ಸಾಗುವ ಪಯಣದ ದಾರಿಯಲಿ
ಅಪರಿಚಿತರು ಜೊತೆಯಾಗುವರು
ಮಾತಿಗೆ ಮಾತು ಹಿತವಾಗಿ ಬೆಸೆಯಲು
ಅಪರಿಚಿತರು ಪರಿಚಿತರಾಗುವರು
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಇನ್ನೆಲ್ಲೋ ಬದುಕನು ಕಂಡುಕೊಳ್ಳುವರು
ಪ್ರೀತಿ ಆತ್ಮೀಯತೆಯ ಹಂಚಿಕೊಂಡು
ಭಾವನೆಗಳ ಅಭಿವ್ಯಕ್ತಿಯ ಪಡಿಸುವರು
ಸಮಯದ ಜೊತೆ ಜೊತೆಗೆ ಸಾಗುತ
ಒಂದೇ ಗೂಡಿನ ಹಕ್ಕಿಯಂತೆ ಬೆರೆಯುವರು
ನೋವು ನಲಿವುಗಳನ್ನು ಹಂಚಿಕೊಂಡು
ಬದುಕನು ಸುಂದರಗೊಳಿಸಿಕೊಳ್ಳುವರು
ನಂಬಿಕೆಯ ಜೊತೆಗೆ ಬದುಕು ಅರಳುವುದು
ಕಷ್ಟಗಳ ಮರೆತು ನೆಮ್ಮದಿಯ ಹೊಂದುವುದು
ಹೊಸ ಹೊಸ ಯೋಚನೆಗಳು ಜೊತೆಯಾಗುವುದು
ಬದುಕು ನವ ಚೈತನ್ಯದಿ ಮುಂದೆ ಸಾಗುವುದು
ಅನುದಿನವೂ ಇರದು ನಮಗೆ ಹಿತವಾಗಿ
ಚಿಕ್ಕ ಪುಟ್ಟ ತಪ್ಪುಗಳು ಹೆಚ್ಚುತ್ತಾ ಹೋಗಿ
ಕೊನೆಗೊಮ್ಮೆ ನಂಬಿಕೆಯ ದ್ರೋಹ ಆಗುವುದು
ಅರಳಬೇಕಾದ ಬದುಕು ಮುದುಡಿಹೋಗುವುದು
ಸುತ್ತಲೂ ನಡೆಯುವುದು ಒಳಿತು ಕೆಡುಕು
ನೋಡಿಯೂ ನೊಡದಂತಿರಬೇಕು ಹುಳುಕು
ಕೆಟ್ಟದ್ದನ್ನು ನಿರ್ಲಕ್ಷಿಸಿ ಒಳ್ಳೆಯದ ಅಪ್ಪೋಣ
ಸ್ವಾರ್ಥ ಸಾಧನೆಯ ಬಿಟ್ಟು ಒಳಿತ ಬಯಸೋಣ
ಹೊಂದಿಕೊಂಡು ಹೋದರಷ್ಟೇ ಇಲ್ಲಿ ಸುಖವು
ಮನದಿಚ್ಛೆಯಂತೆ ನಡೆದರೆ ಉಳಿಯದು ನಲಿವು
ಒಮ್ಮೊಮ್ಮೆ ಮೂಕ ಹಕ್ಕಿಯಂತೆ ಮೌನದಲ್ಲೇ
ಪರಿಪೂರ್ಣತೆಯ ಭಾವವನ್ನು ಹೊಂದೋಣ
ಈ ಜೀವನದಿ ಸಾರ್ಥಕತೆಯನ್ನು ಪಡೆಯೋಣ

–ನಾಗರಾಜ ಜಿ. ಎನ್. ಬಾಡ, ಕುಮಟ


ಸಾರ್ಥಕ್ಯವನು ನಿದರ್ಶನಗಳ ಮೂಲಕ ಬೋಧಿಸುವ ಕವಿತೆಯು ಇಷ್ಟವಾಯಿತು.
ಸಕಾರಾತ್ಮಕ ಚಿಂತನೆ ಕೈ ಹಿಡಿದು ಬರೆಸಿದೆ. ಇದಕಾಗಿ ಧನ್ಯವಾದ.
ಚಿಕ್ಕಂದಿನಲ್ಲಿ ಹೊಂದಿಸಿ ಬರೆಯಿರಿ
ಎಂಬ ಪ್ರಶ್ನೆ ಕೇಳುತಿದ್ದರು ಪರೀಕ್ಷೆಯಲಿ
ಇದೀಗ ಹೊಂದಿಕೊಂಡು ಹೋಗುವುದು
ಎಷ್ಟು ಸಂಕೀರ್ಣ? ಗೊತ್ತಾಗಿದೆ ಬದುಕಿನಲಿ
ನಿಮ್ಮ ಅಕ್ಷರ ಪ್ರೀತಿಗೆ ಮೂಕ ವಿಸ್ಮಿತ ನಾ
ನಿಮ್ಮ ಒಂದೊಂದು ಸಾಲುಗಳು ನನಗೆ ಪ್ರೇರಕ
ನಿಮ್ಮ ಪ್ರೀತಿಯ ನಾಲ್ಕು ಸಾಲುಗಗಳೇ ಚೈತನ್ಯದಾಯಕ
ಬರೆಯುವ ಖುಷಿಗೆ ಇದಕ್ಕಿಂತ ಹೆಚ್ಚಿನದು ಬೇರೇನೂ ಬೇಕಿಲ್ಲ
ಧನ್ಯವಾದಗಳು ಸರ್
ವಾಸ್ತವಿಕ ಸಂಗತಿಗಳನ್ನು ಕವಿತೆಯಲ್ಲಿ ಅನಾವರಣ ಮಾಡಿರರುವ ರೀತಿ.. ಚೆನ್ನಾಗಿ ದೆ ಸಾರ್…
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್
ಸಕಾರಾತ್ಮಕ ಭಾವಗಳನ್ನು ಬಿತ್ತುತ್ತಲೇ ಸಾಗಿದ ಕವಿತೆ ಎಚ್ಚರಿಕೆಯೊಂದಿಗೆ ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳುವ ಕಿವಿ ಮಾತನ್ನೂ ಹೇಳಿರುವುದು ಆಪ್ಯಾಯಮಾನವಾಗಿದೆ.
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್
ಸುಂದರವಾದ ಕವನ
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್
ಬಾಳಿನಲ್ಲಿ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಹಾಗೂ ಅಗತ್ಯತೆವನ್ನು ಬಿಂಬಿಸುವ ಸುಂದರ ಕವನ.
ಧನ್ಯವಾದಗಳು ಮೇಡಂ
ಸತ್ಯ ದ ಅನಾವರಣ ದ ಕವಿತೆ ತುಂಬಾ ಚೆನ್ನಾಗಿ ದೆ,,,