದೆಲೆಗಳ ಮೇಲೆ ಸರಸರ ಹೆಜ್ಜೆ ಹಾಕುತ
ಗುರುಶಿಷ್ಯರಿಬ್ಬರೂ ಸುಮ್ಮನೆ ಧ್ಯಾನಿಸುತ
ಕುಟೀರದತ್ತ ಸರಿದರು, ಭ್ರಮೆಯ ತೊರೆದರು !
‘ನಿನ್ನನ್ನು ಗೆಲ್ಲು ; ನನ್ನಲ್ಲಿ ನಿಲ್ಲು’
ಎಂಬ ದಿವದ ಕರೆಗೆ ಓಗೊಟ್ಟರು.

ಅಲ್ಲಿದ್ದುದು ಕೇವಲ ಸದ್ದು; ಮನಕೆ ಗುದ್ದು
ಮಾತಿನ ಹಂಗಿರದ ಅರಿವಿನೆಚ್ಚರದ ಮುದ್ದು

ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

29 Responses

  1. ವಾವ್.. ಮಾತಿಲ್ಲದೆ..ವಾದವಿವಾದವಿಲ್ಲದ ..
    ಪ್ರಾತಕ್ಷತೆಯಿಂದ …ಪ್ರಶ್ನೆ ಗೆ ಉತ್ತರ… ಕಲಾತ್ಮಕ ವಾದ ಕವನ..ಅಭಿನಂದನೆಗಳು ಮಂಜುರಾಜ್ ಸರ್.

    • MANJURAJ H N says:

      ಪ್ರಶ್ನೆಗುತ್ತರ……….ಧನ್ಯವಾದಗಳು ನಾಗರತ್ನ ಮೇಡಂ. ನಿಮ್ಮ ಸಹೃದಯಕೆ ಶರಣು.

  2. ನಯನ ಬಜಕೂಡ್ಲು says:

    ಸುಂದರವಾದ ಕವನ

    • MANJURAJ H N says:

      ಧನ್ಯವಾದಗಳು ನಯನ ಮೇಡಂ, ನಿಮ್ಮ ನಿರಂತರ ಪ್ರತಿಸ್ಪಂದನಕೆ ಮತ್ತು ಸಹೃದಯಕೆ

  3. ಶಂಕರಿ ಶರ್ಮ says:

    ಗುರು ಶಿಷ್ಯರ ನಿಶ್ಶಬ್ದ ಸಂವಾದ ಅರ್ಥಪೂರ್ಣ !… ಚಂದದ ಕವನ.

    • MANJURAJ H N says:

      ಧನ್ಯವಾದಗಳು ಶಂಕರಿ ಮೇಡಂ, ಓದಿ ಪ್ರತಿಕ್ರಿಯಿಸಿದ ನಿಮ್ಮ ಸಹೃದಯತೆಗೆ ಶರಣು

  4. ವಿದ್ಯಾ says:

    ನಮಸ್ಕಾರ, ತುಂಬಾ ಕಡಿಮೆ ಸಾಲುಗಳಲ್ಲಿ, ಭವದೊಳಗಿನ ಭಾವಗಳ ಗೆಲ್ಲುವ ಬಗ್ಗೆ,,, ಕವನದಲ್ಲಿ ತಿಳಿಸಿದ ರೀತಿ ಅನನ್ಯ

    • MANJURAJ H N says:

      ಭವದೊಳಗಿನ ಭಾವಗಳ ಗೆಲ್ಗೆ, ಅದರ ಬಗೆ…….ಓಹ್!‌ ಚೆಂದದ ಪ್ರತಿಸ್ಪಂದನ. ಧನ್ಯವಾದಗಳು ವಿದ್ಯಾ ಮೇಡಂ

    • MANJURAJ H N says:

      ಧನ್ಯವಾದಗಳು ಮೇಡಂ

  5. ರಾ.ಸುರೇಶ್ says:

    ಏನೇ ಬರೆದರೂ ಅರ್ಥಗರ್ಭಿತ ಪದ ಮತ್ತು ವಾಕ್ಯ, ಅದ್ಭುತವಾದ ಅರ್ಥ. ಇನ್ನೇನು ಬೇಕು! ವಿಚಾರವಂತರಾಗಲು !

    • Manjuraj says:

      ಧನ್ಯವಾದಗಳು ಸ್ನೇಹಿತರೇ….

      ಬಿಡುವಿಲ್ಲದ ನಿಮ್ಮ ಕೆಲಸಗಳ ನಡುವೆಯೂ
      ಪ್ರೀತಿಯಿಂದ ಓದಿ ಪ್ರತಿಕ್ರಿಯೆ ದಾಖಲು
      ಮಾಡಿದ ನಿಮಗೆ ಧನ್ಯವಾದಗಳು

  6. Dr Jayappa Honnali says:

    ವಾವ್ ಸುಂದರ ಕವನ… ಖುಷಿಯಾಯಿತು ಸರ್
    ಸಾವಿರ ನಮನ..!

    • Manjuraj says:

      ಧನ್ಯವಾದಗಳು ಕವಿಗುರುವೇ

      ದಯಮಾಡಿ ನೀವೂ
      ಸುರಹೊನ್ನೆಗೆ ಬರೆಯಿರಿ

      ನಿಮ್ಮ ಕವಿತೆಯೋದಬೇಕು
      ನಾವೆಲ್ಲರೂ ಇಲ್ಲಿ
      ಈ ತಾಣದಲ್ಲಿ !

    • MANJURAJ H N says:

      ಧನ್ಯವಾದಗಳು ಗುರುವೇ

  7. ರಾಮೇಗೌಡ ಬಿ. ಎಚ್ says:

    ತುಂಬಾ ಚನ್ನಾಗಿದೆ ಗುರುಗಳೇ…. ಸ್ವತಃ ಅನುಭವದ ಮೂಲಕ ಉತ್ತರ ಕಾಣಿಸುವುದು….

  8. ನಾಗೇಂದ್ರ says:

    ಪ್ರಬೋಧ

  9. ಎಂ. ಕುಸುಮ says:

    ಅನುಭವವು ಅನುಭಾವವಾಗಲು ಗುರು ಬೇಕೇ ಬೇಕು.
    A good poem, which leads to introspection.

    • Manjuraj says:

      ನಿಜ ಮೇಡಂ….

      ಅಂತರತಮಕೆ ಬೆಳಕಿನ
      ಕಿರಣ

      ಹಾಯ್ದಾಗ ಅಹಮಿನ ಮರಣ !

      ಧನ್ಯವಾದಗಳು, ದಯಮಾಡಿ
      ನೀವೂ ಬರೆಯಿರಿ

  10. Hema says:

    ಸೊಗಸಾದ ಕವನ.

  11. ವಿಜಯ says:

    ಅಂತರತಮನೇ ಗುರು ಆತ್ಮವಿಹಾರಿ ….. ಎಂಬ ಅಂತಸತ್ವ ನಿಮ್ಮ ಕವನ ಆತ್ಮಜ್ಞಾನದ ಬೆನ್ನಟ್ಟಿ ಹೊರಟ ಶಿಷ್ಯ ನಿಗೆ ಪ್ರಕೃತಿಯ ಅವಿಚ್ಚಿನ್ನತಿಯಲ್ಲಿ ಸತ್ಯ ಕಾಣಿಸಿದ ಗುರು ಮಹಾ ಮೇರು

  12. Dr Krishnaprabha M says:

    ಕವನದ ಆಶಯ ಚೆನ್ನಾಗಿದೆ

  13. Padma Anand says:

    ಸುಂದರವಾದ ಕವನ

  14. Padmini Hegade says:

    ಆರಂಭ, ನಡಿಗೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: