ಭಾವಾಗ್ನಿ 

Share Button

ತಮ್ಮನ್ನು ಸೆರೆಹಿಡಿದ
ಮುಳ್ಳಿನ ಬೇಲಿಗೆ
ಮೃದುತ್ವವನ್ನು
ಅದ್ದಬಲ್ಲವು ಹೂಗಳು

ಪಂಜರಗಳಿಗೆ
ಮಾತುಗಳನ್ನುಕಲಿಸಿ
ಚೈತನ್ಯವುಂಟುಮಾಡಬಲ್ಲವು
ಗಿಳಿಗಳು

ಅಪ್ಪಿಕೊಂಡ
ಹಾವುಗಳನ್ನು
ಸುವಾಸಿತಗೊಳಿಸಬಲ್ಲವು
ಕೇದಗಿಯ ಪೊದೆಗಳು

ನಾಟಿದ ಬೀಜಕ್ಕೆ
ಕಾಯವನೀಡಿ
ಹೂವಾಗುವುದು ಕಾಯಾಗುವುದು
ಕಲಿಸಬಲ್ಲದು ನೆಲ

ಭಾವಾಗ್ನಿಗೆ ಬಂಧನಗಳು
ಕರಗುತ್ತವೆ
ಕಟೆಕಟೆಯಲ್ಲೂ
ಚಲನವುಂಟಾಗುತ್ತದೆ
ಬೀಗಗಳು ಒಡೆಯುತ್ತವೆ
ಸೆರೆಮನೆಗಳು ತಿರುಗಿಬೀಳುತ್ತವೆ.

ತೆಲುಗು ಮೂಲ : ಗಾರ ಶ್ರೀರಾಮಮೂರ್ತಿ
ಅನುವಾದ : ರೋಹಿಣಿಸತ್ಯ

2 Responses

  1. ನಯನ ಬಜಕೂಡ್ಲು says:

    ಭಾವ ತೀವ್ರತೆ ಎಷ್ಟು ಬಲವಾಗಿರುತ್ತದೆ ಅನ್ನುವುದನ್ನು ಸಾರುವ ಸಾಲುಗಳು.

  2. Shankari Sharma says:

    ಸುಂದರ ಭಾವಾನುವಾದದ ಚಂದದ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: