ಉಳಿಕೆ

Share Button

ಮಾತು ಉಳಿಸುವುದು
ರಾತ್ರಿಯಲ್ಲಿ ಬರಬಹುದಾದ
ಶ್ರೀಕೃಷ್ಣನಿಗೆ‌ ಅನ್ನ ಉಳಿಸಿದಂತಲ್ಲ
ಎಂದಿನದೋ ಪ್ರತಿಜ್ಞೆಗಳಿಗೆ
ಮಣಿಕಟ್ಟು ಕತ್ತರಿಸಿ ರಕ್ತ ಬಸಿಯುವುದೂ ಅಲ್ಲ
ಅದೊಂದು ಮಾತಿಗೆ
ನೇಣುಬಿದ್ದು ಜತೆಗಿದ್ದವರ
ಜೀವಹಿಂಡುವುದು
ಕೊರಗಿ ಸೊರಗಿ
ಹಿಡಿತಕ್ಕೆ ಸಿಗದ
ಸೀಮೆಸುಣ್ಣ ಆಗುಳಿವುದು
ಎಲ್ಲೋ ಜಿನುಗುವ
ಮಿಲಿ ಲೆಕ್ಕದ ಕರುಣಹನಿಗೆ
ಬಾಯ್ಬಿಟ್ಟು ಕಾಯುವುದು
ಉಹೂಂ
ಇದಾವುದೂ ಅಲ್ಲ

ಮಾತು ಎದೆಯೊಳಗಿಷ್ಟು
ಉಳಿದಿರುವಾಗಲೇ
ಹೂಗಿಡದಂತೆ ಜೋಪಾನ
ಮಾಡಿ
ಎದೆನೆಲದ ಹಸಿ ಆರದಂತೆ
ಪೊರೆಯುವುದು
ಹಸುಗೂಸೊಂದು ಜೋಲಿಯಲಿ
ನಿದ್ದೆಜೊಂಪಿನಲಿ
ಮೆಲುನಗುವಾಗ
ಎಚ್ಚರದಲಿ ಹೆಜ್ಜೆಯೂರಿದಂತೆ
ಗೆಜ್ಜೆಯೂ ಸದ್ದು ಮಾಡದಂತೆ
ನಡೆಯುವುದು
ಮಾತು ಉಳಿಸುವುದೆಂದರೆ
ಮೌನದಲಿ ಗೀತೆ ಮಿಡಿದಂತೆ
ಒಲುಮೆಯಲಿ ಒಂದಾದಂತೆ

– ಎಸ್.ನಾಗಶ್ರೀ

 

5 Responses

  1. Anonymous says:

    ಚೆನ್ನಾಗಿದೆ ಕವನ

  2. ನಯನ ಬಜಕೂಡ್ಲು says:

    ಇತ್ತ ವಚನದ ಶ್ರೇಷ್ಠತೆ ಏನೆಂಬುದನ್ನು ತಿಳಿಯಪಡಿಸುವ ಕವನ

  3. Hema says:

    ಕವನ ಇಷ್ಟವಾಯಿತು.

  4. Amulya S says:

    ‘ಎದೆನೆಲದ ಹಸಿ ಆರದಂತೆ ಪೊರೆಯುವುದು’ ವಾಹ್… ಅದ್ಭುತ ಸಾಲುಗಳು.

  5. ಶಂಕರಿ ಶರ್ಮ says:

    ಸೊಗಸಾದ ನವ್ಯ ಕವನ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: