ಬೆಳಕು-ಬಳ್ಳಿ

ಅರಿಯಬೇಕೆಲ್ಲರು.

Share Button

ಅವನಾಡಿಸಿದಂತೆ
ಆಡುತಿರಬೇಕು ನಾವೆಲ್ಲರು.

ಇರುವುದೆಲ್ಲವ ಬಿಟ್ಟು
ಈಶ್ವರನೆಡೆಗೆ ನಡೆಯಬೇಕೆಲ್ಲರು.

ಉಸಿರು ನಿಲ್ಲುವ ಮುಂಚೆಯೇ
ಊರ ಜನ ಕೊಂಡಾಡಬೇಕೆಲ್ಲರು.

ಋಣತ್ರಯಗಳ ತೀರಿಸಿಯೇ
ಎಲ್ಲವ ತೊರೆದು ನಡೆಯಬೇಕೆಲ್ಲರು.

ಏನಿದ್ದರೂ ಏನಿಲ್ಲದವರಂತೆ
ಐಹಿಕ ಸುಖಿಗಳಾಗಬೇಕೆಲ್ಲರು.

ಒಂದೊಂದು ಕ್ಷಣವ ಮಕ್ಕಳಂತೆ
ಓಜಸ್ಸು ಮೊಗದಿ ಬೆರೆಯಬೇಕೆಲ್ಲರು.

ಔಚಿತ್ಯಪೂರ್ಣ ಮಾತುಗಳೆಲ್ಲರೂ
ಅಂತಃಕರಣದಿ ಅರಿಯಬೇಕೆಲ್ಲರು.

ಶಿವಮೂರ್ತಿ.ಹೆಚ್, ದಾವಣಗೆರೆ.

12 Comments on “ಅರಿಯಬೇಕೆಲ್ಲರು.

  1. ಹೌದು, ಇರುವುದೆಲ್ಲವ ಬಿಟ್ಟು ಹೊರಡಬೇಕೆಲ್ಲರು. ಈ ತತ್ವವನ್ನು ಅರಿತರೆ ಬದುಕು ಎಷ್ಟು ಸುಂದರ! ಇಹಪರದ ಸತ್ಯವರುಹುವ ಸುಂದರ ಕವನ ಸರ್
    ……ಶುಭಲಕ್ಷ್ಮಿ

    1. ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು

    1. ಹಿರಿಯರ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು

  2. ಸೊಗಸಾಗಿದೆ ಸರ್.‌ ಈ ಸಲದ ಸುರಹೊನ್ನೆ ವಿಶೇಷವಾಗಿದೆ.
    ಬದುಕಿನ ತತ್ತ್ವ – ಶಾಸ್ತ್ರವೇ ಎಲ್ಲರಲೂ ಬರೆಸಿಕೊಂಡಿದೆ.

    ಖುಷಿಯಾಯಿತು. ಸುರಹೊನ್ನೆಯು ನಿಜಕೂ ಸುರರೇ
    ಸಂಭ್ರಮಿಸುವಷ್ಟು ಸುಗಂಧ ಹರಡುತ್ತಾ ಊರ್ಧ್ವಮುಖಿಯಾಗುತಿದೆ.

    ನಾವದರ ಜೊತೆಗೂ ಮೇಲಕೇರುತ್ತಿದ್ದೇವೆ. ಬರೆಯುವವರಿಗೆ ಮತ್ತು
    ಓದುವವರಿಗೆ ಹಾಗೂ ಬರೆಯುವವರೂ ಓದುವ ಮಹನೀಯರಿಗೆ
    ಚಾಚಿಟ್ಟ ಏಣಿಯಾಗಿದೆ. ಇನ್ನೇಕೆ ತಡ, ಮನಸಲೇ ಏರುತಾ ಹಾರೋಣ.

    ಕವಿತೆಯಲ್ಲಿ ಒಂಚೂರು “ವರದಿತನ” ಇಣುಕಿದೆ. ಅದು ಕಾವ್ಯಮಯ ಅಥವಾ
    ಕಾವ್ಯದ ಮೈ ಪಡೆದರೆ ಇನ್ನಷ್ಟು ಸೊಗಸಾದೀತು. ನಿಮ್ಮ ಕಾವ್ಯಧಾರೆ
    ಹೀಗೆಯೇ ಹರಿಯಲಿ; ಸಹೃದಯ ಸಡಗರಿಸಲಿ. ವಂದನೆಗಳು.

    1. ಹಿರಿಯರ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು

  3. ಬದುಕಿನ ಸಾರವನ್ನು ತಿಳಿಸುವ ಚಂದದ ಕವನ.

    1. ಹಿರಿಯರ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು

  4. ಸರಳವಾಗಿ, ಸುಂದರವಾಗಿ ಅರ್ಥವತ್ತಾಗಿ ಮೂಡಿ ಬಂದಿರುವ ಕವನ ಇದಾಗಿದೆ.

  5. ಹಿರಿಯರ ಸಹೃದಯ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *