ಬದುಕು…

Share Button

ನಾವು ಬದುಕಿನೊಳಗೊ..
ನಮ್ಮಿಂದ ಬದುಕೊ…
ಎಂದೆಲ್ಲಾ ಚಿಂತಿಸದಿರು ಮನವೇ,

ನಡೆಸಿದಂತೆ ನಡೆಯಬೇಕು
ಮನ ನುಡಿಸಿದಂತೆ ನುಡಿಯಬಾರದು
ಎಲ್ಲವೂ ಒಳಗೆ.. ಒಳಗೆ.. ಒಳಗೆ..

ಸತ್ಯವ ಮಿಥ್ಯವೆಂದು ಭ್ರಮಿಸಬಹುದು
ಮಿಥ್ಯವೇ ಜೀವನವ ನಡೆಸಬಹುದು
ಚಕ್ರದ ಉರುಳುವಿಕೆಯೊಂದಿಗೆ
ಉರುಳುತ್ತಿರಬೇಕಷ್ಷೇ…

ಕೆಸರಲ್ಲಿದ್ದರು ಕಮಲ
ಅರಳದೆ ಉಳಿದೀತೆ?
ಕಾಡಾದರು ಮಲ್ಲಿಗೆಯ
ಸೌಗಂಧಕೆ ಕೊರತೆಯೇನಾದರು ಇದ್ದೀತೆ…
ಇಲ್ಲವಲ್ಲ…ಹಾಗೆಯೇ…

ನಮ್ಮ ಬದುಕು ನಮಗೆ
ಪ್ರೀತಿ ಕೊಡದವರ ನಡುವೆಯು
ನಮ್ಮತನದ ಉಳಿವಿಗಾಗಿ
ನಮ್ಮ ಬದುಕ ಗೆಲುವಿಗಾಗಿ
ಶ್ರಮಿಸೋಣ.

– ವಿದ್ಯಾ ವೆಂಕಟೇಶ್ , ಮೈಸೂರು

20 Responses

  1. ಬಿ.ಆರ್.ನಾಗರತ್ನ says:

    ಬದುಕ ನಡೆಸುವ ಬಗ್ಗೆ ಬರೆದ ಕವನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಗೆಳತಿ.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ. ಎಲ್ಲೂ ನಿಲ್ಲದೆ, ಸೋಲದೆ, ಮುಂದೆ ಸಾಗುವ ಸಂದೇಶವನ್ನು ನೀಡುವ ಕವನ

  3. Latha says:

    Thumba arthagarbitha vadha kavana beku hennumakkalige enthadondhu spoorthi needuva kavana

    • ವಿದ್ಯಾ says:

      ನಮಸ್ಕಾರ,
      ಕವನದಾಶಯ ಮನವ ತಟ್ಟಿದ್ದಕ್ಕೆ
      ಬಾವಾಭಿವಂದನೆಗಳು.

  4. Anonymous says:

    Very nice good luck

  5. Uma T. says:

    Thumb change bandede good luck

  6. ಶಂಕರಿ ಶರ್ಮ says:

    ಬದುಕಲ್ಲಿ ಬರುವ ಕಷ್ಟಗಳನ್ನು ಬಂದಂತೆ ಧೈರ್ಯದಿಂದ ಎದುರಿಸಿ ಮುನ್ನಡೆಯಲು ಪ್ರೇರೇಪಿಸುವ ಸಂದೇಶವನ್ನು ಸಾರುವ ಕವನ ಇಷ್ಟವಾಯ್ತು.

    • Anonymous says:

      ಸಂದೇಶದ ಸಾರವನ್ನು ಅಥೈಸಿಕೊಂಡಿದಕ್ಜೆ ನಮನಗಳು,
      ವಿದ್ಯಾ

  7. B.k.meenakshi says:

    ಬದುಕು ಬಂದಂತೆ ಸ್ವೀಕರಿಸಿ ಅದಕ್ಕೆ ನ್ಯಾಯ ಒದಗಿಸಲು , ಅನುಭವಿಸಲು ಕೊಟ್ಟ ಕರೆ ಈ ಕವನ. ಚೆನ್ನಾಗಿದೆ.

  8. ಗಾಯತ್ರಿ ಸಜ್ಜನ್ says:

    ಉತ್ತಮವಾದ ಕವನ ಧನ್ಯವಾದಗಳು

  9. Dharmanna dhanni says:

    ಕವನ ಮೆಚ್ಚುಗೆಯಾಯಿತು. ಕವನ ಆಶಯ ಸುಪರ್

  10. Anitha R says:

    Very meaningful and feel the depth in this lavanya.Keep up the good work.All the best.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: