ಶರಣು ಶರಣೆಂಬೆ

Share Button


ಶಿವಕುಮಾರ ಗುರುಗಳಿಗೆ

ಶಿಸ್ತಿನ ಸಿಪಾಯಿಗೆ
ಸಾಮಾಜಿಕ ಕ್ರಾಂತಿಯ ಹರಿಕಾರನಿಗೆ
ಶತಾಯುಷಿಗೆ
ನಡೆದಾಡುವ ದೇವರಿಗೆ , .
ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷೆ 
ಬೇಡಿದಿರೀ,
ನಿಸ್ವಾರ್ಥ ಸೇವೆಯಿಂದ ಸಿದ್ದಗಂಗಾ ಮಠದ ಏಳ್ಗೆಗೆ
ಶ್ರಮಿ ಸಿದಿರಿ,
ಮಠವನ್ನು ಮಾದರಿ ಮಠವನ್ನಾಗಿಸಿದಿರಿ,
ಮತ್ತೊಬ್ಬರಿಗೆ ಮಾದರಿಯಾದಿರಿ,
 .
ಬಡವರ,ಅನಾಥರ,ಹಳ್ಳಿಗರ ಕಣ್ಣಾದಿರಿ,
ಜಾತಿ ಮತ ಪಂಥಗಳ  ಆಚೆ ನಿಂತು ಯೋಚಿಸಿದಿರಿ,
ಲಕ್ಸಷಾಂತರ ಮಕ್ಕಳ ಬದುಕಿಗೆ  ದಾರಿದೀಪವಾದಿರಿ,
ಸಕಲರ ಮನಗೆದ್ದು 
ದೀನಬಂಧು ಹಾಗೂ ಮಹಾಮಾನವತಾವಾದಿ ಎನಿಸಿದಿರಿ,
.
ಅನ್ನ,ಆಶ್ರಯ,ಜ್ಞಾನ ಎಂಬ ಮೂರು ದಾಸೋಹಗಳ ಮೂಲಕ
ಹೊಸ ಕ್ರಾಂತಿಯನ್ನೇ ಉಂಟು ಮಾಡಿದಿರಿ,
ಶಿಸ್ತುಬದ್ದ ಜೀವನ ಹಾಗು ಕಾಯಕದ ಮೂಲಕ
ಕರ್ಮಯೋಗಿಯೆನಿಸಿ ವಿಶ್ವಖ್ಯಾತರಾದಿರಿ,
 .
ಹೆಮ್ಮೆಯಿದೆ ನಮಗೆ ನಿಮ್ಮನಿಸ್ವಾರ್ಥ ಸೇವೆಯ ,ಬಗ್ಗೆ  
ಹೆಮ್ಮೆಯಿದೆ ನಮಗೆ ನಿಮ್ಮ ಶಿಸ್ತುಬದ್ದ ಜೀವನದ , ಬಗ್ಗೆ 
ಹೆಮ್ಮೆಯಿದೆ ನಮಗೆ ನಿಮ್ಮ ಕಾಯಕದ ,ಬಗ್ಗೆ 
 .
ಹೇ ನಡೆದಾಡುವ ದೇವನೇ,
ನಿಮಗೆ ನಮ್ಮೆಲ್ಲರ ಹೃತ್ಪೂರ್ವಕ ವಂದನೆ,

ಅಭಿವಂದನೆ……………

– ಮಾಲತೇಶ ಹುಬ್ಬಳ್ಳಿ

 

2 Responses

  1. Prakash Deshpande says:

    Congratulations Malatesh for your excellent poem published in the recent edition of Surahonne.

    Please keep up the tempo.We wish more and more such beautiful poems to flow from u and find place in everyone’s heart.

    Wish u good luck.

    Prakash Deshpande

  2. Ranganath Nadgir says:

    ಪ್ರೀಯ ಮಾಲತೇಶ್ ,. ಅದ್ಭುತ ರಚನೆ . ನಡೆದಾಡುವ ದೇವರನ್ನು ಪ್ರತ್ಯಕ್ಷ ನೋಡಿದಾ ಅನುಭವವಾಯಿತು ,
    ನಿಮ್ಮ ಮಾತೋಶ್ರೀ ಶ್ರೀಮತಿ ಕೃಷ್ಣಾಬಾಯಿಯವರು ಸ್ವತಃ ಹಾಡುಗಳನ್ನು ರಚಿಸುತ್ತಿದ್ದರು , ಹಾಗು ಅವುಗಳನ್ನು ಭಾವ ತುಂಬಿ
    ಪ್ರಸ್ತುತಪಡಿಸುತ್ತಿದ್ದ್ದರು. ನೀವು ತಾಯಿಗೆ ತಕ್ಕ ಮಗನಾಗಿದ್ದು . ನಿಮ್ಮ ಕವನ ಹಾಗು ಸಾಹಿತ್ತ್ಯ ಕೃಷಿ ಮುಂದುವರೆಯಲಿ.ನಿಮ್ಮ ಕವನ
    ಪ್ರಕಟ ಪಡಿಸಿದ ‘ಸುರಹೊನ್ನೆ’ ಪತ್ರಿಕಾ ಸಂಪಾದಕರಿಗೂ ಧನ್ಯವಾದಗಳು.
    ರಂಗಣ್ಣ ನಾಡಗೀರ್, ಕುಂದಗೋಳ್

Leave a Reply to Ranganath Nadgir Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: