Author: K N Mahabala

4

ಕವಿನೆನಪು 46 : ಅಳಿಸಲಾಗದ  ಕೆ ಎಸ್ ನ ಹೆಸರಿನ ಪ್ರಭಾವಳಿ

Share Button

ನಾನು  ನಮ್ಮ ಬ್ಯಾಂಕಿನ ಮಂಡ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಸ್ಥಳೀಯ ನ್ಯಾಯಾಲಯದಲ್ಲಿ ಬ್ಯಾಂಕ್ ಸಾಲ ಪ್ರಕರಣದಲ್ಲಿ ಸಾಕ್ಷಿ ನುಡಿಯಬೇಕಾದ ಪ್ರಸಂಗ ಬಂತು. ಕಟಕಟೆಯಲ್ಲಿ ನನ್ನ ಹೆಸರು ವಯಸ್ಸು,ಹಾಗೂ ತಂದೆಯ ಹೆಸರು ಹೇಳುತ್ತಿರುವಾಗ  ಬ್ಯಾಂಕ್ ನ ವಕೀಲರು “ ಮಹಾಸ್ವಾಮಿ ,ಇವರು ಪ್ರಸಿದ್ಧ ಕವಿ ಕೆ ಎಸ್ ನ ಅವರ ಮಗ...

3

ಕವಿನೆನಪು 45: ಕುಟುಂಬ ನಿರ್ವಹಣೆಯಲ್ಲಿ ಕೆ ಎಸ್‌ ನ…

Share Button

ನನ್ನ ಅಪ್ಪ ಅಮ್ಮ ಶಾಂತನದಿ ಹಾಗೂ ಅಬ್ಬರಿಸುವ ಸಮುದ್ರಗಳ ಅಪೂರ್ವ ಸಂಗಮ. ನಮ್ಮ ಕುಟಂಬವನ್ನು  ಕೇವಲ ಒಂದು ಇಣುಕಿನಲ್ಲಿ ಗ್ರಹಿಸಿದವರು ಕೆ.ಎಸ್.ನ ಕೇವಲ ಬರವಣಿಗೆಯಲ್ಲೇ ತೊಡಗಿಕೊಂಡಿದ್ದರು ಹಾಗೂ ನನ್ನ ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದುಕೊಂಡಿದ್ದರು. ನಮ್ಮ ತಂದೆಯವರೂ ಕೆಲವು ಸಂದರ್ಶನ ಹಾಗೂ ಮಾತುಕತೆಗಳಲ್ಲಿ ಸೌಜನ್ಯಕ್ಕಾಗಿ...

5

ಕೆ ಎಸ್‌ ನ ಕವಿನೆನಪು 44 : ಕವಿಪತ್ನಿಯ ನೆನಪು.. 2

Share Button

ಅಮ್ಮನ ನಿರ್ಭಿಡೆಯ ಮಾತುಗಾರಿಕೆ ಕೆಲವು ಸಂದರ್ಭಗಳಲ್ಲಿ ಬಿಕ್ಕಟ್ಟನ್ನೂ ತಂದೊಡ್ಡುತ್ತಿತ್ತು. ಒಮ್ಮೆ ಬೆಂಗಳೂರು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಅಮ್ಮನನ್ನು ಸಂದರ್ಶಿಸುತ್ತಿದ್ದ ನಿರೂಪಕಿ ”ಆಡಂಬರದ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ಅದಕ್ಕೆ ಅಮ್ಮ”ಏನು ಹೇಳೋದು  ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ, ಬೀಗರನ್ನು ಸಹಿಸಿ  ನಾವೇ ದಣಿದಿದ್ದೀವಿ. ಹೆಣ್ಣು...

5

ಕೆ ಎಸ್‌ ನ ಕವಿನೆನಪು 43 : ಕವಿಪತ್ನಿಯ ನೆನಪು.. 1

Share Button

  ಮದುವೆಯಾದಾಗಿನಿಂದ ನಮ್ಮ ತಂದೆಯ ಅವಸಾನದ ಕಾಲದವರೆಗೂ ಜತೆಯಾಗಿದ್ದ ನಮ್ಮ ಅಮ್ಮ ವೆಂಕಮ್ಮನವರ ಪ್ರಸ್ತಾಪವಿಲ್ಲದೆ  ಈ ಕವಿನೆನಪಿನ ಸರಣಿಗೆ  ಪೂರ್ಣತೆಯಿಲ್ಲ. ನಮ್ಮ ತಾಯಿಯ ತಂದೆ ನಾಡಿಗ ಭೀಮರಾವ್ ಸರಕಾರಿ  ಹುದ್ದೆಯಲ್ಲಿ, ಹಳೆಯ ಮೈಸೂರಿನ ಹಲವೆಡೆ ಸೇವೆ ಸಲ್ಲಿಸಿ ಅಮಲ್ದಾರ್ ಆಗಿ ನಿವೃತ್ತರಾದವರು.ನಮ್ಮ ತಾಯಿಯ ತಾಯಿಯವರ ಹೆಸರು ಸೀತಮ್ಮ.ಅವರಿಗೆ...

3

ಕೆ ಎಸ್‌ ನ ಕವಿನೆನಪು 42 : ನೆಂಟರ ವಲಯದಲ್ಲಿ ಅಚ್ಚಣ್ಣ

Share Button

  ನಾನು ಬಾಲಕನಾಗಿದ್ದಾಗ ಒಮ್ಮೆ ನಮ್ಮ ಮನೆಗೆ ಬಂದ ತಂದೆಯ ಚಿಕ್ಕಪ್ಪ ಪುಟ್ಟರಾಮಯ್ಯ ಬಾಗಿಲ ಹತ್ತಿರ  ನಿಂತಿದ್ದ ನನ್ನನ್ನು ಕಂಡು ”ಅಚ್ಚಣ್ಣ ಮನೇಲಿ ಇದಾನೇನು?” ಎಂದು ಕೇಳಿದರು . ನನಗೆ ಅವರು  ಯಾರನ್ನು ಕೇಳುತ್ತಿದ್ದಾರೆಂದು ಸ್ಪಷ್ಟವಾಗಲಿಲ್ಲ. ”ಯಾರು? “ಎಂದು ಕೇಳಿದೆ. “ಅದೇ ಕಣೋ ನಿಮ್ಮಪ್ಪ. ನಾವೆಲ್ಲ ಕೂಗೋದು...

4

ಕೆ ಎಸ್‌ ನ ಕವಿನೆನಪು 41: ಸಹೋದ್ಯೋಗಿಗಳ ಸ್ನೇಹಾಭಿಮಾನ

Share Button

ನಾನು  ಜಯನಗರದಲ್ಲಿದ್ದ ನಮ್ಮ ಬ್ಯಾಂಕಿನ ಗೃಹ ಹಣಕಾಸು ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಶಾಖೆಯ ಮುಖ್ಯಸ್ಥರು ಇಂಟರ್ಕಾಮ್ ಮಾಡಿ ಒಬ್ಬ ಗ್ರಾಹಕರನ್ನು ಪರಿಚಯ ಮಾಡಬೇಕಿದೆ ಬನ್ನಿ ಎಂದರು. ನಾನು  ಅವರತ್ತ ಹೋದೆ. ಸುಮಾರು ಎಪ್ಪತ್ತು ವರುಷ ವಯಸ್ಸಿನ ಹಿರಿಯ ಪ್ರಜೆಯೊಬ್ಬರು ಅವರ ಮುಂದೆ ಕುಳಿತಿದ್ದರು. ನ್ಯೂಜೆರ್ಸಿಯಲ್ಲಿ  ಸಿವಿಲ್ ಎಂಜನಿಯರ್ ಆಗಿದ್ದ...

3

ಕೆ ಎಸ್‌ ನ ಕವಿನೆನಪು 40: ಸಹೋದ್ಯೋಗಿಗಳ ಸ್ನೇಹಾಭಿಮಾನ-ಬಾಡಿಗೆ ಮನೆ ಪ್ರಸಂಗ

Share Button

  ನಮ್ಮ ತಂದೆ ಕರ್ನಾಟಕ ಗೃಹಮಂಡಳಿಯಲ್ಲಿ ಸುಪರಿಂಟೆಂಡೆಂಟ್ ಆಗಿ 1970 ರಲ್ಲಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಬಹುಪಾಲು ಸಹೋದ್ಯೋಗಿಗಳ ಸ್ನೇಹಾಭಿಮಾನಗಳನ್ನೂ ಸಂಪಾದಿಸಿದ್ದರು. ಅವರಲ್ಲಿ ಒಬ್ಬರು ನಾರಾಯಣ ಐಯ್ಯಂಗಾರ್ ನಮ್ಮ ನೆರೆಮನೆಯವರೇ ಆಗಿದ್ದು, ನಮ್ಮ ಹಾಗೂ ಅವರ ಕುಟುಂಬದವರ ನಡುವೆ  ಒಂದು ಸೌಹಾರ್ದಯುತ ಬಾಂಧವ್ಯವಿತ್ತು. ಶ್ರೀನಾಥ್,ದಶರಥರಾಮಯ್ಯ,ಮುಂತಾದವರ ಹೆಸರುಗಳನ್ನು ಆಗಾಗ್ಗೆ...

2

ಕೆ ಎಸ್‌ ನ ಕವಿನೆನಪು 39 : ನಡಿಗೆ ಬೆತ್ತ ಪ್ರಕರಣ.

Share Button

ಯಾರಾದರು ಸ್ನೇಹಿತರು ಅಥವಾ ಅಭಿಮಾನಿಗಳು ವಿಶ್ವಾಸದಿಂದ ನೀಡಿದ ಸ್ಮರಣಿಕೆಗಳನ್ನೋ, ಅಥವಾ ನಿತ್ಯುಪಯುಕ್ತ ವಸ್ತುಗಳನ್ನೋ ಬಹಳ ಜತನದಿಂದ ಕಾಪಾಡಿಕೊಳ್ಳುವ, ಅವರ ಔದಾರ್ಯವನ್ನು ನೆನಪಿಸಿಕೊಳ್ಳುವ ತಂದೆಯವರ ಸ್ವಭಾವ ಕೆಲವು ಸಾರಿ ವಿಚಿತ್ರವೆನಿಸುತ್ತಿತ್ತು..ಈ ವಸ್ತುಗಳು ಕಣ್ಣೆದುರು ಕಾಣದಿದ್ದರೆ ಅವರ ತಹತಹ ಹೇಳತೀರದು. ಅದಕ್ಕೆ ಸಾಕ್ಷಿ ಈ ನಡಿಗೆ ಬೆತ್ತ ಪ್ರಕರಣ. ಮೈಸೂರಿನಲ್ಲಿ...

4

ಕೆ ಎಸ್‌ ನ ಕವಿನೆನಪು 38: ಪ್ರಶಸ್ತಿಗಳ ಪ್ರಸಂಗ

Share Button

ಪ್ರಶಸ್ತಿ, ಮನ್ನಣೆ ,ಪುರಸ್ಕಾರಗಳತ್ತ ಅಷ್ಟಾಗಿ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಕಾವ್ಯ,ಗದ್ಯ ಅನುವಾದಗಳತ್ತ ಗಮನ ಹರಿಸಿದ್ದ ನಮ್ಮ ತಂದೆಯವರಿಗೆ ಬಹುಪಾಲು ಎಲ್ಲ ಪ್ರಮಖ ಗೌರವಗಳೂ ಅರಸಿ ಬಂದವು. (ಅವುಗಳ ವಿವರವನ್ನು ಅಂತಿಮ ಭಾಗದಲ್ಲಿ ನೀಡಲಾಗುವುದು) ಅರ್ಜಿ ಹಾಕುವುದು ,ಒಬ್ಬರ ಹತ್ತಿರ ಶಿಫಾರಸು ಮಾಡಿಸುವುದು ತಮ್ಮ ಸ್ವಾಭಿಮಾನಕ್ಕೆ...

3

ಗುಬ್ಬಚ್ಚಿ ಪುರಾಣ

Share Button

ಈಚೆಗೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳ ಅಂಕಣಗಳೆಲ್ಲ  ಸಾಮಾನ್ಯವಾದ ವಿಷಯವೊಂದನ್ನು ವ್ಯಾಪಿಸಿದ್ದವು.ಹಲವು ಖ್ಯಾತನಾಮರೆಲ್ಲ ಈ ಚರ್ಚೆಯಲ್ಲಿ  ಭಾಗವಹಿಸಿದ್ದರು. ಒಬ್ಬ ಅಂಕಣಕಾರರಂತೂ  ತಮ್ಮ ಒಂದು ಇಡೀ ಅಂಕಣ ಬರಹವನ್ನು ಈ ವಿಷಯಕ್ಕೆ ಮೀಸಲಿಟ್ಟಿದ್ದರು. ಚರ್ಚಿತವಾದ ವಿಷಯವೇನು ಗೊತ್ತೇ? ಗುಬ್ಬಚ್ಚಿ. ಚರ್ಚೆಯ ಎಳೆ ಆರಂಭವಾದದ್ದು ಹೀಗೆ. ಜನಸಾಮಾನ್ಯರೊಬ್ಬರು ಬೆಂಗಳೂರಿನ ಮನೆಮನೆಗಳಲ್ಲಿ...

Follow

Get every new post on this blog delivered to your Inbox.

Join other followers: