ಕೊನೆಗಾದರೂ
ಮರವನ್ನು ಬಿಟ್ಟು ಹೋಗಲೇಬೇಕು
ಗೂಡನ್ನು ಬಿಟ್ಟ ಹಕ್ಕಿ
ಆಕಾಶವನ್ನೇ ನಂಬಲೇಬೇಕು
ಈ ‘ಇಂದು’ ಕೂಡ
ನಾಳೆಯ ನೆನಪಾಗಿ ಉಳಿಯುತ್ತದೆ.
ಋತುಗಳೆಲ್ಲವೂ
ಬದಲಾವಣೆ ಎಂಬ ಅಕ್ಷರಗಳನ್ನೇ ಬರೆಯುತ್ತವೆ
ನಿಂತೇ ಇರಬೇಕೆಂಬುದು
ಮರದ ಬೇರುಗಳ ಆಸೆ.
ಮುಂದೆ ಸಾಗುವುದು
ಬದುಕಿನ ಧರ್ಮ
ಮರದಿಂದ ಉದುರಿದ
ಎಲೆ ಹೇಳುವ ಪಾಠ ಒಂದೇ—
ತ್ಯಜಿಸುವುದು ಕೂಡ
ನವ ವಿಕಾಸಕ್ಕೆ ಆರಂಭವೇ
ಬದಲಾವಣೆಯನ್ನು ಅಪ್ಪಿಕೊಂಡ ಹೃದಯ
ಮತ್ತೆ ಹೊಸ ಚಿಗುರಾಗಿ ಹುಟ್ಟುತ್ತದೆ.
ತೆಲುಗು ಮೂಲ: ವಾರಾಲ ಆನಂದ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್


ಚಿಕ್ಕ ಸುಂದರ ಅರ್ಥಗರ್ಭಿತ ಕವನ
ಮೌಲ್ಯ ಯುತವಾದ ಸಂದೇಶ ವನ್ನೊಳಗೊಂಡ ಕವನ..ಮೂಲ ಕವಿ..ಹಾಗೂ ಅನುವಾದಕರಿಬ್ಬರಿಗೂ….ವಂದನೆಗಳು.
ಉತ್ತಮ ಸಂದೇಶವನ್ನು ನೀಡುವ ಕವನವು ಅತ್ಯಂತ ಸುಂದರವಾಗಿ ಅನುವಾದಗೊಂಡಿದೆ…ಧನ್ಯವಾದಗಳು.
ಚೆನ್ನಾಗಿದೆ ಕವನ
nice
ಜೀವನ ಸತ್ಯ, ಸತ್ವವನ್ನು ಸಾರುವ ಚಂದದ ಅನುವಾದ.