ಶಾಂತಿದೂತ ಗೌತಮಬುದ್ಧ

Share Button

ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ
ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।।

ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ
ಜಗದ ವ್ಯಾಧಿಗಳಿಗೆ ಔಷದಿ ಅರಸುತ ಹೋದನು ಸಿದ್ಧಾರ್ಥ ।।

ಜನನ ಮರಣಗಳ ನಡುವಿನ ಕೃತಕ ಸುಖದ ಪೊರೆ ಕಳಚ ಹೊರಟನು,
ಗಯಾದ ಭೋಧಿ ವೃಕ್ಷದಡಿಯಲಿ ಗೌತಮ ಬುದ್ಧನಾದನು ಸಿದ್ಧಾರ್ಥ ।।

ಪಿಟಿಕಗಳ ಮೂಲಕ ಜನತೆಗೆ ಉಪದೇಶ ಮಾಡಲು ಶಿಷ್ಯರನು ಕಳಿಸಿದನು,
ಬದುಕಲಿ ಆರ್ಯಸತ್ಯಗಳು ಮೋಕ್ಷದ ಮಾರ್ಗಗಳೆಂದನು ಸಿದ್ಧಾರ್ಥ ।।

ಲೋಕಕೆ ಮಹಾಪರಿನಿರ್ವಾಣವ ಪ್ರತಿಬಿಂಬಿಸಿದನು ಶಾಂತಿಧೂತ,
ಬಿಜಲಿಯ ಪದಗಳ ಲಾಲಿತ್ಯದೊಳಗೆಅಜರಾಮರನಾದನು ಸಿದ್ದಾರ್ಥ।।

-ಈರಪ್ಪ ಬಿಜಲಿ 

3 Responses

  1. ನಯನ ಬಜಕೂಡ್ಲು says:

    ತಮವನ್ನು ದೂರವಾಗಿಸುವಂತಹವು ಗೌತಮನ ತತ್ವಗಳು.

  2. ಧರ್ಮಣ ಧನ್ನಿ says:

    ಬುದ್ದನ ಕವನ ಮನ ಹಿಡಿಸಿತು.ಸುಫರ್ ಧನ್ಯವಾದಗಳು

  3. ಶಂಕರಿ ಶರ್ಮ says:

    ಸಕಾಲಿಕ ಗಝಲ್ ತುಂಬಾ ಇಷ್ಟವಾಯಿತು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: