ಬೆಳಕು-ಬಳ್ಳಿ

ತೊಳಲಾಟ

Share Button

ಹೇಳುವುದ ಹೇಳಿ ಮುಗಿದ ಮೇಲೆ
ಇನ್ನೂ ಏನೋ ಹಾಗೇ ಉಳಿದಿದೆ
ಮನಸು ಸುಮ್ಮನೆ ತಡಕಾಡಿದೆ

ಹೇಳಬೇಕಾದುದ ಹೇಳುವುದಬಿಟ್ಟು
ಬೇರೆ ಏನೇನೋ ಹೇಳಿ ಮುಗಿಸಿದೆ
ಹೇಳಲೇ ಬೇಕಾದುದನ್ನು ಮರೆತಿದೆ

ಮನಸಿನೊಳಗೆ ಹತ್ತು ಹಲವುಬಾರಿ
ಹೀಗೆ ಹಾಗೆ ಎಂದುಕೊಳ್ಳುತ್ತೇವೆ
ಎದುರಲ್ಲಿ ಸುಮ್ಮನೆ ಬರಿದಾಗುತ್ತೇವೆ

ಎಲ್ಲ ಲೆಕ್ಕಾಚಾರವೂ ಸರಿಯಾಗಿಯೇ
ವಿಶ್ಲೇಷಣೆಗೊಂಡು ಹದವಾಗಿರುತ್ತದೆ
ಹೇಳುವಾಗ ಎಲ್ಲವೂ ಉಲ್ಟಾ ಪಲ್ಟಾ

ಮತ್ತೆ ಮತ್ತೆ ಪುನಃ ಪ್ರಯತ್ನಿಸುತ್ತೇವೆ
ಆದರೂ ಯಾಕೋ ವಿಫಲರಾಗುತ್ತೇವೆ
ಕೊನೆಗೆ ಸಾಕೆಂದು ಸುಮ್ಮನಾಗುತ್ತೇವೆ

ಬದುಕಿನಲ್ಲಿ ನಾವು ಸದಾ ಹೀಗೆಯೇ
ನೀವೆಲ್ಲಾ ನಮ್ಮ ಹಾಗೆಯೋ ಹೇಗೆ
ಯೋಚನೆಯಲ್ಲೇ ಕಳೆದುಹೋಗುವೆವು

ಹೀಗಾದರೆ ಹಾಗೆ ಹಾಗಾದರೆ ಹೀಗೆ
ನಮಗೆ ನಾವೇ ಸಂತೈಸಿಕೊಳ್ಳುತ್ತ
ಸಮಾಧಾನ ಹೊಂದುವೆವೆವು ಹೀಗೆ

ಯಾರು ಏನೆಂದುಕೊಳ್ಳುತ್ತಾರೋ
ತಪ್ಪು ತಿಳಿದುಕೊಳ್ಳುತ್ತಾರೋ ಎಂದು
ಎಣಿಸಿಕೊಂಡು ಸುಮ್ಮನಾಗುತ್ತೇವೆ

ಹೊಯ್ದಾಟದಲಿ ಮನಸು ತೊಳಲಾಡುವುದು
ಬದುಕು ಬಳಲಿ ಬೆಂಡಾಗುವುದು
ದ್ವಂದ್ವದಲ್ಲಿಯೇ ಎಲ್ಲ ಮುಗಿದುಹೋಗುವುದು

ನಾಗರಾಜ ಜಿ. ಎನ್. ಬಾಡ
ಕುಮಟ

8 Comments on “ತೊಳಲಾಟ

  1. ಬದುಕಿನಲ್ಲಿ ಹೇಳಿ ಕೊಳ್ಳುವ ಹೇಳಲಾಗದ್ದೂ ಎಷ್ಟೋ.. ಹೌದು ಅಷ್ಟೇ.. ಅದನ್ನು ಕವನದಲ್ಲಿ ಮೂಡಿಸಿರುವ ಪರಿ ಚೆನ್ನಾಗಿ ದೆ ಸಾರ್.

  2. ಹೌದು ಬದುಕಿನಲ್ಲಿ ಹೇಳಲಾಗದ್ದು ತುಂಬಾ ಇದೆ
    ಹೇಳಿದರೆ ಸಂಬಂಧಗಳು ಮುರಿದಾವು ಎಂದಾತಂಕ
    ಚಂದದ ಕವನ

  3. ಮರ್ಕಟ ಮನಸ್ಸಿನ ಸುಂದರ ಚಿತ್ರಣವನ್ನು ಕಾವ್ಯದಲ್ಲಿ ಚೆಂದವಾಗಿ ಸೆರೆಹಿಡಿಯಲಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *